ಕುಣಾಲ್ ಕೊ*ಲೆ ಕೇಸ್ : ಯಾರು ಈ ಲೇಡಿ ಡಾನ್‌ ಜಿಕ್ರಾ.?

Untitled design 2025 04 18t152406.730

ದೆಹಲಿಯ ಸೀಲಂಪುರ್‌ ಪ್ರದೇಶದಲ್ಲಿ 17 ವರ್ಷದ ಹುಡುಗ ಕುಣಾಲ್‌ನ ಕೊಲೆ ದೇಶಾದ್ಯಂತ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.  ಶುಕ್ರವಾರ ಬೆಳಿಗ್ಗೆ ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ಉದ್ವಿಗ್ನತೆ ಭುಗಿಲೆದ್ದಿತು. ಸ್ಥಳೀಯರು ನ್ಯಾಯಕ್ಕಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ರೇಖಾ ಗುಪ್ತಾ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

ಘಟನೆ ವಿವರ

ಗುರುವಾರ ಸಂಜೆ 7:38 ರ ಸುಮಾರಿಗೆ ಹಾಲು ಖರೀದಿಸಲು ಮನೆಯಿಂದ ಹೊರಗೆ ಹೋದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆತನನ್ನು ಕ್ರೂರವಾಗಿ ಇರಿದು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ನೀಡಲಾಗುತ್ತಿದ್ದಾಗ ಆತ ಸಾವನ್ನಪ್ಪಿದ್ದಾನೆ.

ಘಟನೆ ಬೆಳಕಿಗೆ ಬಂದ ನಂತರ ದೆಹಲಿ ಪೊಲೀಸರು ತನಿಖೆ ಆರಂಭಿದ್ದರು. ಕುನಾಲ್ ಹತ್ಯೆಯ ಬಗ್ಗೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ ಎಂದು ಸಿಎಂ ಗುಪ್ತಾ ಭರವಸೆ ನೀಡಿ, “ನ್ಯಾಯ ಒದಗಿಸಲಾಗುವುದು” ಎಂದು ಭರವಸೆ ನೀಡಿದರು. 

ಕುನಾಲ್ ಹತ್ಯೆಯ ತನಿಖೆ ನಡೆಯುತ್ತಿರುವ ಮಧ್ಯೆ, ಜಿಕ್ರಾ ಮತ್ತು ಆಕೆಯ ಸಹೋದರ ಸಾಹಿಲ್ ಎಂಬ ಇಬ್ಬರು ವ್ಯಕ್ತಿಗಳ ಹೆಸರುಗಳು ಕೊಲೆಯ ಪ್ರಮುಖ ಆರೋಪಿಗಳಾಗಿ ಬೆಳಕಿಗೆ ಬಂದಿದೆ.

‘ಲೇಡಿ ಡಾನ್’ ಜಿಕ್ರಾ ಯಾರು?

ಪೊಲೀಸರ ಪ್ರಕಾರ, ಈ ಕೊಲೆಯನ್ನು ‘ಲೇಡಿ ಡಾನ್’ ಮತ್ತು ‘ಬಂದೂಕಾಲಿ’ ಎಂದು ಕರೆಯಲ್ಪಡುವ ಜಿಕ್ರಾ ಮಾಡಿದ್ದಾಳೆ ಎನ್ನಲಾಗಿದೆ. ತನ್ನ ಸಹೋದರನ ಇರಿತಕ್ಕೆ ಸೇಡು ತೀರಿಸಿಕೊಳ್ಳಲು ಅವಳು ಬಯಸಿದ್ದಳು ಮತ್ತು ತನ್ನದೇ ಆದ ಗ್ಯಾಂಗ್ ಅನ್ನು ರಚಿಸಿಕೊಂಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಿಕ್ರಾ ಮತ್ತೊಂದು ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು ಮತ್ತು ಆಕೆಯ ಸಹೋದರ ಸಾಹಿಲ್ ಜರಾಯಮ್ ಕೂಡ ಅಪರಾಧ ಪ್ರಕರಣಗಳಲ್ಲಿ ಹೆಸರು ಮಾಡಿದ್ದನು. ಇತ್ತೀಚೆಗೆ ಪ್ರಕರಣ ದಾಖಲಾಗಿದ್ದ ಕುಖ್ಯಾತ ದರೋಡೆಕೋರ ಹಾಶಿಮ್ ಬಾಬಾನ ಗೆಳತಿ ಅವಳು.

ಜಿಕ್ರಾ ಹೆಚ್ಚು ರೀಲ್ಸ್‌ ವಿಡಿಯೋ ಮಾಡುತ್ತಿದ್ದಳು. ಅವಳು ಪೊಲೀಸ್ ಕಸ್ಟಡಿಯಲ್ಲಿದ್ದಾಗಲೂ ವಿಡಿಯೋಗಳನ್ನು ಮಾಡುತ್ತಿದ್ದಳು. ಅವಳು ಸ್ಥಳೀಯ ಭೂಗತ ಜಗತ್ತಿನ ಪ್ರಸಿದ್ದ ವ್ಯಕ್ತಿಯಾಗಿದ್ದು, ಶಹದ್ರಾದಲ್ಲಿ ಬಂದೂಕುಗಳನ್ನು ಪ್ರದರ್ಶಿಸಲು ಮತ್ತು ಗ್ಯಾಂಗ್ ಅನ್ನು ಮುನ್ನಡೆಸಲು ಕುಖ್ಯಾತಳಾಗಿದ್ದಾಳೆ.

ಆಕೆಯನ್ನು ಬೀದಿಗಳಲ್ಲಿ ಆಗಾಗ್ಗೆ ಕೈಯಲ್ಲಿ ಪಿಸ್ತೂಲು ಹಿಡಿದು ಪುರುಷರೊಂದಿಗೆ ಓಡಾಡುತ್ತಿರುತ್ತಾಳೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಅಲ್ಲದೆ, ಆಕೆಯು ತನ್ನ ಪ್ರದೇಶದಲ್ಲಿ ಹಿಂದೂ ಹುಡುಗರಿಗೆ ನಿಯಮಿತವಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ

ಕುನಾಲ್ ತಂದೆ ಮಾತು

ಕುನಾಲ್ ಅವರ ಪೋಷಕರು ತಮ್ಮ ಮಗನ ಹತ್ಯೆಯಲ್ಲಿ ಜಿಕ್ರಾ ಭಾಗಿಯಾಗಿದ್ದಾರೆ ಮತ್ತು ಕೊಲೆ ಮಾಡಿದ್ದಾಳೆ ಎಂದು ಹೇಳಿದ್ದಾರೆ. “ಅವಕಾಶ ಸಿಕ್ಕರೆ ನಾನು ಅವನನ್ನು ಕೊಲ್ಲುತ್ತೇನೆ ಎಂದು ಅವಳು ಹೇಳುತ್ತಿದ್ದಳು. ಅವಕಾಶ ಸಿಕ್ಕ ತಕ್ಷಣ ಅವರು ನನ್ನ ಮಗುವನ್ನು ಕೊಂದರು” ಎಂದು ಕುನಾಲ್ ಅವರ ತಂದೆ ಹೇಳಿದರು.

“ಕುನಾಲ್‌ಗೆ ಯಾರೊಂದಿಗೂ ದ್ವೇಷವಿರಲಿಲ್ಲ. ಅವನು ಗಿಹರ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಅವನನ್ನು ಕೊಲ್ಲಲಾಯಿತು” ಎಂದು ಅವನ ತಾಯಿ ಹೇಳಿದರು.

 

Exit mobile version