ಪ್ರೀತಿಗೆ ಪೋಷಕರೇ ವಿಲನ್: ಗಂಡನ ಮನೆಯಿಂದ ಮಗಳನ್ನೇ ಕಿಡ್ನ್ಯಾಪ್ ಮಾಡಿದ ತಂದೆ

Untitled design 2025 06 15t200853.626

ಹುಬ್ಬಳ್ಳಿ: ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ ಪೋಷಕರು, ತಮ್ಮ ಮಗಳನ್ನು ಪತಿಯ ಮನೆಯಿಂದ ಬಲವಂತವಾಗಿ ಕರೆದುಕೊಂಡು ಹೋಗಿರುವ ಘಟನೆ ಹುಬ್ಬಳ್ಳಿಯ ಸದಾಶಿವನಗರದಲ್ಲಿ ನಡೆದಿದೆ. ಆದರೆ, ನವನಗರ ಠಾಣೆ ಪೊಲೀಸರ ಮಧ್ಯಪ್ರವೇಶದಿಂದ ಪತ್ನಿ ಮತ್ತು ಪತಿ ಒಂದಾಗಿದ್ದಾರೆ.

ನಿರಂಜನ್ ಎಂಬುವವರು ಕ್ಯಾಬ್ ಚಾಲಕನಾಗಿ ಮತ್ತು ಓಎಪ್‌ಕೆ ಕೇಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಷ್ಮಿತಾ ಮತ್ತು ನಿರಂಜನ್‌ರ ಕುಟುಂಬಗಳು ಐದು ವರ್ಷಗಳ ಹಿಂದೆ ಹುಬ್ಬಳ್ಳಿಯ ರೇಣುಕಾ ನಗರದಲ್ಲಿ ವಾಸವಾಗಿದ್ದವು. ಒಂದೇ ಪ್ರದೇಶದಲ್ಲಿ ವಾಸವಿದ್ದರಿಂದ ಇಬ್ಬರೂ ಒಬ್ಬರನ್ನೊಬ್ಬರಿಗೆ ಆರಂಭದಲ್ಲಿ ಪರಿಚಯವಿರಲಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶಗಳ ಮೂಲಕ ಸ್ನೇಹ ಆರಂಭವಾಯಿತು. ಕ್ರಮೇಣ ಸ್ನೇಹ ಪ್ರೀತಿಯಾಗಿ ಬದಲಾಯಿತು. ಈ ವಿಷಯ ಸುಷ್ಮಿತಾ ತಂದೆ-ತಾಯಿಗೆ ತಿಳಿದಾಗ, ಜಾತಿ ಬೇರೆ ಬೇರೆ ಆಗಿದ್ದರಿಂದ ಅವರು ವಿರೋಧಿಸಿದರು.

ADVERTISEMENT
ADVERTISEMENT

ಸುಷ್ಮಿತಾ ಪೋಷಕರು ಆಕೆಗೆ ಬೇರೊಬ್ಬರ ಜೊತೆ ಮದುವೆ ಮಾಡಲು ಮುಂದಾದಾಗ, ಆಕೆ ನಿರಂಜನ್‌ನೇ ಮದುವೆಯಾಗುವೆ ಎಂದು ಹಠ ಹಿಡಿದಳು. ಕೊನೆಗೆ, ತವರು ಮನೆಯನ್ನು ಬಿಟ್ಟು ಬಂದ ಸುಷ್ಮಿತಾ, ನಿರಂಜನ್‌ನನ್ನು ಗದಗದಲ್ಲಿ ಮದುವೆಯಾದಳು. ಇದೇ ವೇಳೆ ಸುಷ್ಮಿತಾ ಕಾಣೆಯಾದ ಬಗ್ಗೆ ಆಕೆಯ ಪೋಷಕರು ನವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಒಂದೂವರೆ ತಿಂಗಳು ಬೇರೊಡಲೆ ಇದ್ದ ಈ ಜೋಡಿ, ನಂತರ ಠಾಣೆಗೆ ಬಂದಿತ್ತು. ಸುಷ್ಮಿತಾ ತಾಯಿಯ ಆರೋಗ್ಯ ಸರಿಯಿಲ್ಲದ್ದರಿಂದ ಕೆಲ ದಿನ ಇರಿಕೊಂಡು ಕಳಿತಿಸುವುದಾಗಿ ಹೇಳಿ, ಆಕೆಯನ್ನು ಪೋಷಕರು ಕರೆದುಕೊಂಡು ಹೋಗಿದ್ದರು. ಆದರೆ, ಎರಡು ವರ್ಷಗಳ ಕಾಲ ಸುಷ್ಮಿತಾ ಎಲ್ಲಿದ್ದಾಳೆಂದು ನಿರಂಜನ್‌ಗೆ ಗೊತ್ತಿರಲಿಲ್ಲ.

ನಿರಂಜನ್ ರೇಣುಕಾ ನಗರವನ್ನು ಬಿಟ್ಟು ಸದಾಶಿವನಗರಕ್ಕೆ ಸ್ಥಳಾಂತರಗೊಂಡರು. ಜೂನ್ 14ರಂದು, ಸುಷ್ಮಿತಾ ಆತನ ಮನೆಗೆ ಬಂದಳು. ಈ ಸುದ್ದಿ ತಿಳಿದ ಸುಷ್ಮಿತಾ ತಂದೆ-ತಾಯಿ, ನಿರಂಜನ್ ಮನೆಗೆ ಧಾವಿಸಿ ಆಕೆಯನ್ನು ಥಳಿಸಿ ಕರೆದುಕೊಂಡು ಹೋದರು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರೀತಿಸಿ ಮದುವೆಯಾದ ಜೋಡಿಯನ್ನು ಬೇರ್ಪಡಿಸಿದ ಪೋಷಕರ ವಿರುದ್ಧ ಸುಷ್ಮಿತಾ, ನಿರಂಜನ್‌ ಜೊತೆಗೇ ಬದುಕುವೆ ಎಂದು ತೀರ್ಮಾನಿಸಿದಳು. ಈ ಬಗ್ಗೆ ತಡೆಯಲು ಹೋದ ನಿರಂಜನ್‌ಗೆ, ಸುಷ್ಮಿತಾ ಪೋಷಕರು ಬೆದರಿಕೆ ಹಾಕಿದ್ದರು.

ನಿರಂಜನ್ ರಕ್ಷಣೆಗಾಗಿ ನವನಗರ ಠಾಣೆಯ ಮೆಟ್ಟಿಲೇರಿದ್ದ. ಪೊಲೀಸರು ಸುಷ್ಮಿತಾ ಪೋಷಕರು ಮತ್ತು ನಿರಂಜನ್‌ನನ್ನ ಕರೆಸಿ ವಿಚಾರಣೆ ನಡೆಸಿದರು. ಇಬ್ಬರ ಪೋಷಕರೊಂದಿಗೆ ಸಮಾಲೋಚನೆ ನಡೆಸಿದ ಪೊಲೀಸರು, ಸುಷ್ಮಿತರನ್ನು ಗಂಡನ ಮನೆಗೆ ಕಳುಹಿಸಲು ಒಪ್ಪಿಗೆ ಪಡೆದರು. ಯಾವುದೇ ದೂರು ದಾಖಲಾಗದೆ, ನಿರಂಜನ್ ತನ್ನ ಪತ್ನಿಯನ್ನ ಕರೆದುಕೊಂಡು ಹೋಗಿದ್ದಾನೆ.

Exit mobile version