ರಾಜ್ಯದಲ್ಲಿ ರಣಬಿಸಿಲು: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Untitled design (94)

ಬೆಂಗಳೂರು: ರಾಜ್ಯದಲ್ಲಿ ಉಷ್ಣತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.  ಕರ್ನಾಟಕ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಮಾರ್ಗದರ್ಶನವನ್ನು ಹೊರಡಿಸಿದೆ. ಇತ್ತೀಚಿನ ಗರಿಷ್ಠ ತಾಪಮಾನವು 40°C ಅನ್ನು ಮುಟ್ಟಿದ್ದು, ಇದರಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎನ್ನಲಾಗುತ್ತಿದ್ದು, ಇದರಿಂದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಿದೆ. ಬಿಸಿಲಿನ ದುಷ್ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಈ ಸಲಹೆಗಳನ್ನು ಪಾಲಿಸಬೇಕು.

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?
 ಏನು ಮಾಡಬಾರದು?
  1. ವಾಹನಗಳಲ್ಲಿ ಮಕ್ಕಳನ್ನು/ಪ್ರಾಣಿಗಳನ್ನು ಬಿಡಬೇಡಿ: ನಿಲ್ಲಿಸಿದ ವಾಹನಗಳಲ್ಲಿ ಹೆಚ್ಚಿನ ತಾಪಮಾನದಿಂದ ತಕ್ಷಣದ ಅಪಾಯ ಉಂಟಾಗಬಹುದು.
  2. ಕಪ್ಪು ಬಟ್ಟೆ ಧರಿಸಬೇಡಿ: ಬಿಗಿಯಾದ ಹಾಗೂ ಕಪ್ಪು ಬಣ್ಣದ ಬಟ್ಟೆಗಳು ಹೆಚ್ಚಿನ ಉಷ್ಣತೆಯನ್ನು ಹೀರಿಕೊಳ್ಳುತ್ತವೆ.
  3. ಹಗಲು ಸಮಯದಲ್ಲಿ ಶ್ರಮದಾಯಕ ಕೆಲಸ ಮಾಡಬೇಡಿ: ಮಧ್ಯಾಹ್ನ 12 ರಿಂದ 3ರ ಮಧ್ಯೆ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ.
  4. ಅಡುಗೆ ಮಾಡುವಾಗ ಸೂಕ್ತ ಗಾಳಿಯಾಡುವ ವ್ಯವಸ್ಥೆ ಇರಲಿ: ಅಡುಗೆ ಮಾಡುವಾಗ ಹೆಚ್ಚುವರಿ ತಾಪಮಾನ ಉಂಟಾಗದಂತೆ ಗಮನವಿರಲಿ.
  5. ಆಲ್ಕೋಹಾಲ್, ಚಹಾ, ಕಾಫಿ ಸೇವನೆ ತಪ್ಪಿಸಿ: ಇವು ದೇಹವನ್ನು ನಿರ್ಜಲೀಕರಿಸುವ ಕಾರಣ, ಬದಲಿಗೆ ನೈಸರ್ಗಿಕ ತಂಪು ಪಾನೀಯಗಳನ್ನು ಸೇವಿಸಿ.
  6. ಹಳೆಯ ಮತ್ತು ಹೆಚ್ಚು ಪ್ರೋಟೀನ್ ಆಹಾರ ಸೇವಿಸಬೇಡಿ: ಬಿಸಿಲಿನಲ್ಲಿ ಇಂತಹ ಆಹಾರಗಳು ಬೇಗನೇ ಹಾಳಾಗಬಹುದು.
  7. ಚಪ್ಪಲಿ ಇಲ್ಲದೇ ಹೋಗಬೇಡಿ: ಬಿಸಿಗಲ್ಲು ಅಥವಾ ಭೂಮಿಯ ತಾಪಮಾನ ಹೆಚ್ಚಾಗಿರುವುದರಿಂದ ಕಾಲು ಸುಡುವ ಅಪಾಯವಿರುತ್ತದೆ.
  8. ಮಧ್ಯಪಾನ ಮತ್ತು ಸಕ್ಕರೆಪಾನೀಯಗಳನ್ನು ಸೇವಿಸಬೇಡಿ: ಇವು ದೇಹದ ತಾಪಮಾನ ಹೆಚ್ಚಿಸಿ, ನಿರ್ಜಲೀಕರಣ ಉಂಟುಮಾಡುತ್ತವೆ.

ಆರೋಗ್ಯ ಇಲಾಖೆಯ ಈ ಸಲಹೆಗಳನ್ನು ಪಾಲಿಸುವ ಮೂಲಕ ಬಿಸಿಲಿನ ಪ್ರಭಾವದಿಂದ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.

ADVERTISEMENT
ADVERTISEMENT
Exit mobile version