ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020ರಲ್ಲಿ ಆತ್ಮಹತ್ಯೆ ಮಾಡ್ಕೊಂಡಿದ್ರು. ಧೋನಿಯ ಬಯೋಪಿಕ್ನಲ್ಲಿ ಅದ್ಭುತ ಅಭಿನಯ ನೀಡಿದ್ದ ಸುಶಾಂತ್ ಸಿಂಗ್ ರಜಪೂತ್, ಆಗಿನ್ನೂ ಸ್ಟಾರ್ ಆಗಿ ಬೆಳೆಯುತ್ತಿದ್ದ ನಟ. ಮೃತಪಟ್ಟಾಗ ಆತನಿಗಿನ್ನೂ ಜಸ್ಟ್ 34 ವರ್ಷ ವಯಸ್ಸು. ಸುಶಾಂತ್ ಸತ್ತ ನಂತರ ರಿಲೀಸ್ ಆದ ಚಿಚ್ಚೋರೆ ಅನ್ನೋ ಸಿನಿಮಾದಲ್ಲಿ ಸುಶಾಂತ್, ಆತ್ಮಹತ್ಯೆ ಯತ್ನ ಮಾಡುವವರಿಗೆ ಜೀವನ ಸ್ಪೂರ್ತಿ ತುಂಬುವ ಪಾತ್ರದಲ್ಲಿ ನಟಿಸಿದ್ದರು. ಅದು ಆತ್ಮಹತ್ಯೆ ಅಲ್ಲ, ಕೊಲೆ ಎನ್ನುವ ಆರೋಪಗಳಿವೆ.
ಇದೀಗ ಆ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ದಿಶಾ ಸಾಲಿಯಾನ್ ತಂದೆ ಮಹಾರಾಷ್ಟ್ರದ ಹುಲಿ ಎಂದೇ ಹೆಸರಾಗಿದ್ದ ಬಾಳ್ ಠಾಕ್ರೆ ಮೊಮ್ಮಗ ಆದಿತ್ಯ ಠಾಕ್ರೆ ಮೇಲೆ ಆರೋಪ ಮಾಡಿದ್ದಾರೆ. ಈ ದಿಶಾ ಸಾಲಿಯಾನ್, ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ 6 ದಿನಗ ಮುನ್ನ ಮೃತಪಟ್ಟಿದ್ದರು. ದಿಶಾ ಸಾಲಿಯಾನ್, ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದರು.
ದಿಶಾ, ಮುಂಬೈನ ಅಪಾರ್ಟ್ಮೆಂಟಿಂದ ಆಕಸ್ಮಿಕವಾಗಿ ಬಿದ್ದು ಸತ್ತಿದ್ದರು ಎನ್ನಲಾಗಿತ್ತು. ಆದರೆ ಅದೊಂದು ಕೊಲೆ ಎಂಬ ಶಂಕೆಯೂ ಇತ್ತು. ಆ ಪ್ರಕರಣದಲ್ಲಿ ಎಸ್ಐಟಿ ರಚನೆಯಾಗಿತ್ತು. ಅದಿನ್ನೂ ರಿಪೋರ್ಟ್ ಕೊಟ್ಟಿಲ್ಲ. ಪೊಲೀಸ್ ತನಿಖೆಯಲ್ಲಿ ಅದು ಆತ್ಮಹತ್ಯೆಯೂ ಅಲ್ಲ, ಕೊಲೆಯೂ ಅಲ್ಲ, ಆಕಸ್ಮಿಕ ಸಾವು ಎಂದು ಹೇಳಿತ್ತು. ಇದೀಗ ಅದೇ ದಿಶಾ ತಂದೆ ಅಂದಿನ ಸಿಎಂ ಉದ್ಧವ್ ಠಾಕ್ರೆ ಅವರೇ ಮುಂದೆ ನಿಂತು, ತಮ್ಮ ಮಗ ಮಾಡಿದ್ದ ಕ್ರೈಂ ಮುಚ್ಚಿ ಹಾಕಿದ್ದಾರೆ ಅಂತಾ ನೇರವಾಗಿ ಕೋರ್ಟ್ ಮೊರೆ ಹೋಗಿದ್ದಾರೆ.2020ನೇ ಇಸವಿ ಜೂನ್ 8ನೇ ತಾರೀಕು, ದಿಶಾ ಮೃತಪಟ್ಟಿದ್ದರೆ, ದಿಶಾ ಸಾವನ್ನಪ್ಪಿದ 6 ದಿನಗಳ ಬಳಿಕ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟಿದ್ದರು.
ದಿಶಾ ತಂದೆ ಆರೋಪ ಏನು..?
ದಿಶಾ ಮೃತಪಟ್ಟ ದಿನ ಮನೆಯಲ್ಲಿ ಪಾರ್ಟಿ ಕೊಟ್ಟಿದ್ದಳು. ಆ ಪಾರ್ಟಿಗೆ ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆ, ನಟ ದಿನೋ ಮೊರಿಯಾ, ಸೂರಜ್ ಪಾಂಚೋಲಿ ಬಂದಿದ್ದರು. ಆ ಪಾರ್ಟಿಯಲ್ಲಿ ಆದಿತ್ಯ ಠಾಕ್ರೆ, ದಿನೋ ಮೊರಿಯಾ, ಸೂರಜ್ ಪಾಂಚೋಲಿ ಹಾಗೂ ಬಾಡಿಗಾರ್ಡ್ ಸೇರಿ ದಿಶಾ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ನಂತರ ಕೊಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತ್ಯಕ್ಷದರ್ಶಿಗಳಿದ್ಧಾರೆ. ಆ ಪ್ರತ್ಯಕ್ಷದರ್ಶಿ, ಗ್ಯಾಂಗ್ ರೇಪ್ನ್ನು ಕಣ್ಣಾರೆ ನೋಡಿದ್ದಾರೆ.ಹೀಗೆಂದು ಬಾಂಬೆ ಹೈಕೋರ್ಟಿಗೆ ದಿಶಾ ಸಾಲಿಯಾನ್ ತಂದೆ ಸತೀಶ್ ಸಾಲಿಯಾನ್ ಅರ್ಜಿ ಸಲ್ಲಿಸಿದ್ದಾರೆ.
ದಿನೋ ಮಾರಿಯಾ, ಕನ್ನಡದಲ್ಲಿ ಜೂಲಿ ಅನ್ನೋ ಚಿತ್ರದಲ್ಲಿ ನಟಿಸಿದ್ದ ನಟ. ಹಿಂದಿಯಲ್ಲಿ ರಾಝ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟ. ಇನ್ನು ಸೂರಜ್ ಪಾಂಚೋಲಿ ಕೂಡಾ ಬಾಲಿವುಡ್ ನಟ. ಈ ಹಿಂದೆ ನಟಿ ಜಿಯಾ ಖಾನ್ ಡೆತ್ ಕೇಸಿನಲ್ಲಿ ಜೈಲಿಗೆ ಹೋಗಿ ಬಂದ ಇತಿಹಾಸ ಇದೆ. ಇನ್ನು ಆದಿತ್ಯ ಠಾಕ್ರೆ, ಶಿವಸೇನಾ ನಾಯಕ ಉದ್ಧವ್ ಠಾಕ್ರೆಯ ಮಗ. ಬಾಳಾ ಠಾಕ್ರೆಯ ಮೊಮ್ಮಗ. ಮಹಾರಾಷ್ಟ್ರ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದವರು.
ದಿಶಾ ಸಾಲಿಯಾನ್ ಮೇಲೆ ನಡೆದ ದೌರ್ಜನ್ಯಕ್ಕೆ ಸುಶಾಂತ್ ಸಿಂಗ್ ಪ್ರತ್ಯಕ್ಷ ಸಾಕ್ಷಿಯಾಗಿದ್ದರಾ..? ಆ ಕಾರಣಕ್ಕಾಗಿಯೇ ಕೊಲ್ಲಲ್ಪಟ್ಟರಾ..? ಇಲ್ಲ ಅಂದ್ರೆ ದಿಶಾ ಸಾವಿನ ನಂತರ 6 ದಿನಗಳಿಗೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ…? ಸುಶಾಂತ್ ಸಾವು, ಅತ್ಮಹತ್ಯೆ ಅಲ್ಲ, ಕೊಲೆ ಅನ್ನೋ ವಾದಕ್ಕೆ ಮತ್ತೆ ಜೀವ ಬಂದಿರೋದೇ ಈ ಕಾರಣಕ್ಕೆ. ಈ ಘಟನೆಯಿಂದ ಸುಮಾರು 5 ವರ್ಷಗಳ ಹಿಂದೆ ನಡೆದ ಎರಡು ಸಾವುಗಳು ಈಗ ಸಮಾಧಿಯಿಂದ ಎದ್ದು ಬಂದಿವೆ.