ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ತಡೆ: 29 ಆಕ್ಷೇಪಣೆಗಳೊಂದಿಗೆ ರಾಷ್ಟ್ರಪತಿಗೆ ಪತ್ರ ಬರೆದ ಥಾವರ್ ಚಂದ್ ಗೆಹೋಟ್

Untitled design 2026 02 03T165337.453

ಬೆಂಗಳೂರು: ಕರ್ನಾಟಕ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ದ್ವೇಷ ಭಾಷಣ ತಡೆ ಮಸೂದೆ (Hate Speech Bill) ಈಗ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಉಭಯ ಸದನಗಳಲ್ಲಿ ಅಂಗೀಕಾರಗೊಂಡು ಸಹಿಗಾಗಿ ರಾಜಭವನಕ್ಕೆ ಸಲ್ಲಿಕೆಯಾಗಿದ್ದ ಈ ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಸಹಿ ಕಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಮಸೂದೆಯಲ್ಲಿನ ಲೋಪದೋಷಗಳನ್ನು ಪಟ್ಟಿ ಮಾಡಿ ರಾಷ್ಟ್ರಪತಿಯವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

29 ಪ್ರಮುಖ ಕಾರಣಗಳೊಂದಿಗೆ ಆಕ್ಷೇಪ

ರಾಜ್ಯಪಾಲರು ಕೇವಲ ಮಸೂದೆಯನ್ನು ತಡೆಹಿಡಿಯುವುದಷ್ಟೇ ಅಲ್ಲದೆ, ಅದರಲ್ಲಿರುವ ಅಸಂಬದ್ಧತೆ ಮತ್ತು ಅಪಾಯಕಾರಿ ಅಂಶಗಳನ್ನು 29 ಪ್ರಮುಖ ಅಂಶಗಳ ಮೂಲಕ ವಿವರಿಸಿದ್ದಾರೆ. ಅವರ ಆಕ್ಷೇಪದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

ಸಂಘರ್ಷದ ಹಾದಿಯಲ್ಲಿ ಸರ್ಕಾರ-ರಾಜಭವನ

ರಾಜ್ಯ ಸರ್ಕಾರವು ಸಮಾಜದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಈ ಮಸೂದೆಯನ್ನು ತಂದಿರುವುದಾಗಿ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ರಾಜ್ಯಪಾಲರು ಇದನ್ನು ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿಸಿರುವುದು ಸರ್ಕಾರದ ಮುಂದಿನ ನಡೆಗೆ ಹಿನ್ನಡೆಯಾಗಿ ಪರಿಣಮಿಸಿದೆ. ಈ ಹಿಂದೆಯೂ ಕೂಡಾ ಹಲವು ವಿಧೇಯಕಗಳ ವಿಚಾರದಲ್ಲಿ ರಾಜಭವನ ಮತ್ತು ಸೌಧದ ನಡುವೆ ಶೀತಲ ಸಮರ ನಡೆದಿತ್ತು, ಈಗ ‘ದ್ವೇಷ ಭಾಷಣ ಮಸೂದೆ’ ಆ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಈ ಮಸೂದೆಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಅಲ್ಲಿಯವರೆಗೆ ಈ ಕಾನೂನು ಜಾರಿಯಾಗುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.

Exit mobile version