ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರರಕಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಹೆಸರು ಕೇಳಿ ಬರ್ತಿದ್ದಂತೆ, ಬಿಜೆಪಿ ಪೊನ್ನಣ್ಣ ವಿರುದ್ಧ ಬೀದಿಗಳಿದು ಹೋರಾಟಕ್ಕಿಳಿದಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿದ್ದು, ಪೊನ್ನಣ್ಣ ಬಳಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಬಿಜೆಪಿ ಬೇಕೆಂದಲೇ ರಾಜಕೀಯ ಮಾಡ್ತಾರೆ ಅಂತ ಕೈ ಪಡೆ ಕಿಡಿ ಕಾರಿದೆ.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಕಾಂಗ್ರೆಸ್ ಇಬ್ಬರು ಶಾಸಕರಿಗೆ ಸಂಕಷ್ಟ ತಂದೊಡ್ಡಿದೆ. ವಾಟ್ಸಪ್ ನಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರೋ ವಿನಯ್, ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಪೊನ್ನಣ್ಣ ಮತ್ತು ಮಂಥರಗೌಡ ಹೆಸರು ಉಲ್ಲೇಖಿಸಿದ್ದಾರೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರೋ ಬಿಜೆಪಿ ಕಾಂಗ್ರೆಸ್ ಶಾಸಕರ ವಿರುದ್ಧ ಹೋರಾಟಕ್ಕಿಳಿದಿದೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವೇ ಅಂತ ಬೆಂಗಳೂರು, ಕೊಡಗು, ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಜೊತೆಗೆ ದೆಹಲಿ ಪ್ರವಾಸ ಕೈಗೊಂಡಿದ್ದ ಪೊನ್ನಣ್ಣ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಅಲ್ಲದೇ ವಿನಯ್ ಸಾವು ಆಗಬಾರದಿತ್ತು. ಬಿಜೆಪಿ ಅವರ ಕುಟುಂಬದ ಜೊತೆಗೆ ನಿಲ್ಲಬೇಕಿತ್ತು. ಆದ್ರೆ ಇದಲ್ಲಿ ರಾಜಕೀಯ ಮಾಡ್ತಿದ್ದಾರೆ. ವಿನಯ್ ಡೆತ್ನೋಟ್ ರೈಟಿಂಗ್ ನಲ್ಲಿಲ್ಲ ಎಂದು ಕಿಡಿ ಕಾರಿದರು.
ವಿನಯ್ ಸಾವಿನ ಬಗ್ಗೆ ಸಿಎಂ ಸಿದ್ದರಾಮಯ್ಯ, ಪೊನ್ನಣ್ಣ ಜೊತೆಗೆ ದೆಹಲಿಯಲ್ಲಿಯೇ ಚರ್ಚೆ ನಡೆಸಿದರು. ಪ್ರಕರಣವನ್ನು ಬಿಜೆಪಿ ಅಸ್ತ್ರವನ್ನಾಗಿಸಿಕೊಳ್ಳುತ್ತದೆ. ಇದರಲ್ಲೂಬಿಜೆಪಿ ರಾಜಕೀಯ ಮಾಡುತ್ತದೆ. ಹುಷಾರಾಗಿ ಈ ಪ್ರಕರಣವನ್ನ ತೆಗೆದುಕೊಳ್ಳಿ ಎಂದು ಸಿಎಂ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದರ ನಡುವೆ ಕೊಡುಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜ್, ಬಿಜೆಪಿಯವರಿಗೆ ಮಾಡಲು ಕೆಸಲ ಇಲ್ಲ. ಸುಳ್ಳು ಆರೋಪ ಮಾಡ್ತಿದ್ದಾರೆ. ಪ್ರಕರಣದ ತನಿಖೆ ಆರಂಭವಾಗಿದೆ. ತನಿಖೆಯ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿನಯ್ ಸಾವಿನ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ಹೋರಾಟ ಆರಂಭಿಸಿದೆ. ಇತ್ತ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ವಿನಯ್ ಆತ್ಮಹತ್ಯೆ ಪ್ರರಕಣದ ಎಫ್ಆರ್ಐ ದಾಖಲಾಗಿದ್ದು, ಈ ಬಗ್ಗೆ ಸಿಎಂಗೆ ಪೊಲೀಸರು ಎಲ್ಲ ಮಾಹಿತಿ ನೀಡಿದ್ದಾರೆ. ಆದ್ರೆ ಎಫ್ಐಆರ್ ನಲ್ಲಿ ಇಬ್ಬರು ಶಾಸಕರ ಹೆಸರು ಎಫ್ಐಆರ್ನಲ್ಲಿ ಕೈ ಬೀಡಲಾಗಿದೆ ಅನ್ನೋದರ ವಿರುದ್ದ ಆಕ್ರೋಶ ವ್ಯಕ್ತವಾಗ್ತಿದ್ದು, ಪ್ರಕರಣ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ. ಇಬ್ಬರು ಶಾಸಕರಿಗೆ ಸಂಕಷ್ಟ ಎದುರಾಗತ್ತಾ.