ಕರ್ನೂಲು ಬಸ್ ಅಗ್ನಿ ದುರಂತ: ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ಸಜೀವ ದಹನ

Untitled design 2025 10 24t110357.192

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ (ಅ.25) ಮುಂಜಾನೆ 3.35 ಗಂಟೆ ಸುಮಾರಿಗೆ ಸಂಭವಿಸಿದ ಖಾಸಗಿ ಬಸ್‌ನ ಅಗ್ನಿ ದುರಂತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಈ ದುರಂತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಮೂಲದ ಗೊಳ್ಳ ರಮೇಶ್ ಅವರ ಕುಟುಂಬದ ನಾಲ್ವರು ದಂಪತಿ ಮತ್ತು ಇಬ್ಬರು ಮಕ್ಕಳುಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್‌ನ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಸುಮಾರು 42 ಮಂದಿ ಪ್ರಯಾಣಿಕರು ಇದ್ದರು. ಕರ್ನೂಲು ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಬಸ್ ವಿರುದ್ಧ ದಿಕ್ಕಿನಿಂದ ಬಂದ ಬೈಕ್‌ಗೆ ಡಿಕ್ಕಿ ಹೊಡೆಯಿತು. ಬೈಕ್ ಬಸ್‌ನ ಕೆಳಗೆ ಸಿಲುಕಿ ಸುಮಾರು 400 ಮೀಟರ್ ಎಳೆದುಕೊಂಡು ಹೋಗಿತು, ಇದರಿಂದ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿಗೆ ಕಾರಣವಾಯಿತು. ಕ್ಷಣಮಾತ್ರದಲ್ಲಿ ಬೆಂಕಿ ಬಸ್‌ಗೆ ವ್ಯಾಪಿಸಿತು. ಚಾಲಕ ಮತ್ತು ಸಹಾಯಕ ಚಾಲಕ ಬೆಂಕಿಯನ್ನು ಕಂಡು ತಕ್ಷಣ ಓಡಿಹೋಗಿದ್ದಾರೆ, ಆದರೆ ರಾತ್ರಿಯ ಸಮಯದಲ್ಲಿ ಮಲಗಿದ್ದ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದಾಗಿ 20ಕ್ಕೂ ಹೆಚ್ಚು ಮಂದಿ ಬಸ್‌ನೊಳಗೆ ಸಿಲುಕಿ ಸಜೀವ ದಹನಗೊಂಡರು.

ಗೊಳ್ಳ ರಮೇಶ್ (45), ಪತ್ನಿ ಲಕ್ಷ್ಮೀ (40), ಮತ್ತು ಇವರ ಇಬ್ಬರು ಮಕ್ಕಳಾದ ಸಾಯಿ (12) ಮತ್ತು ಶ್ರೀಯಾ (8) ಈ ದುರಂತದಲ್ಲಿ ಮೃತರಾದವರು. ಈ ಕುಟುಂಬವು ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಸವಾಗಿತ್ತು. ರಮೇಶ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ತಮ್ಮ ಮೂಲ ಊರಾದ ನೆಲ್ಲೂರಿಗೆ ದೀಪಾವಳಿ ರಜೆಗಾಗಿ ತೆರಳಿದ್ದರು.

Exit mobile version