ಬಿಕ್ಲು ಶಿವ ಕೊಲೆ ಆರೋಪಿ ಬೈರತಿ ಬಸವರಾಜ್‌‌ಗೆ CID ಫುಲ್‌ ಡ್ರಿಲ್!

ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ c ಅವರ ವಿಚಾರಣೆ ತೀವ್ರಗೊಂಡಿದೆ. ಸಿಐಡಿ ಕಸ್ಟಡಿಯಲ್ಲಿರುವ ಬೈರತಿ ಬಸವರಾಜ್ ಅವರು ಅಧಿಕಾರಿಗಳ ಪ್ರಶ್ನೆಗಳಿಗೆ ಸಂಪೂರ್ಣ ಸೈಲೆಂಟ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾಕ್ಷಿದಾರರು ಮತ್ತು ಇತರ ಆರೋಪಿಗಳ ಹೇಳಿಕೆಗಳ ಆಧಾರದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಬೈರತಿ ಯಾವುದೇ ಪ್ರತಿಕ್ರಿಯೆ ನೀಡದೆ “ನನಗೇನೂ ಗೊತ್ತಿಲ್ಲ” ಎಂಬ ಉತ್ತರವನ್ನು ಪದೇ ಪದೇ ಕೊಡುತ್ತಿದ್ದಾರೆ.

ಬೈರತಿ ಬಸವರಾಜ್ ಅವರು ಪ್ರಕರಣದಲ್ಲಿ 5ನೇ ಆರೋಪಿಯಾಗಿ ಹೆಸರು ಕೇಳಿ ಬಂದಿದ್ದು, ಕಳೆದ ಶನಿವಾರ ಸಿಐಡಿ ಅವರನ್ನು ಬಂಧಿಸಿತ್ತು. ಸುಪ್ರೀಂ ಕೋರ್ಟ್ ಅಂತರಿಂಗ ಬೇಲ್ ಅರ್ಜಿಯನ್ನು ತಿರಸ್ಕರಿಸಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು. ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ, ಫಿಟ್ ಎಂದು ದೃಢಪಡಿಸಿದ ಬಳಿಕ 42ನೇ ಎಸಿಜೆಎಂ ಕೋರ್ಟ್ ಅವರನ್ನು 7 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿತ್ತು.

ವಿಚಾರಣೆಯಲ್ಲಿ ಏನಾಗುತ್ತಿದೆ?

ಪ್ರಕರಣದಲ್ಲಿ ಜಮೀನು ವಿವಾದ, ರಿಯಲ್ ಎಸ್ಟೇಟ್ ವ್ಯವಹಾರಗಳು ಮತ್ತು ರೌಡಿಶೀಟರ್ ಗ್ಯಾಂಗ್‌ಗಳ ಸಂಬಂಧಗಳು ಕೇಂದ್ರಬಿಂದುವಾಗಿವೆ. ಬೈರತಿ ಬಸವರಾಜ್ ಅವರು ಆರೋಪಿಗಳಿಗೆ ಬೆಂಬಲ ನೀಡಿದ್ದಾರೆ ಎಂಬ ಆರೋಪವಿದೆ. ಸಿಐಡಿ ತನಿಖೆ ಚುರುಕುಗೊಂಡಿದ್ದು, ಮುಂದಿನ ದಿನಗಳಲ್ಲಿ ಹೊಸ ಬೆಳವಣಿಗೆಗಳು ಸಾಧ್ಯವಿದೆ.

Exit mobile version