ಸಿದ್ದರಾಮಯ್ಯ ಬಜೆಟ್ ಜರ್ನಿ!

Befunky collage 2025 03 09t184056.326

ಮಾರುತಿ ಪಾವಗಡ , ಪೊಲಿಟಿಕಲ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಈ ಹಿಂದಿನ ರಾಜಕಾರಣಿಗಳು ಹಾಗೂ ಮುಂದೆ ಬರೋರು ಅಷ್ಟು ಸುಲುಭವಾಗಿ ಬ್ರೇಕ್ ಮಾಡಲಾಗದ ರೇಕಾರ್ಡ್ ಬರೆದುಬಿಟ್ಟಿದ್ದಾರೆ. ಸಿದ್ದರಾಮಯ್ಯ ಆರ್ಥಿಕ ಸಚಿವರಾಗಿ 16 ಬಜೆಟ್ ಗಳನ್ನ ಮಂಡನೆ ಮಾಡಿ ತಮ್ಮ ಇತಿಹಾಸವನ್ನು ತಾವೇ ಅಳಿಸಿ ಹೊಸ ಇತಿಹಾಸ ಬರೆದಿದ್ದಾರೆ.

ADVERTISEMENT
ADVERTISEMENT

ಸಮಾಜವಾದದಿಂದ ಆರಂಭವಾಗಿ ಬಳಿಕ ಕಾಂಗ್ರೆಸ್ ವಾದಿಯಾಗಿ ಮಾರ್ಪಟ್ಟು ಅವರು ಮಂಡಿಸಿದ ಅಷ್ಟು ಬಜೆಟ್‌‌‌ಗಳು ಅತ್ಯುತ್ತಮ ಬಜೆಟ್‌‌‌ಗಳೇ ಇದನ್ನು ಈ ಹಿಂದಿನ ಆರ್ಥಿಕ ಸಚಿವರು ಹೇಳಿದ್ದಾರೆ.ಆರ್ಥಿಕ ತಜ್ನರು ಸಹ ಒಪ್ಪುತ್ತಾರೆ..ಹಾಗಾದ್ರೆ ಸಿದ್ದರಾಮಯ್ಯ 16 ಬಜೆಟ್‌‌‌ಗಳ ಏಳು ಬೀಳುಗಳ ಒಂದು ನೋಟವನ್ನು ಒಮ್ಮೆ ನೋಡಿ ಬೀಡೋಣ..

1994ರಲ್ಲಿ ದೇವೇಗೌಡರು ತಮ್ಮ ಸರ್ಕಾರದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸುವ ಹೊಣೆಗಾರಿಕೆ ಸಿದ್ದರಾಮಯ್ಯ ಹೆಗಲಿಗೆ ಹಾಕಿದ್ರು. ಸಿದ್ದರಾಮಯ್ಯ ವಕೀಲರಾಗಿ,ಹೋರಾಟಗಾರರಾಗಿ,ಈ ಹಿಂದೆ ಸಚಿವರಾಗಿ ಕೆಲಸ ಮಾಡಿದನ್ನು ನೋಡಿದ್ದ ದೇವೇಗೌಡರು ತಮ್ಮ ಪಟಲಂ ಒಳಗೆ ಇರಬೇಕು ಅಂತ ಲೆಕ್ಕಹಾಕಿ ಸಿದ್ದರಾಮಯ್ಯಗೆ ಬಜೆಟ್ ಬ್ಯಾಗ್‌‌‌‌‌‌‌ನ್ನ ಜೋಳಿಗೆ ಹಾಕಿದ್ರು.ಇದನ್ನ ಭಯದಿಂದಲೇ ಸ್ವೀಕರಿಸಿದ್ದ ಸಿದ್ದರಾಮಯ್ಯ ಉತ್ತಮ ಅಧಿಕಾರಿಗಳ ತಂಡ ಇಟ್ಕೊಂಡು ಒಳ್ಳೆಯ ಬಜೆಟ್ ಸಹ ನೀಡಿದ್ರು.

ಸಿದ್ದರಾಮಯ್ಯಗೆ ಆರ್ಥಿಕ ಹೊಣೆಗಾರಿಕೆ ಕೊಟ್ಟಿದನ್ನು ಅಂದಿನ ಒಂದು ಪತ್ರಿಕೆಯಲ್ಲಿ ಬಹು ಲಘುವಾಗಿ ಟೀಕೆ ಮಾಡಿದ್ರು.ಕುರಿ ಲೆಕ್ಕ ಹಾಕೋರು ರಾಜ್ಯದ ಲೆಕ್ಕ ಕೊಡ್ತಾರಾ ಅನ್ನೋ ವ್ಯಂಗ್ಯವಾಗಿ ಲೇಖನ ಬರೆದಿದ್ರಂತೆ.ಈ ಲೇಖನವನ್ನು ಸಿದ್ದರಾಮಯ್ಯ ಚಾಲೇಂಜ್ ಆಗಿ ತೆಗೆದುಕೊಂಡು 1995-96ರಲ್ಲಿ ಮಂಡಿಸಿದರು. 12616 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿ ಸರ್ವರಿಗೂ ಸಮಪಾಲು,ಸಮಬಾಳು ಅನ್ನೋದನ್ನು ಸಾರಿ ಹೇಳಿದ್ರು.ಇಂಗ್ಲೀಷ್ ಪತ್ರಿಕೆಗಳು ಗುಡ್‌‌‌‌‌‌‌‌ ಬಜೆಟ್ ಅನ್ನೋ ಶಿರ್ಷಿಕೆ ಕೊಟ್ಟಿದ್ದು ಸಿದ್ದರಾಮಯ್ಯ ಅವರ ಸಾರ್ಮಾಥ್ಯ ಏನು ಅನ್ನೋದನ್ನ ತೋರಿಸಿರುವುದರ ಜತೆಗೆ ಕುರಿ ಕಾಯೋಣ ಉತ್ತಮ ಬಜೆಟ್ ಕೊಡುವಷ್ಟು ತಿಳಿದುಕೊಂಡಿದ್ದೇನೆ ಅನ್ನೋ ಸಂದೇಶ ರವಾನೆ ಮಾಡಿತ್ತು.

1996-97ರಲ್ಲಿ13,202 ರೂಪಾಯಿಗಳ ಎರಡನೇ ಬಜೆಟ್ ಮಂಡಿಸಿದರು.1997ರಲ್ಲಿ 14,698 ರೂಪಾಯಿಗಳ ಬಜೆಟ್‌‌‌‌‌‌‌‌‌‌‌‌‌‌‌‌‌‌ ಮಂಡಿಸಿದರು.1998ರಲ್ಲಿ 17,007 ರೂಪಾಯಿಗಳ ಬಜೆಟ್‌‌‌‌‌‌‌‌‌‌‌‌‌‌‌‌‌‌ ಅನ್ನು ಸಿದ್ದರಾಮಯ್ಯ ಮಂಡಿಸಿದರು.1999ರಲ್ಲಿ 19,247 ಕೋಟಿ ರೂಪಾಯಿಗಳ ಬಜೆಟ್‌‌‌‌‌‌‌‌‌‌‌‌‌‌‌‌‌‌ ಮಂಡಿಸಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಜನತಾ ಪರಿವಾರದಲ್ಲಿ ನಾಯಕತ್ವ ಸಂಘರ್ಷ ಶುರುವಾಗಿ 1999ರಲ್ಲಿ ಎಸ್ ಎಂ ಕೃಷ್ಣ,ಖರ್ಗೆ ಆರ್ಭಟದ ಜತೆಗೆ ಜನತಾ ಪರಿವಾರದ ಒಡಕಿನಿಂದ ಕಾಂಗ್ರೆಸ್ ನಾಗಲೋಟದ ಗೆಲುವು ಸಾಧಿಸಿತು.ಸ್ವತ: ಸಿದ್ದರಾಮಯ್ಯ ಆ ಚುನಾವಣೆಯಲ್ಲಿ ಸೋಲು ಕಂಡ್ರು.

2004ರಲ್ಲಿ ಮತ್ತೆ ಸಿದ್ದರಾಮಯ್ಯ ನಾಯಕತ್ವದಲ್ಲಿ ಜೆಡಿಎಸ್ 54 ಸ್ಥಾನಗಳನ್ನು ಗೆದ್ದು ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು.ಆಗ ಮತ್ತೆ ಸಿದ್ದರಾಮಯ್ಯ ಡಿಸಿಎಂ ಹುದ್ದೆ ಜತೆಗೆ ಆರ್ಥಿಕ ಇಲಾಖೆಯ ಜವಾಬ್ದಾರಿ ವಹಿಸಿಕೊಂಡರು.2005 ರಲ್ಲಿ ಮಂಡಿಸಿದ 36,209 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದರು.2006ರಲ್ಲಿ 43,435 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದರು.ಬಳಿಕ ಸಿದ್ದರಾಮಯ್ಯ ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಡಿಸಿಎಂ ಸ್ಥಾನದಿಂದ ಕಿತ್ತು ಹಾಕಿದ್ರು ಜತೆಗೆ ಜೆಡಿಎಸ್ ಪ್ರಾಥಮಿಕ ಸದಸ್ಯ ಸ್ಥಾನದಿಂದ ಕಿಕ್ ಔಟ್ ಮಾಡಿದ್ರು.

ಬಳಿಕ ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿದ್ರು ಆರ್ಥಿಕ ಸಂಪನ್ಮೂಲ ಕೊರತೆಯಿಂದ ಬೆಳೆಸಲು ಸಾಧ್ಯವಾಗಲಿಲ್ಲ ಹೀಗಾಗಿ ಪಕ್ಷವನ್ನ ಕಾಂಗ್ರೆಸ್ ಜತೆ ವಿಲೀನ ಮಾಡಿ ಕಾಂಗ್ರೆಸ್‌‌‌ನಲ್ಲಿ ನೆಲೆ ಕಂಡುಕೊಳ್ಳುವ ಕೆಲಸ ಮಾಡಿದರು.2007ರಲ್ಲಿ ಕಾಂಗ್ರೆಸ್‌‌‌ನಲ್ಲಿ ರಾಜಕಾರಣ ಶುರು ಮಾಡಿ ಆದಷ್ಟು ಬೇಗ ಇತರೆ ನಾಯಕರಿಗಿಂತಲೂ ಪ್ರಭಾವಿ ನಾಯಕರಾದ್ರೂ ಅದ್ರಲ್ಲೂ ಹೈಕಮಾಂಡ್ ಸೂಚನೆ ಮೇರೆಗೆ ಮಲ್ಲಿಕಾರ್ಜುನ ಖರ್ಗೆ ದೆಹಲಿ ಪಾಲಿಟಿಕ್‌‌‌ಸ್ಸ್ ಹೋಗಿದ್ದರಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಲೈನ್ ಕ್ಲಿಯರ್ ಆಗಿತ್ತು.

ಈ ನಡುವೆ ಅಹಿಂದ ಸಮುದಾಯ ಸಿದ್ದರಾಮಯ್ಯ ಜತೆ ಸಂಪೂರ್ಣವಾಗಿ ನಿಂತಿದ್ದರಿಂದ ಸಿದ್ದರಾಮಯ್ಯ ರಾಜ್ಯದಲ್ಲಿ ಮಾಸ್ ಲೀಡರ್ ಆಗಿ ಮಾರ್ಪಾಡಾಗಿ ವಿಪಕ್ಷ ನಾಯಕನ ಸ್ಥಾನವೂ ಒಲಿದು ಬಂತು. ನಂತರ ಆನೆ ನಡೆದಿದ್ದೇ ದಾರಿ ಅನ್ನೋ ರೀತಿಯಲ್ಲಿ ಸಿದ್ದರಾಮಯ್ಯ ಮುಟ್ಟಿದೆಲ್ಲ ಚಿನ್ನವಾಯಿತು.2012ರಲ್ಲಿ ಸಿದ್ದರಾಮಯ್ಯ ಅವರನ್ನು ಸದನದಲ್ಲಿ ಕೆಣಕಿದ ರೆಡ್ಡಿ ವಿರುದ್ಧ ಬೆಂಗಳೂರಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿ ಇದ್ದ ವರ್ಚಸ್ಸನ್ನ ದುಪ್ಪಟ್ಟು ಮಾಡಿಕೊಂಡ್ರು.

2013ರಲ್ಲಿ ನಡೆದ ಚುನಾವಣೆಯ ಡಾ ಜಿ ಪರಮೇಶ್ವರ್ ನೇತೃತ್ವದಲ್ಲಿ ನಡೆದ್ರು ಅಂದು ಪರಮೇಶ್ವರ್‌‌‌‌‌ ಗಿಂತಲೂ ಸಿದ್ದರಾಮಯ್ಯಗೆ ಹೆಚ್ಚು ಫೋಕಸ್ ಸಿಕ್ತು.ಹೀಗಾಗಿ ಸರ್ಕಾರ ರಚಿಸುವಷ್ಟು ಸ್ಥಾನಗಳು ಸಿಕ್ಕ ವರ್ಷದಲ್ಲಿ ಅಧೃಷ್ಟ ಲಕ್ಷ್ಮೀ ಸಿದ್ದರಾಮಯ್ಯ ಮನೆ ಬಾಗಿಲಿನಲ್ಲಿ ನಿಂತು,ಕೊರಟಗೆರೆಯಲ್ಲಿ ಸೋತ ಪರಿಣಾಮ ದೌರ್ಭಾಗ್ಯದ ಲಕ್ಷ್ಮೀ ಪರಮೇಶ್ವರ್ ಮನೆ ಬಾಗಿನಲ್ಲಿ ನಿಂತಿತ್ತು.

ಅದರ ಪರಿಣಾಮ ಪರಮೇಶ್ವರ್ ಧ್ವನಿ ಎತ್ತಿ ನನಗೆ ಸಿಎಂ ಸ್ಥಾನ ಕೊಡಿ ಎಂದು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಇತ್ತ ವರುಣಾದಲ್ಲಿ ಗೆದ್ದಿದ್ದ ಸಿದ್ದರಾಮಯ್ಯಗೆ ರಾಜ್ಯಾದ್ಯಂತ 80ಕ್ಕೂ ಅಧಿಕ ಶಾಸಕರ ಬೆಂಬಲ ಸಿಕ್ಕಿ ಸಿಎಂ ಆದ್ರು.2013ರಲ್ಲಿ ಹಲವು ಭಾಗ್ಯಗಳನ್ನ ಕೊಟ್ಟು 1,21,611 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದರು.ಹಸಿವಿನಿಂತ ಯಾರು ಮಲಗಬಾರದು ಅಂತ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದರು.ಇಂದಿರಾ ಕ್ಯಾಂಟಿನ್,ಮನಸ್ವಿನಿ ಅಂತ ಯಶಸ್ವಿ ಯೋಜನೆಗಳನ್ನು ಜಾರಿ ಮಾಡಿದರು.

2014ರಲ್ಲಿ 1,38,008 ರೂಪಾಯಿ ಗಾತ್ರದ ಬಜೆಟ್ ಮಂಡಿಸಿದರು.2015ರಲ್ಲಿ 1,42,534 ರೂಪಾಯಿಗಳ ಬೃಹತ್ ಗಾತ್ರದ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದರು.2016ರಲ್ಲಿ 1,63,419 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮಂಡಿಸಿದರು.2017ರಲ್ಲಿ1,86,561,2018ರಲ್ಲಿ ಚುನಾವಣೆಗೆ ಹೋಗುವ ಮೊದಲು 2,09,181 ಕೋಟಿ ರೂಪಾಯಿಗಳ ಬೃಹತ್ ಗಾತ್ರದ ಬಜೆಟ್ ಮಂಡಿಸಿ ಚುನಾವಣಾ ಬಜೆಟ್ ಅಂತ ವಿಪಕ್ಷಗಳ ಆಕ್ಷೇಪಕ್ಕೆ ಕಾರಣರಾದ್ರು.

2023ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆಗೆ ಹೋಗಿ 136 ಸ್ಥಾನಗಳನ್ನು ಗೆದ್ದು ಬಂದ್ರು. ಗೆದ್ದ ಬಳಿಕ ಒಂದು ವಾರಗಳ ಕಾಲ ಸರ್ಕಸ್ ನಡೆದು ಸಿದ್ದರಾಮಯ್ಯ ಮತ್ತೆ ಸಿಎಂ ಆದ್ರು. 2023ರಲ್ಲಿ 3,27,747 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ರೆ 2024ರಲ್ಲಿ3.7 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದರು.2025ರಲ್ಲಿ 4.9 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿ ರಾಜ್ಯದಲ್ಲಿ ಯಾರು ಬರೆಯದ ಹಲವು ದಾಖಲೆಗಳನ್ನು ಸಿಎಂ ಸಿದ್ದರಾಮಯ್ಯ ಬರೆದಿದ್ದಾರೆ.

ಅತಿ ಹೆಚ್ಚು ಬಜೆಟ್ ಮಂಡಿಸಿದ,ಬೃಹತ್ ಗಾತ್ರದ ಬಜೆಟ್ ಮಂಡಿಸಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತೆ ಆದ್ರೆ ಸಿದ್ದರಾಮಯ್ಯ ಅವರ ಈ ಬಜೆಟ್‌‌‌‌‌ಅನ್ನು ಕೊನೆಯ ಬಜೆಟ್ ಅಂತ ಹಲವರು ವ್ಯಾಖ್ಯಾನ ಮಾಡ್ತಿದ್ದಾರೆ.ಈ ನಡುವೆ ಸಿದ್ದರಾಮಯ್ಯ ಈ ಬಜೆಟ್‌‌ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚು ಮಣೆ ಹಾಕಿ ಬಹುಸಂಖ್ಯಾತರನ್ನು ಕಡೆಗಣಿಸಿದ್ದಾರೆ ಅನ್ನೋ ಅಪರವಾದವೂ ಅಂಟಿಸಿಕೊಂಡಿದ್ದಾರೆ.ಅದ್ರೆ ಚುನಾವಣೆಯಲ್ಲಿ ಆ ಸಮುದಾಯ ಕಾಂಗ್ರೆಸ್ ಕೈ ಹಿಡಿದಿದ್ದರಿಂದಲೇ ಅಧಿಕಾರಕ್ಕೆ ಬಂದಿದ್ದು ಅದರ ಋಣ ತೀರಿಸುವ ಕೆಲಸವೂ ಆಗಿದೆ ಅನ್ನೋ ವ್ಯಾಖ್ಯಾನಗಳು ಬರ್ತೀವೆ. ಆದ್ರೆ ಸಿದ್ದರಾಮಯ್ಯ ಹೇಳ್ತಿರುವುದು ಸರ್ವಜನಾಂಗದ ಶಾಂತಿಯ ತೋಟ, ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಆಗಬೇಕಾದರೆ ಹಿಂದುಳಿದ ಸಮುದಾಯಗಳಿಗೆ ಹೆಚ್ಚು ಮಾನ್ಯತೆ ಕೊಡುವುದು ಅಗತ್ಯ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ.

ಮಾರುತಿ ಪಾವಗಡ , ಪೊಲಿಟಿಕಲ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version