ಮುಂದಿನ 4 ದಿನ ರಾಜ್ಯದಲ್ಲಿ ಗಡಗಡ ಚಳಿ: ಹವಾಮಾನ ಇಲಾಖೆಯಿಂದ ಎಚ್ಚರಿಕೆ

Untitled design 2026 01 27T080941.085

ಬೆಂಗಳೂರು: ಕರ್ನಾಟಕದಾದ್ಯಂತ ಚಳಿಯ ತೀವ್ರತೆ ಹೆಚ್ಚುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗಲಿದ್ದು, ಚಳಿಯ ತೀವ್ರತೆ ಹೆಚ್ಚಾಗಲಿದೆ.

ಹವಾಮಾನ ಇಲಾಖೆಯ ಮುನ್ಸೂಚನೆ:

ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಮುಂಜಾನೆ ಮತ್ತು ತಡರಾತ್ರಿ ತಾಪಮಾನದಲ್ಲಿ ಕಡಿಮೆಯಾಗುತ್ತದೆ. ಮುಂದಿನ 3 ರಿಂದ 4 ದಿನಗಳವರೆಗೆ ಚಳಿಯ ಪ್ರಭಾವ ಜೋರಾಗಿರಲಿದ್ದು, ಮುಂಜಾನೆಯ ಅವಧಿಯಲ್ಲಿ ಅಲ್ಲಲ್ಲಿ ದಟ್ಟವಾದ ಮಂಜಿನ ವಾತಾವರಣ ಕಂಡುಬರುವ ಸಾಧ್ಯತೆಯಿದೆ. ಇದು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ದೃಷ್ಟಿಗೋಚರತೆ (Visibility) ಕಡಿಮೆ ಮಾಡಬಹುದು, ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ ಎಂದು ಹವಾಮಾನ ಇಲಾಕೆ ತಿಳಿಸಿದೆ.

ಪ್ರಮುಖ ನಗರಗಳ ಸ್ಥಿತಿಗತಿ:

ರಾಜ್ಯ ರಾಜಧಾನಿಯಲ್ಲಿ ಮುಂಜಾನೆ ಮಂಜು ಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಇನ್ನೂ ಮಡಿಕೇರಿ, ಹಾಸನ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಲಿದೆ. ಕರಾವಳಿ ಭಾಗದಲ್ಲಿ ಮಂಗಳೂರು ಮತ್ತು ಕಾರವಾರದಲ್ಲಿ ತಾಪಮಾನವು 31 ಡಿಗ್ರಿ ಆಸುಪಾಸಿನಲ್ಲಿದ್ದರೂ, ರಾತ್ರಿಯ ವೇಳೆ ತಂಪು ಗಾಳಿ ಬೀಸಲಿದೆ. ಹಾವೇರಿ ಮತ್ತು ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಮಧ್ಯಾಹ್ನ ಕೊಂಚ ಬಿಸಿಲ ತಾಪವಿದ್ದರೂ, ರಾತ್ರಿ ವೇಳೆ ಚಳಿ ಹೆಚ್ಚಿರಲಿದೆ.

ರಾಜ್ಯದಲ್ಲಿ ಈ ಬಾರಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಇದು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ತಾಪಮಾನವಾಗಿದೆ. ಮಲೆನಾಡು ಭಾಗದ ಕೊಡಗು (ಮಡಿಕೇರಿ) ಮತ್ತು ಹಾಸನದಲ್ಲೂ 17 ಡಿಗ್ರಿ ಸೆಲ್ಸಿಯಸ್ ಚಳಿ ಇರಲಿದೆ.

ಚಳಿಯ ತೀವ್ರತೆ ಹೆಚ್ಚಿರುವ ಕಾರಣ ಮಕ್ಕಳು ಮತ್ತು ವಯಸ್ಸಾದವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮುಂಜಾನೆಯ ಮಂಜಿನಿಂದಾಗಿ ಓಡಾಡುವುದು ಕಷ್ಟವಾಗಿರುವುದರಿಂದ ಹೆದ್ದಾರಿಗಳಲ್ಲಿ ಸಂಚರಿಸುವಾಗ ಜಾಗರೂಕತೆ ವಹಿಸುವುದು ಉತ್ತಮ.

ಜಿಲ್ಲೆ ತಾಪಮಾನ (°C) ಜಿಲ್ಲೆ ತಾಪಮಾನ (°C)
ಬೆಂಗಳೂರು 27 – 18 ಮಂಗಳೂರು 31 – 24
ಶಿವಮೊಗ್ಗ 32 – 19 ಮೈಸೂರು 31 – 19
ಮಡಿಕೇರಿ 29 – 17 ಚಿಕ್ಕಬಳ್ಳಾಪುರ 27 – 16
ಹಾಸನ 28 – 17 ಕೋಲಾರ 26 – 16
ಕಲಬುರಗಿ 31 – 21 ಬೆಳಗಾವಿ 29 – 19
ಕನಿಷ್ಠ ತಾಪಮಾನ ದಾಖಲಾಗುವ ಪ್ರದೇಶಗಳು:

ರಾಜ್ಯದಲ್ಲಿ ಈ ಬಾರಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಇದು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ತಾಪಮಾನವಾಗಿದೆ. ಮಲೆನಾಡು ಭಾಗದ ಕೊಡಗು (ಮಡಿಕೇರಿ) ಮತ್ತು ಹಾಸನದಲ್ಲೂ 17 ಡಿಗ್ರಿ ಸೆಲ್ಸಿಯಸ್ ಚಳಿ ಇರಲಿದೆ.

ಸಾರ್ವಜನಿಕರಿಗೆ ಸಲಹೆ:

ಚಳಿಯ ತೀವ್ರತೆ ಹೆಚ್ಚಿರುವ ಕಾರಣ ಮಕ್ಕಳು ಮತ್ತು ವಯಸ್ಸಾದವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮುಂಜಾನೆಯ ಮಂಜಿನಿಂದಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಂಭವವಿರುವುದರಿಂದ ಹೆದ್ದಾರಿಗಳಲ್ಲಿ ಸಂಚರಿಸುವಾಗ ಜಾಗರೂಕತೆ ವಹಿಸುವುದು ಉತ್ತಮ.

Exit mobile version