ಹನಿಟ್ರ್ಯಾಪ್ ಕೇಸ್ ಗೆ ಹೈಕಮಾಂಡ್ ನಾಯಕರು ಗರಂ!

Film (33)

ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್‌‌‌‌ನ ಸದ್ದು ಜೋರಾಗ್ತಿದೆ. ಕಾಂಗ್ರೆಸ್  ಹನಿಜೇನಿನ ಸುದ್ದಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಸಚಿವ ರಾಜಣ್ಣ ಆಡಳಿತ ಪಕ್ಷದ ಮೇಲೆಯೇ ಗಂಭೀರ ಆರೋಪ ಮಾಡಿದ್ದು, ಕಾಂಗ್ರೆಸ್‌‌‌‌ನ ಹೈಕಮಾಂಡ್ ನಾಯಕರಿಗೆ ತಲೆನೋವು ತಂದಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ 45ನಿಮಿಷಗಳ ಕಾಲ ಒನ್ ಟೂ ಒನ್ ಮೀಟಿಂಗ್ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸುದ್ದಿ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಸದನದಲ್ಲಿ ಹನಿಟ್ರ್ಯಾಪ್ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದ ರಾಜಣ್ಣ ದೂರು ನೀಡಲು ಹಿಂದೇಟು ಹಾಕ್ತಿದ್ದಾರೆ ಎನ್ನುವ ಕೂಗು ಕೇಳಿ ಬರುತ್ತಿತ್ತು. ಇದರ ನಡುವೆ ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯರನ್ನ ಎಂಎಲ್ಸಿ ರಾಜೇಂದ್ರ ರಾಜಣ್ಣ ಭೇಟಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆಗೆ ಪ್ರತ್ಯೇಕ ಮಾತುಕತೆ ನಡೆಸಿರೋ ರಾಜೇಂದ್ರ ಸಿಎಂಗೆ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ. ಕೆಲವು ದಾಖಲೆಗಳನ್ನು ನೋಡಿ ಸಿಎಂ ಸಿದ್ದರಾಮಯ್ಯ, ಸೀನಿಯರ್ ಅಡ್ವೋಕೇಟ್ ಜೊತೆಗೆ ಚರ್ಚಿಸಿ ಡಿಜಿಯವರಿಗೆ ದೂರು ನೀಡುವಂತೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ.

ADVERTISEMENT
ADVERTISEMENT

ಹನಿಟ್ರ್ಯಾಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಖರ್ಗೆ, ರಾಜ್ಯದಲ್ಲಿ ಆಗಿರೋದನ್ನು ಇಲ್ಲಿರೋರಿಗೆ ಕೇಳಿ ಎಂದರು.

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಮಲ್ಲಿಕಾರ್ಜುನ್ ಖರ್ಗೆ ಸುಮಾರು 45 ನಿಮಿಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಹನಿಟ್ರ್ಯಾಪ್ ವಿಚಾರಕ್ಕೆ ಅಸಮಾಧಾನ ಹೊರಹಾಕಿರೋ ಖರ್ಗೆ, ಸದನದಲ್ಲಿಈ ವಿಚಾರ ಪ್ರಸ್ತಾಪಕ್ಕೆ ಯಾಕೆ ಬಿಟ್ರಿ ಎಂದು ಗರಂ ಆಗಿದ್ದಾರಂತೆ. ಪ್ರಕರಣದ ವಿರುದ್ಧ ತನಿಖೆಗೆ ಆದೇಶ ಹೊರಡಿಸಿ, ಬಿಜೆಪಿಗರಿಗೆ ಇದನ್ನು ನೀವೆ ಅಸ್ತ್ರವನ್ನಾಗಿಸಿದ್ದರಿ. ಕೂಡಲೇ ರಾಜಣ್ಣ ಅವರಿಂದ ದೂರು ಪಡೆಯಿರಿ ಎಂದು ಸೂಚಿಸಿದ್ದಾರೆ. ಇದೆಲ್ಲದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅವರನ್ನು ಕೇಳಿದ್ದೇನೆ. ಆದ್ರೆ, ರಾಜಣ್ಣ ಅವರ ಬಳಿ ಯಾವ ದಾಖಲೆ ಇಲ್ಲ ಎಂದಿದ್ದಾರೆ. ರಾಜಣ್ಣ ಮಾತಾಡಿದ್ದೆಲ್ಲವನ್ನು ನಿಮ್ಮ ಮುಂದೆ ಹೇಳಲು ಆಗಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹನಿಟ್ರ್ಯಾಪ್ ಸುದ್ದಿ ಸುನಾಮಿ ಎಬ್ಬಿಸುತ್ತಿದೆ. ಇತ್ತ ಸಿಎಂ ಜೊತೆಗೆ ಖರ್ಗೆ ಸೀಕ್ರೆಟ್ ಮೀಟಿಂಗ್ ನಡೆಸಿ ಅಸಮಾಧಾನ ಹೊರಹಾಕಿದ್ದಾರೆ. ಆದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರಾಜ್ಯದಲ್ಲಿದ್ದರೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿಯಾಗದೇ ದಿಢೀರ್ ದಿಲ್ಲಿ ಪ್ರವಾಸ್ ಕೈಗೊಂಡಿದ್ದಾರೆ. ಹನಿಟ್ರ್ಯಾಪ್ ಗದ್ದಲದ ನಡುವೆ ಡಿಕೆ ಶಿವಕುಮಾರ್ ದಿಢೀರ್ ದೆಹಲಿಗೆ ತೆರಳಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ.

Exit mobile version