ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯ: ಬೆಂಗಳೂರಿನತ್ತ ಮುಖ ಮಾಡಿದ ದಿಲ್ಲಿ ಮಂದಿ

Untitled design 2025 11 12T131140.709

ದೆಹಲಿ (ನ.12): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ (AQI) ತೀವ್ರವಾಗಿ ಕುಸಿದಿದ್ದು, ‘ಗಂಭೀರ’ ಮಟ್ಟದ 427 ಅಂಕ ತಲುಪಿದೆ. ಪರಿಸರ ಮಾಲಿನ್ಯದಿಂದ ಉಂಟಾದ ಈ ಸ್ಥಿತಿ ದೇಶದ ಜನರಲ್ಲಿ ಆತಂಕ ಹುಟ್ಟಿಸಿದೆ. ಮಾಲಿನ್ಯದಿಂದ ಉಸಿರಾಟಕ್ಕೂ ಕಷ್ಟವಾಗುತ್ತಿರುವ ದೆಹಲಿಗರು ಇದೀಗ ಶುದ್ಧ ಗಾಳಿಯ ಹುಡುಕಾಟದಲ್ಲಿ ಬೆಂಗಳೂರು, ಪುಣೆ, ಮಸ್ಸೂರಿ, ಚೈಲ್, ಕಸೌಲಿ ಮುಂತಾದ ಗಿರಿಧಾಮಗಳತ್ತ ವಲಸೆ ಹೋಗುತ್ತಿದ್ದಾರೆ.

ದೆಹಲಿಯಲ್ಲಿ ಕಳೆದ ವಾರದಿಂದಲೇ ಹೊಗೆ ಮಬ್ಬು ಆವರಿಸಿಕೊಂಡಿದ್ದು,ಕಟ್ಟಡ ನಿರ್ಮಾಣ, ಗಣಿಗಾರಿಕೆ, ಕ್ರಷರ್ ಕಾರ್ಯಗಳು ಸಂಪೂರ್ಣ ನಿಷೇಧಿಸಲಾಗಿದೆ. ಜೊತೆಗೆ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ವಾಹನಗಳಿಗೂ ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶ ಪ್ರವೇಶಕ್ಕೆ ನಿಷೇಧವಿದೆ. ಪರಿಸರದ ಅಪಾಯದ ಮಟ್ಟ ತಲುಪಿರುವುದರಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ.

ದೆಹಲಿಗರು ಬೆಂಗಳೂರಿಗೆ ವಲಸೆ – ಏಕೆ?

ದೆಹಲಿಯ ವಾಯುಮಾಲಿನ್ಯ ವರ್ಷದಿಂದ ವರ್ಷಕ್ಕೆ ವಿಷಮಯವಾಗುತ್ತಲೇ ಬಂದಿದೆ. ಕಳೆದ ವರ್ಷ ದೆಹಲಿ ಇತಿಹಾಸದಲ್ಲಿಯೇ ಅತ್ಯಂತ ಕಳಪೆ 491 AQI ದಾಖಲಾಗಿತ್ತು. ಈ ವರ್ಷವೂ 400ಕ್ಕೂ ಹೆಚ್ಚು ಅಂಕ ದಾಖಲಾದ ಹಿನ್ನೆಲೆಯಲ್ಲಿ ಜನರ ಆರೋಗ್ಯ ತೀವ್ರವಾಗಿ ಹಾನಿಗೊಳಗಾಗಿದೆ.

ಬೆಂಗಳೂರಿನ ಸರಾಸರಿ ವಾಯುಗುಣಮಟ್ಟ 77 AQI, ಅಂದರೆ “ತೃಪ್ತಿದಾಯಕ” ಮಟ್ಟದಲ್ಲಿದೆ. ಕಳೆದ ದಶಕದಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಅತ್ಯಂತ ಕಳಪೆ AQI ಕೇವಲ 101 (2022ರಲ್ಲಿ). ಹೀಗಾಗಿ, ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಹವಾಮಾನ ಎಲ್ಲವೂ ಇರುವ ಬೆಂಗಳೂರು ದೆಹಲಿಗರಿಗೆ ಆಶ್ರಯವಾಗಿದೆ.

ಕೆಲವರು ದೆಹಲಿಯಲ್ಲಿನ ತಮ್ಮ ಆಸ್ತಿ ಮಾರಾಟ ಮಾಡಿ ಶಾಶ್ವತವಾಗಿ ದಕ್ಷಿಣದತ್ತ ವಲಸೆ ಹೋಗುತ್ತಿದ್ದಾರೆ. ಮತ್ತಿತರರು ಚಳಿಗಾಲದ ಸಮಯದಲ್ಲಿ ಮಾತ್ರ ತಾತ್ಕಾಲಿಕವಾಗಿ ಬೆಂಗಳೂರು, ಪುಣೆ ಅಥವಾ ಹೈದರಾಬಾದ್‌ನಲ್ಲಿ ನೆಲೆಸುತ್ತಿದ್ದಾರೆ.

ಬೆಂಗಳೂರಿನತ್ತ ವಲಸೆ: ಪ್ರಮುಖ ಕಾರಣಗಳು
ದೆಹಲಿಯನ್ನು ಬಿಡಲು ಪ್ರಮುಖ ಕಾರಣಗಳು
ದೆಹಲಿಯ ಮಾಲಿನ್ಯ ಎಷ್ಟು?

ದೆಹಲಿಯಂತಹ ನಗರದಿಂದ ಬೆಂಗಳೂರು, ಪುಣೆ, ಹೈದರಾಬಾದ್ ಕಡೆ ವಲಸೆ ಹೆಚ್ಚುತ್ತಿದೆ. ಮಾಲಿನ್ಯ, ಬಿಸಿಲು ಮತ್ತು ಜನಸಂಖ್ಯೆ ಸಾಂದ್ರತೆಯಿಂದ ದೂರವಾಗಲು ಜನರು ತಂಪು ಮತ್ತು ಹಸಿರು ನಗರಗಳತ್ತ ಮುಖ ಮಾಡಿದ್ದಾರೆ.

Exit mobile version