ವಂಚನೆ ಪ್ರಕರಣ: ಶಿವಾನಂದ ನೀಲಣ್ಣನವರ್​​ಗೆ ಇಡಿ ಶಾಕ್..ಬೆಳಗಾವಿಯಲ್ಲಿ ಮೂರು ಕಡೆ ದಾಳಿ

Your paragraph text (33)

ಬೆಳಗಾವಿ, ಆಗಸ್ಟ್ 7: ಸಾವಿರಾರು ಹೂಡಿಕೆದಾರರಿಗೆ (Investors) ಕೋಟ್ಯಂತರ ರೂಪಾಯಿ ವಂಚನೆ (Fraud) ಮಾಡಿದ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ (Shivam Associates) ಕಂಪನಿಯ ಮಾಲೀಕ ಶಿವಾನಂದ ನೀಲಣ್ಣವರ್ (Shivanand Neelannavar) ಅವರಿಗೆ ಜಾರಿ ನಿರ್ದೇಶನಾಲಯ (Enforcement Directorate – ED) ಶುಕ್ರವಾರ ಬಿಗ್ ಶಾಕ್ ನೀಡಿದೆ. 40,700 ಕ್ಕೂ ಹೆಚ್ಚು ಹೂಡಿಕೆದಾರರಿಂದ ಸುಮಾರು 2,400 ಕೋಟಿ ರೂ. ವಂಚನೆ ಮಾಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ED ಅಧಿಕಾರಿಗಳು ಬೆಳಗಾವಿ (Belagavi) ಜಿಲ್ಲೆಯ ಮೂರು ಪ್ರಮುಖ ಸ್ಥಳಗಳ ಮೇಲೆ ದಿಢೀರ್ ದಾಳಿ (Raid) ನಡೆಸಿದ್ದಾರೆ.

ಮೂರು ಕಡೆಗಳಲ್ಲಿ ED ದಾಳಿ

ಮಂಗಳೂರು (Mangaluru) ಮತ್ತು ಗೋವಾ (Goa) ಘಟಕಗಳಿಂದ ಆಗಮಿಸಿರುವ ED ಅಧಿಕಾರಿಗಳ ತಂಡವು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದೆ. ದಾಳಿಗೆ ಒಳಗಾದ ಸ್ಥಳಗಳು

  1. ಶಿವಬಸವನಗರ (Shivabasavanagar): ಶಿವಾನಂದ ನೀಲಣ್ಣವರ್ ಅವರ ನಿವಾಸವಿರುವ ಎಂ.ಎಸ್. ಟವರ್ (MS Tower) ಅಪಾರ್ಟ್ಮೆಂಟ್.

  2. ಬಡಕುಂದ್ರಿ (Badakundri): ಬೆಳಗಾವಿ ಜಿಲ್ಲೆಯ ಬಡಕುಂದ್ರಿ ಗ್ರಾಮದಲ್ಲಿರುವ ಅವರ ಮತ್ತೊಂದು ನಿವಾಸ.

  3. ಚಿಕ್ಕೋಡಿ (Chikkodi): ಅವರ ಬಿಸಿನೆಸ್ ಪಾರ್ಟ್ನರ್ (Business Partner) ಸುಭಾಷ್ ನಂದರಗಿ (Subhash Nandargi) ಅವರ ಮನೆ.

ಈ ಮೂರೂ ಸ್ಥಳಗಳಲ್ಲಿ ED ಅಧಿಕಾರಿಗಳು ದಾಖಲೆಗಳು (Documents) ಮತ್ತು ಆಸ್ತಿ ವಿವರಗಳನ್ನು (Property Details) ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ದಾಳಿಯ ವೇಳೆ ಶಿವಾನಂದ ನೀಲಣ್ಣವರ್ ಅವರ ಪತ್ನಿ ಸಂಗೀತಾ (Sangeetha) ಮತ್ತು ಬಿಸಿನೆಸ್ ಪಾರ್ಟ್ನರ್ ಸುಭಾಷ್ ಅವರನ್ನು ವಿಚಾರಣೆಗೆ (Interrogation) ಒಳಪಡಿಸಲಾಗಿದೆ. ಪ್ರಮುಖ ಬ್ಯಾಂಕ್ ಖಾತೆಗಳ ವಹಿವಾಟುಗಳು, ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿದ ಹಣದ ವಿವರಗಳು, ಹಾಗೂ ಅಕ್ರಮವಾಗಿ ವರ್ಗಾವಣೆಯಾದ ಹಣದ (Money Transfer) ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.

ಪ್ರಕರಣದ ಹಿನ್ನೆಲೆ

ಶಿವಂ ಅಸೋಸಿಯೇಟ್ಸ್ ಕಂಪನಿಯು ಹೆಚ್ಚಿನ ಬಡ್ಡಿ (High Interest) ನೀಡುವ ಆಮಿಷವೊಡ್ಡಿ ಸಾವಿರಾರು ಮಂದಿಯಿಂದ ಹಣ ಸಂಗ್ರಹಿಸಿತ್ತು. ಆರಂಭದಲ್ಲಿ ನಿಯಮಿತವಾಗಿ ಬಡ್ಡಿ ನೀಡುತ್ತಿದ್ದ ಕಂಪನಿಯು, ಕೆಲವು ತಿಂಗಳುಗಳ ಬಳಿಕ ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ನಿರಾಕರಿಸಿತ್ತು. ಈ ಹಿನ್ನೆಲೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ (Malmaruti Police Station) ಪ್ರಕರಣ ದಾಖಲಾಗಿತ್ತು.

ಕಳೆದ ಮೇ 15 ರಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಕಂಪನಿಯ ಮೇಲೆ ಮೊದಲ ಹಂತದ ದಾಳಿ ನಡೆಸಿತ್ತು. ಅಕ್ರಮವಾಗಿ ಠೇವಣಿ ಸಂಗ್ರಹ (Illegal Deposit Collection) ಮತ್ತು ಆಮಿಷವೊಡ್ಡಿ ಹಣ ಸಂಗ್ರಹಿಸುತ್ತಿರುವ ಆರೋಪದಡಿ ಪ್ರಕರಣ ದಾಖಲಿಸಿ, ಮಾಲೀಕ ಶಿವಾನಂದ ನೀಲಣ್ಣವರ್ ಅವರನ್ನು ಬಂಧಿಸಲಾಗಿತ್ತು. ಅವರು ಪ್ರಸ್ತುತ ಜಾಮೀನಿನ ಮೇಲೆ (Bail) ಹೊರಬಂದಿದ್ದಾರೆ.

ತನಿಖೆಯಲ್ಲಿ ಬಹಿರಂಗವಾದ ಅಂಶಗಳು

ಸಿಐಡಿ (CID) ನಡೆಸಿದ ತನಿಖೆಯಲ್ಲಿ ಅಚ್ಚರಿಯ ಅಂಶಗಳು ಬಹಿರಂಗಗೊಂಡಿವೆ. ಈ ಕಂಪನಿಯು ಸುಮಾರು 40,700 ಕ್ಕೂ ಹೆಚ್ಚು ಹೂಡಿಕೆದಾರರಿಂದ 2,400 ಕೋಟಿ ರೂ. ಹಣವನ್ನು ಸಂಗ್ರಹಿಸಿತ್ತು. ಈ ಪೈಕಿ ಸುಮಾರು 540 ಕೋಟಿ ರೂ. ಹಣವನ್ನು ಷೇರು ಮಾರುಕಟ್ಟೆಯಲ್ಲಿ (Stock Market) ಹೂಡಿಕೆ ಮಾಡಲಾಗಿತ್ತು. ಆದರೆ ಷೇರು ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಸುಮಾರು 170 ಕೋಟಿ ರೂ. ನಷ್ಟವಾಗಿದೆ (Loss) ಎಂದು ಸಿಐಡಿ ವರದಿಯಲ್ಲಿ ತಿಳಿಸಿದೆ.

ಉಳಿದ ಹಣವನ್ನು ಆಸ್ತಿ ಖರೀದಿ (Property Purchase), ಬ್ಯಾಂಕ್ ಠೇವಣಿ (Bank Deposits) ಮತ್ತು ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲಾಗಿದೆ. ಪ್ರಕರಣದ ಜಟಿಲತೆಯನ್ನು ಗಮನಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದರು. ಸಿಐಡಿ ತನಿಖೆ ಮುಂದುವರಿದಿರುವ ಬೆನ್ನಲ್ಲೇ ಇದೀಗ ED ಅಧಿಕಾರಿಗಳು ಕಣಕ್ಕಿಳಿದಿರುವುದು ಪ್ರಕರಣಕ್ಕೆ ಹೊಸ ತಿರುವು (New Turn) ನೀಡಿದೆ.

Exit mobile version