ಇಂದಿನಿಂದ ಜಿಎಸ್‌ಟಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಸಾಮಾನ್ಯರಿಗೆ ಪಡಿಪಾಟಲು!

ಸಣ್ಣ ಅಂಗಡಿಗಳಿಗೆ ಜಿಎಸ್‌ಟಿ ಶಾಕ್: ಹಾಲು, ಚಹಾ ಮಾರಾಟ ಬಂದ್!

0 (14)

ಬೆಂಗಳೂರು: ಕರ್ನಾಟಕದ ಸಣ್ಣ ವರ್ತಕರು, ರಸ್ತೆಬದಿಯ ವ್ಯಾಪಾರಿಗಳು, ಬೇಕರಿ, ಹಾಲಿನ ಅಂಗಡಿಗಳು ಮತ್ತು ಪಾನ್‌ಶಾಪ್‌ಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‌ಟಿ ನೋಟಿಸ್‌ಗಳನ್ನು ನೀಡಿರುವುದನ್ನು ವಿರೋಧಿಸಿ ಇಂದು (ಜುಲೈ 23) ಮತ್ತು ನಾಳೆ (ಜುಲೈ 24) ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಕೆಲವು ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದರೆ, ಇನ್ನು ಕೆಲವರು ಕಪ್ಪು ಪಟ್ಟಿ ಧರಿಸಿ ಸರ್ಕಾರದ ಕ್ರಮಕ್ಕೆ ತಮ್ಮ ವಿರೋಧವನ್ನು ವ್ಯಕ್ತಸಿದ್ದಾರೆ.

ಹಲವು ಬೇಕರಿಗಳು ಇಂದಿನಿಂದಲೇ ಹಾಲು, ಮೊಸರು, ಕಾಫಿ, ಚಹಾ ಮತ್ತಿತರ ವಸ್ತುಗಳ ಮಾರಾಟವನ್ನು ನಿಲ್ಲಿಸಿವೆ. ಜುಲೈ 25ರಂದು ಸಿಗರೇಟ್ ಮತ್ತು ಗುಟ್ಕಾ ಮಾರಾಟವೂ ನಿಲ್ಲುವ ಸಾಧ್ಯತೆ ಇದ್ದು, ಇದರಿಂದ ಗ್ರಾಹಕರಿಗೆ ತೊಂದರೆಯಾಗಲಿದೆ. ಹಾಲು ಮಾರಾಟಕ್ಕೆ ವಿರೋಧವಾಗಿರುವ ಹಿನ್ನೆಲೆಯಲ್ಲಿ, ಹಲವೆಡೆ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ. ಜುಲೈ 25ರಿಂದ ಸಣ್ಣ ವರ್ತಕರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ(ಫ್ರೀಡಂ ಪಾರ್ಕ್‌) ಅನಿರ್ದಿಷ್ಟಾವಧಿಯ ಪ್ರತಿಭಟನೆಗೆ ಮುಂದಾಗಿದ್ದಾರೆ.

ADVERTISEMENT
ADVERTISEMENT

ಕರ್ನಾಟಕ ರಾಜ್ಯ ಬೇಕರಿ ಮತ್ತು ಕಾಂಡಿಮೆಂಟ್ಸ್ ವ್ಯಾಪಾರಿಗಳ ಒಕ್ಕೂಟವು, ತೆರಿಗೆ ಯೋಜನೆಯಡಿ ಕೇವಲ 1% ತೆರಿಗೆ ವಿಧಿಸಬೇಕೆಂದು ಒತ್ತಾಯಿಸಿದೆ. ಒಕ್ಕೂಟದ ಅಧ್ಯಕ್ಷ ಡಿ.ಬಿ. ಪ್ರತಾಪ್ ಶೆಟ್ಟಿ, “ನಾವು ಜಿಎಸ್‌ಟಿ ನೋಟಿಸ್‌ಗಳನ್ನು ವಿರೋಧಿಸುತ್ತಿದ್ದೇವೆ. ಒಂದು ವೇಳೆ ಈ ಬೇಡಿಕೆ ಈಡೇರದಿದ್ದರೆ, ಯುಪಿಐ ಬಳಕೆಯನ್ನು ನಿಲ್ಲಿಸಿ ಕೇವಲ ಹಣದ ವಹಿವಾಟಿಗೆ ಮರಳಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಿರ್ಣಯವು ಆನ್‌ಲೈನ್ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಗ್ರಾಹಕರಿಗೂ ತೊಂದರೆಯಾಗಲಾರಂಭಿಸಿದೆ. ಗೂಗಲ್ ಪೇ, ಪೇಟಿಎಂ, ಫೋನ್‌ಪೇನಂತಹ ಡಿಜಿಟಲ್ ಪಾವತಿಗಳನ್ನು ತ್ಯಜಿಸಿ, “ಕೇವಲ ಹಣ” ಎಂದು ವರ್ತಕರು ಒತ್ತಾಯಿಸುತ್ತಿದ್ದಾರೆ.

ಆದರೆ, ಈ ಹೋರಾಟದ ನಡುವೆ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ. ಕೆಲವು ಸಂಘಟನೆಗಳು ಜುಲೈ 23 ಮತ್ತು 24ರ ಮುಷ್ಕರದಲ್ಲಿ ಭಾಗವಹಿಸದೇ, ಕೇವಲ ಜುಲೈ 25ರ ಸ್ವಾತಂತ್ರ್ಯ ಉದ್ಯಾನವನದ ಪ್ರತಿಭಟನೆಯಲ್ಲಿ ಮಾತ್ರ ಭಾಗಿಯಾಗಲಿವೆ ಎಂದು ತಿಳಿಸಿವೆ.

ಮುಖ್ಯಾಂಶಗಳು:
Exit mobile version