ಗೋಲ್ಡ್ ಸ್ಮಗ್ಲಿಂಗ್ ಕೇಸ್‌: 3 ಗಂಟೆಗಳ ಕಾಲ ಡಿಜಿಪಿ ರಾಮಚಂದ್ರರಾವ್‌ ವಿಚಾರಣೆ

Untitled design (95)

ಬೆಂಗಳೂರು: ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14 ಕೆಜಿ ಚಿನ್ನ ಕಳ್ಳಸಾಗಾಟ ಮಾಡಿದ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಟಿ ರನ್ಯಾರಾವ್‌ ಜತೆಗಿನ ಸಂಬಂಧಿತ ಈ ಪ್ರಕರಣದ ಬಗ್ಗೆ ರಾಜ್ಯ ಸರಕಾರ ರಚಿಸಿದ ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾ ನೇತೃತ್ವದ ತನಿಖಾ ಸಮಿತಿ ವಿಚಾರಣೆ ಚುರುಕುಗೊಳಿಸಿದೆ.

ಡಿಜಿಪಿ ವಿಚಾರಣೆಯ ಸೂಕ್ಷ್ಮ ಮಾಹಿತಿ

ADVERTISEMENT
ADVERTISEMENT

ಡಿಜಿಪಿ ರಾಮಚಂದ್ರರಾವ್ ಅವರನ್ನು ವಿಮಾನ ನಿಲ್ದಾಣಕ್ಕೆ ಹೋಗುವಾಗ ಅಥವಾ ಬರುವಾಗ ಪ್ರೋಟೋಕಾಲ್ ನೀಡಲು ನೀವು ಸೂಚಿಸಿದ್ದೀರಾ?. ಸರ್ಕಾರಿ ವಾಹನ ಒದಗಿಸಲು ನೀವು ಯಾರಿಗಾದರೂ ಸೂಚಿಸಿದ್ದೀರಾ?. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಇತ್ತೀಚೆಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದೀರಾ? ಎಂದು ಮೂರು ಗಂಟೆಗಳ ಕಾಲ ಪ್ರಯತ್ನಿಸಲಾಯಿತು. ಆದರೆ, ಡಿಜಿಪಿ ರಾಮಚಂದ್ರರಾವ್ ಉತ್ತರಿಸಿದ್ದು, “ನನಗೆ ಗೊತ್ತಿಲ್ಲ. ನಾನು ಯಾರಿಗೂ ಸೂಚನೆ ನೀಡಿಲ್ಲ,” ಎಂಬ ಸರಳ ಉತ್ತರ ನೀಡಿದ್ದು, ತನಿಖಾ ಸಮಿತಿಯ ಸಮಾಧಾನ ತಂದಿಲ್ಲ ಎಂದು ಹೇಳಿದರು. 

ನಾಳೆ ರಾಜ್ಯ ಸರಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲು ಉದ್ದೇಶಿಸಿರುವ ತನಿಖಾ ಸಮಿತಿ, ಮತ್ತೊಮ್ಮೆ ಡಿಜಿಪಿ ರಾಮಚಂದ್ರರಾವ್ ಅವರನ್ನು ವಿಚಾರಣೆ ನಡೆಸಲು ತೀರ್ಮಾನಿಸಿದೆ. ಪ್ರೋಟೋಕಾಲ್‌ ನೀಡುವಲ್ಲಿ ಯಾವುದೇ ಅವ್ಯವಸ್ಥೆ ಕಂಡು ಬಂದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ರಾಜ್ಯ ಸರಕಾರ ಮುಂದಾಗಿದೆ.

ಚಿನ್ನ ಕಳ್ಳ ಸಾಗಾಟ

ನಟಿ ರನ್ಯಾರಾವ್‌ ಪ್ರಕರಣದಿಂದ ರಾಜ್ಯ ಸರಕಾರಕ್ಕೆ ಮುಜುಗರ ಉಂಟಾಗಿದೆ. ಇನ್ನು ಮುಂದೆ ಪ್ರತಿಯೊಬ್ಬ ವಿಐಪಿ ಮತ್ತು ವಿವಿಐಪಿಗಳಿಗೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯ ತಪಾಸಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು, ಡಿ.ಆರ್.ಐ, ಸಿಬಿಐ ಹಾಗೂ ಇಡಿ ತಂಡಗಳು ಈ ಪ್ರಕರಣದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದ್ದು,ಇನ್ನು ನಟಿಯ ಚಿನ್ನ ಕಳ್ಳ ಸಾಗಾಟದ ರಹಸ್ಯ ಬಹಿರಂಗಗೊಳ್ಳಲು ಸಾಧ್ಯವಿದೆ.

ಡಿಜಿಪಿ ವಿರುದ್ಧದ ಅನುಮಾನಗಳು

ಹತ್ತಿರದ ಮೂಲಗಳ ಪ್ರಕಾರ, ಡಿಜಿಪಿ ರಾಮಚಂದ್ರರಾವ್‌ ತನಿಖಾ ತಂಡದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿಲ್ಲ. ಅವರ ಮಗಳ ಈ ದಂಧೆಗೆ ತಂದೆ ಬೆಂಬಲ ಇತ್ತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಪಡೆಯಬೇಕಾಗಿದೆ. ಈ ಮಧ್ಯೆ, ಚಿನ್ನ ಕಳ್ಳ ಸಾಗಾಟದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

Exit mobile version