ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ಐವರು ದುರ್ಮ*ರಣ

Untitled design (18)

ದಾನಾಪುರ: ಬಿಹಾರದ ದಾನಾಪುರದಲ್ಲಿ ಘೋರವಾದ ದುರಂತ ಸಂಭವಿಸಿದೆ. ಭಾನುವಾರ ರಾತ್ರಿ ಮನೆಯ ಮೇಲಾವಣಿ ಕುಸಿದು ಒಂದೇ ಕುಟುಂಬದ ಐದು ಸದಸ್ಯರು ಸಾವನ್ನಪ್ಪಿದ್ದಾರೆ. ಈ ಘಟನೆ ದಾನಾಪುರದ ದಿಯಾರಾ ಪ್ರದೇಶದ ಅಕಿಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾನಸ್ ನಯಾ ಪಣಾಪುರ 42 ಪಟ್ಟಿ ಎಂಬ ಸ್ಥಳದಲ್ಲಿ ನಡೆದಿದೆ.

ಈ ದುರಂತದಲ್ಲಿ ಮನೆಯ ಮಾಲೀಕ ಬಬ್ಬು ಖಾನ್ (40), ಅವರ ಪತ್ನಿ ರೋಷನ್ ಖಾತೂನ್ (35), ಮತ್ತು ಅವರ ಮೂವರು ಕಿರಿಯ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದೆ. ಹನ್ನೆರಡು ವರ್ಷದ ಪುತ್ರಿ ರುಕ್ಸಾರ್, ಎರಡು ವರ್ಷದ ಕನ್ಯಾ ಶಿಶು ಚಾಂದನಿ, ಮತ್ತು ಹತ್ತು ವರ್ಷದ ಪುತ್ರ ಮೊ ಚಂದ್ ಎಂಬ ಮೂವರು ಮಕ್ಕಳು ಸ್ಥಳದಲ್ಲೇ ಮರಣ ಹೊಂದಿದ್ದಾರೆ. 

ಭಾನುವಾರ ರಾತ್ರಿ ನಿದ್ದೆಯ ಸಮಯದಲ್ಲಿ ಹಠಾತ್ತನೆ ಮನೆಯ ಮೇಲ್ಛಾವಣಿ ಕುಸಿಯಿತು. ಮನೆಯಲ್ಲಿದ್ದ ಐದು ಸದಸ್ಯರೆಲ್ಲರೂ ಕುಸಿದ ಅವಶೇಷಗಳ ಕೆಳಗೆ ಸಿಕ್ಕಿಹಾಕಿಕೊಂಡರು. ನೆರೆಹೊರೆಯವರು ಕೇಳಿದ ಭೀಕರ ಶಬ್ದ ಮತ್ತು ಕೂಗಾಟಗಳ ನಡುವೆ ತಕ್ಷಣ ಸ್ಥಳಕ್ಕೆ ಧಾವಿಸಿದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಳಿಸರು ಸ್ಥಲಕ್ಕೆ ಭೇಟಿ  ಈಟಿ ಪರಿಶೀಲನೆ ನಡೆಸಿ, ರೆಸ್ಕ್ಯೂ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಕಾಂಕ್ರೀಟ್ ಮತ್ತು ಇತರ ಕಟ್ಟಡ ಸಾಮಗ್ರಿಗಳನ್ನು ಕೈಯಿಂದಲೇ ತೆಗೆಯಲು ಪ್ರಯತ್ನಿಸಿದರು. ಆದರೆ, ದುರದೃಷ್ಟವಶಾತ್, ರಕ್ಷಣಾ ತಂಡಗಳು ಅವಶೇಷಗಳಿಂದ ಸಜೀವ ವ್ಯಕ್ತಿಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಎಲ್ಲ ಐದು ಜನರ ದೇಹಗಳನ್ನು ಮರಣೋತ್ತರ ಪರೀಕ್ವೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಕಿಲ್ಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಮನೆಯ ಮೇಲಾವಣಿ ಕುಸಿದು ಒಂದೇ ಕುಟುಂಬದ ಐದು ಸದಸ್ಯರು ಸಾವನ್ನಪ್ಪಿದ್ದಾರೆ ಎಂಬುದು ದುಃಖದಾಯಕ ಸಂಗತಿ. ಮೃತರ ಶವಗಳನ್ನು ಮರಣೊತ್ತರ ಪರೀಕ್ಷೆ ನಂತರ ಬಂಧುಗಳಿಗೆ ಮೃತದೇಹಗಳನ್ನ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋ ಪಲ್ಟಿಯಾಗಿ ಗಾಯಗೊಂಡ ಯುವಕ ಒದ್ದಾಡಿ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸರಕು ಸಾಗಣೆ ಆಟೋ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ಯುವಕ ಗಂಭೀರವಾಗಿ ಗಾಯಗೊಂಡಿದ್ದರೂ, ಚಾಲಕ ಸ್ಥಳದಿಂದ ಪಲಾಯನ ಮಾಡಿದ್ದಾನೆ. ಗಾಯಗೊಂಡು ಯುವಕ ಒದ್ದಾಡಿ ಸಾವನ್ನಪ್ಪಿದ್ದಾನೆ.

ಈ ಅಪಘಾತವು ಬೆಂಗಳೂರಿನ ಮೈಕ್ರೋ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸರಕು ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಮಯದಲ್ಲಿ ಚಾಲಕನ ಎಡಭಾಗದಲ್ಲಿ ಪ್ರಯಾಣಿಕ ಆಸನದಲ್ಲಿ ಕುಳಿತಿದ್ದ ಯುವಕನ ಮೇಲೆ ಆಟೋ ಬಿದ್ದು, ಅವನು ಗಂಭೀರವಾಗಿ ಗಾಯಗೊಂಡಿದ್ದಾನೆ.

ಘಟನೆಯ ನಂತರ ಸ್ಥಳೀಯ ನಿವಾಸಿಗಳ ನೆರವಿನಿಂದ ಆಟೋವನ್ನು ಮೇಲೆತ್ತಿ, ಗಾಯಗೊಂಡ ಯುವಕನನ್ನು ಫುಟ್‌ಪಾತ್‌ ಮೇಲೆ ಹಾಕಿದ್ದಾರೆ.ಆದರೆ, ಸ್ನೇಹಿತನ ಪರಿಸ್ಥತಿ ಕಂಡು ಆಟೋ ಚಾಲಕ ಪರಾರಿಯಾಗಿದ್ದಾರೆ ನಂತರ ಗಾಯಗೊಂಡ ಯುವಕನು ಒದ್ದಾಡಿ ಒದ್ದಾಡಿ ಪ್ರಾಣಬಿಟ್ಟಿದ್ದಾನೆ.

ಘಟನೆಯ ಬಗ್ಗೆ ಮಾಹಿತಿ ಬಂದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಪಲಾಯನ ಮಾಡಿದ ಆಟೋ ಚಾಲಕನ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಚಾಲಕನ ವಿರುದ್ಧ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.

 

Exit mobile version