ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಎಂ ಸಿದ್ದು ತಂತ್ರ

Film (66)

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿ ಜ್ವಾಲೆ ಜೋರಿಗಿಯೇ ಉರಿಯಿತ್ತಿದೆ. ನಾಳೆಯೇ ವಿಶೇಷ ಸಚಿವ ಸಂಪುಟ ಕರೆದಿರೋ ಸಿಎಂ ಸಿದ್ದರಾಮಯ್ಯಗೆ ಪರ, ವಿರೋಧದ ಟೆನ್ಷನ್ ಶುರುವಾಗಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಹೋರಾಟ ಮಾಡಿದ ಸಚಿವರ ನಡೆ ಒಂದು ಕಡೆಯಾದ್ರೆ, ವರದಿಯಲ್ಲಿರೋ ಅಂಕಿಅಂಶಗಳಿಗೆ ಕೆಲ ಸಚಿವರು ಕೆಂಡ ಕಾರ್ತಿದ್ದಾರೆ. ಬಹುದಿನಗಳಿಂದ ವಿಳಂಬ ಆಗಿದ್ದ ವರದಿ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡುವ ಆತಂಕ ಹೆಚ್ಚಾಗಿದೆ.

ಕಳೆದ ಹತ್ತು ವರ್ಷದಿಂದ ಜಾತಿಗಣತಿ ವರದಿ ಜಾರಿ ಆಗ್ತಿಲ್ಲ ಅನ್ನೋ ಕೂಗು ರಾಜ್ಯದಲ್ಲಿ ಕೇಳಿ‌ಬರುತ್ತಿತ್ತು.. ಕಳೆದ ಮೂರ್ನಾಲ್ಕು ವರ್ಷದಿಂದ ಹಿಂದುಳಿದ ವರ್ಗಗಳ ನಾಯಕರು ಸರ್ಕಾರದ ವಿರುದ್ಧ ಅಸಮಾಧಾನ, ಆಕ್ರೋಶ ಹೊರಹಾಕಿ ವರದಿ ಜಾರಿಗೆ ಒತ್ತಾಯಿಸಿದ್ದರು. ಮೊನ್ನೆಯಷ್ಟೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಯಾಗಿದೆ. ವರದಿ ಜಾರಿಗಾಗಿಯೇ ರಾಜ್ಯ ಸರ್ಕಾರ ವಿಶೇಷ ಸಚಿವ ಸಂಪುಟ ಸಭೆ ಕರೆದಿದೆ. ನಾಳೆ‌ಯ ಸಚಿವ ಸಂಪುಟದಲ್ಲಿ ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುವ ನಿರ್ಧಾರ ಏನು? ಸಚಿವ ಸಂಪುಟ ಸಭೆಯಲ್ಲಿ ವರದಿ ಜಾರಿಯಾಗತ್ತಾ? ವರದಿ ಜಾರಿ ವಿಚಾರ ಮುಂದೂಡಿಕೆ ಆಗತ್ತಾ ಹೀಗೆ ಹತ್ತು ಹಲವು ಚರ್ಚೆಗಳು ಗರಿಗೆದರಿದೆ. ವರದಿ‌ ಜಾರಿಯಾದ್ರೆ ರಾಜ್ಯದ ಜನರಿಗೆ ಅನುಕೂಲ ಆಗತ್ತೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.

ADVERTISEMENT
ADVERTISEMENT

ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಂದಿರೋ ಆಯ್ಕೆಗಳೇನು?

ರಾಜ್ಯದಲ್ಲಿ ವರದಿ ಜಾರಿ ವಿಚಾರಕ್ಕೆ ಪರ-ವಿರೋಧದ ಚರ್ಚೆಗಳು ಜೋರಾಗಿದೆ. ವರದಿ ಅವೈಜ್ಞಾನಿಕ ಅಂತ ಬಿಜೆಪಿ, ಜೆಡಿಎಸ್ ಹೋರಾಟ ನಡೆಸ್ತಿದ್ದರೆ, ಕಾಂಗ್ರೆಸ್ ನಲ್ಲಿರೋ ಒಕ್ಕಲಿಗ, ‌ಲಿಂಗಾಯತ ಸಮುದಾಯದ ನಾಯಕರು ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ. ಇದರ ಸಿಎಂ ಸಿದ್ದರಾಮಯ್ಯ ನಡೆಗೆ ನೇರವಾಗಿ ಅಸಮಾಧಾನ ಹೊರಹಾಕ್ತಿರೋದು ಒಂದು ಕಡೆಯಾದ್ರೆ, ಇತ್ತ ವರದಿ ಜಾರಿಗೆ ಅವಸರ ಬೇಡ ಅನ್ನೋದನ್ನು ಮನವರಿಕೆ ಮಾಡಿದ್ದಾರೆ.. ಹೀಗಾಗಿ ರಾಜ್ಯ ಸರ್ಕಾರ ವರದಿ ಅಧ್ಯಯನಕ್ಕೆ ತಜ್ಞ ಅಧಿಕಾರಿಗಳ ತಂಡ ರಚಿಸಿ ಮೂರು ತಿಂಗಳ ಕಾಲಾವಕಾಶ ತೆಗೆದುಕೊಳ್ಳುವ ತಂತ್ರದ ಮೊರೆ ಹೋಗ್ತಿದ್ದು, ವರದಿಯಲ್ಲಿರೋ ಅಂಕಿಅಂಶಗಳು ಹೊರಗೆ ಬರಲಿ ಅಂತಾರೆ ಸಚಿವ ಎಂ.ಬಿ ಪಾಟೀಲ.

ಕಳೆದೊಂದು ವಾರದಿಂದ ರಾಜ್ಯದಲ್ಲಿ ಜಾತಿಗಣತಿ ಜಟಾಪಟಿ ಜೋರಾಗಿದೆ. ವರದಿ ಜಾರಿಗೆ ಮುಂದಾಗಿರೋ ಸಿಎಂ ಸಿದ್ದರಾಮಯ್ಯಗೆ ರಾಜ್ಯದ ಪ್ರಬಲ ಸಮುದಾಯದ ವಿರೋಧ ಸಂಕಷ್ಟ ತಂದೊಡ್ಡುವ ಆತಂಕ ಹೆಚ್ಚಾಗಿದೆ.‌ ಹೀಗಾಗಿಸಿಎಂ ಸಿದ್ದರಾಮಯ್ಯ ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

Exit mobile version