ಬೆಂಗಳೂರು: ಭಾರತದ ಹಲವು ರಾಜ್ಯಗಳಲ್ಲಿ ತೀವ್ರ ಉಷ್ಣ ಮಾರುತದ ಹಾವಳಿ ಮುಂದುವರಿದಿದ್ದು, ಮೇ 18 ರವರೆಗೆ ಈ ಪರಿಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜಸ್ಥಾನ, ದಿಲ್ಲಿ, ಪಂಜಾಬ್ ಮತ್ತು ಹರ್ಯಾಣದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುವ ಭೀತಿ ವ್ಯಕ್ತವಾಗಿದೆ.
ಕರ್ನಾಟಕದಲ್ಲೂ ಈ ಉಷ್ಣ ಮಾರುತದ ಪರಿಣಾಮ ಸ್ಪಷ್ಟವಾಗಿ ಕಾಣುತ್ತಿದೆ. ಉತ್ತರ ಕರ್ನಾಟಕದ ಬೀದರ್, ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲ ಝಳ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ತೀರ ಪ್ರದೇಶಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲ ಝಳದ ಜೊತೆಗೆ ಆರ್ದ್ರತೆಯ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗುವ ಭೀತಿ ಇದೆ. ಇದರಿಂದ ಜನಸಾಮಾನ್ಯರು ವಿಶೇಷವಾಗಿ ಅನಾನುಕೂಲಕ್ಕೆ ಒಳಗಾಗುವ ಸಾಧ್ಯತೆಯಿದೆ.
ಕರಾವಳಿಗೆ ವಿಶೇಷ ಎಚ್ಚರಿಕೆ ಕರಾವಳಿ ಭಾಗಗಳಲ್ಲಿ ಬಿಸಿಲ ಝಳದೊಂದಿಗೆ ಆರ್ದ್ರತೆ ಹೆಚ್ಚಾದ್ದರಿಂದ ಶರೀರದಿಂದ ಬೆವರು ಬಸಿಯುವುದು ಕಡಿಮೆಯಾಗಿ, ಉಷ್ಣಾಂಶ ಸಹಿಸುವುದು ಕಷ್ಟವಾಗುತ್ತದೆ. ಮಧ್ಯಾಹ್ನ 12 ರಿಂದ ಮೂರು ಗಂಟೆಯವರೆಗೆ ಹೊರಗಡೆ ತಿರುಗಾಡುವುದನ್ನು ಕನಿಷ್ಠಗೊಳಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
🚨 India is set to face a massive heatwave. STAY SAFE!
🚨 India is set to face a massive heatwave. STAY SAFE!
(India Today) pic.twitter.com/bLNAjLcPVG
— Indian Tech & Infra (@IndianTechGuide) May 14, 2026
ಮಳೆ ನಿರೀಕ್ಷೆ ಆದರೆ ಮೇ 16 ರ ನಂತರ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಮಳೆಯು ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಸೀಮಿತ ಪ್ರಮಾಣದಲ್ಲಿ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸಲಹೆಗಳು:
- ಹಗಲು ಹೊತ್ತಿನಲ್ಲಿ ಹೆಚ್ಚು ನೀರು ಕುಡಿಯಿರಿ
- ಬಿಸಿಲಿನಲ್ಲಿ ಕೆಲಸ ಮಾಡುವವರು ತಲೆಗೆ ಟೋಪಿ ಅಥವಾ ತುಂಡು ಬಳಸಿ
- ವೃದ್ಧರು ಮತ್ತು ಮಕ್ಕಳನ್ನು ಬಿಸಿಲಿನಿಂದ ರಕ್ಷಿಸಿ
- ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಿ
ಈ ಉಷ್ಣ ಮಾರುತದ ಹಾವಳಿಯು ರೈತರ ಮೇಲೂ ಪರಿಣಾಮ ಬೀರಬಹುದು. ತೋಟಗಾರಿಕೆ ಬೆಳೆಗಳು ಮತ್ತು ಜಾನುವಾರುಗಳ ಆರೋಗ್ಯದ ಬಗ್ಗೆ ಕೃಷಿ ಇಲಾಖೆಯೂ ಎಚ್ಚರಿಕೆ ನೀಡಿದೆ.
ಬೇಸಿಗೆಯ ಈ ಕೊನೆಯ ಹಂತದಲ್ಲಿ ಜನರು ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ. ಮೇ 18 ರ ನಂತರ ವಾತಾವರಣ ಸ್ವಲ್ಪ ಸುಧಾರಣೆಯಾಗುವ ನಿರೀಕ್ಷೆಯಿದೆ ಎಂದು ವಿಶ್ಲೇಶಕರು ತಿಳಿಸಿದ್ದಾರೆ.
