ರೇಣುಕಾಸ್ವಾಮಿ ಕೊಲೆ ಮಾದರಿಯಲ್ಲೇ ಕಲಬುರಗಿಯಲ್ಲೂ ಕಿಡ್ನಾಪ್ & ಮರ್ಡರ್‌

Untitled design 2025 07 07t145017.344

ಕಲಬುರಗಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾದರಿಯಲ್ಲೇ ಕಲಬುರಗಿಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. 39 ವರ್ಷದ ರಾಘವೇಂದ್ರ ನಾಯಕ್ ಎಂಬಾತನನ್ನು ಕಿಡ್ನಾಪ್ ಮಾಡಿ, ಸ್ಮಶಾನದಲ್ಲಿ ಥಳಿಸಿ, ಕೊಲೆಗೈದು, ಶವವನ್ನು ನದಿಗೆ ಎಸೆದ ಘಟನೆ ಮಾರ್ಚ್ 12 ರಂದು ಕಲಬುರಗಿಯ ಕೀರ್ತಿನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಗುರುರಾಜ್, ಅಶ್ವಿನಿ (ತನು) ಮತ್ತು ಲಕ್ಷ್ಮಿಕಾಂತ್ ಸೇರಿದಂತೆ ಮೂವರು ಆರೋಪಿಗಳನ್ನು ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.

ರಾಘವೇಂದ್ರ ನಾಯಕ್ ಎಂಬಾತ ಅಶ್ವಿನಿ ಎಂಬ ಮಹಿಳೆಗೆ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಈ ವಿಷಯವನ್ನು ಅಶ್ವಿನಿ ತನ್ನ ಗೆಳೆಯ ಗುರುರಾಜ್ ಮತ್ತು ಲಕ್ಷ್ಮಿಕಾಂತ್‌ಗೆ ತಿಳಿಸಿದ್ದಳು. ಕಿರುಕುಳದ ಕುರಿತು ಕೇಳಿದ ಗುರುರಾಜ್, ತನ್ನ ಸ್ನೇಹಿತರ ಜೊತೆ ಸೇರಿಕೊಂಡು ರಾಘವೇಂದ್ರನನ್ನು ಕಿಡ್ನಾಪ್ ಮಾಡಿದ. ಆರೋಪಿಗಳು ರಾಘವೇಂದ್ರನನ್ನು ಕಲಬುರಗಿಯ ಕೀರ್ತಿನಗರದ ಸ್ಮಶಾನಕ್ಕೆ ಕರೆದೊಯ್ದು, ಅಲ್ಲಿ ಭೀಕರವಾಗಿ ಹಲ್ಲೆ ಮಾಡಿದ್ದಾರೆ.

ADVERTISEMENT
ADVERTISEMENT

ಕೀರ್ತಿನಗರದ ಸ್ಮಶಾನದಲ್ಲಿ ರಾಘವೇಂದ್ರನ ಮೇಲೆ ಗುರುರಾಜ್ ಮತ್ತು ಗ್ಯಾಂಗ್ ಮನಬಂದಂತೆ ಥಳಿಸಿದ್ದಾರೆ. ಗುರುರಾಜ್ ರಾಘವೇಂದ್ರನ ಕಪಾಳಕ್ಕೆ ಹೊಡೆದಾಗ, ಆತ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾನೆ. ಹಲ್ಲೆಯಲ್ಲಿ ಅಶ್ವಿನಿಯೂ ಭಾಗಿಯಾಗಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಕೊಲೆಯಾದ ಬಳಿಕ, ಆರೋಪಿಗಳು ರಾಘವೇಂದ್ರನ ಶವವನ್ನು ಕಾರಿನಲ್ಲಿ ರಾಯಚೂರಿನ ಶಕ್ತಿನಗರದ ನದಿಗೆ ಸಾಗಿಸಿ, ಅಲ್ಲಿ ಬಿಸಾಕಿದ್ದಾರೆ. ಈ ಕೃತ್ಯವನ್ನು ಮುಚ್ಚಿಡಲು ಆರೋಪಿಗಳು ಪರಾರಿಯಾಗಿದ್ದರು.

ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಗುರುರಾಜ್, ಅಶ್ವಿನಿ ಮತ್ತು ಲಕ್ಷ್ಮಿಕಾಂತ್‌ರನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆತನ ಗ್ಯಾಂಗ್‌ನಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆಗೈದು, ಶವವನ್ನು ಒಡ್ಡಿನಲ್ಲಿ ಬಿಸಾಕಲಾಗಿತ್ತು. ಇದೇ ರೀತಿಯಾಗಿ, ಕಲಬುರಗಿಯ ಈ ಕೊಲೆಯೂ ಕಿಡ್ನಾಪ್, ಚಿತ್ರಹಿಂಸೆ ಮತ್ತು ಶವವನ್ನು ನದಿಗೆ ಎಸೆಯುವ ಮೂಲಕ ನಡೆದಿದೆ.

Exit mobile version