ಡಿಸೆಂಬರ್ 26ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ?

Untitled design 2025 12 24T194217.650

ಬೆಂಗಳೂರು, ಡಿ.24: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಡಿಸೆಂಬರ್‌ 26ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಪ್ರಕಟಣೆ ಹೊರಡಿಸಿದೆ. ಕೆಪಿಟಿಸಿಎಲ್‌ (KPTCL) ವತಿಯಿಂದ ತುರ್ತು ನಿರ್ವಾಹಣಾ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆ, ನಗರದ ಕೆಲವು ಪ್ರಮುಖ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ನಿಗದಿತ ಅವಧಿಗೆ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಲಾಗಿದೆ.

ಚಂದ್ರ ಲೇಔಟ್ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ

ಬೆಸ್ಕಾಂ ನೀಡಿರುವ ಮಾಹಿತಿಯಂತೆ, 66/11 ಕೆ.ವಿ. ಚಂದ್ರ ಲೇಔಟ್ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಡಿಸೆಂಬರ್‌ 26ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಅವಧಿಯಲ್ಲಿ ಕೆಪಿಟಿಸಿಎಲ್‌ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.

ವಿದ್ಯುತ್‌ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು

ಚಂದ್ರ ಲೇಔಟ್ ಉಪಕೇಂದ್ರ ವ್ಯಾಪ್ತಿಯ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ. ಆರ್‌.ಪಿ‌.ಸಿ. ಲೇಔಟ್‌, ರೆಮ್ಕೋ ಲೇಔಟ್‌, ಕಲ್ಯಾಣ್ ಲೇಔಟ್‌, ಸುಬ್ಬಣ್ಣ ಗಾರ್ಡನ್‌, ವಿಡಿಯಾ ಲೇಔಟ್‌, ಎಂ.ಆರ್‌.ಸಿ.ಆರ್‌. ಲೇಔಟ್‌, ಚಂದ್ರ ಲೇಔಟ್‌, ಬಾಪೂಜಿ ಲೇಔಟ್‌, ವಿನಾಯಕ ಲೇಔಟ್‌, ಮೂಡಲಪಾಳ್ಯ, ಸ್ಕೈಲೈನ್ ಅಪಾರ್ಟ್‌ಮೆಂಟ್‌, ಕೆನರಾ ಬ್ಯಾಂಕ್ ಕಾಲೋನಿ, ವಿದ್ಯಾಗಿರಿ ಲೇಔಟ್‌, ಗಂಗೊಂಡನಹಳ್ಳಿ, ಸುವರ್ಣ ಲೇಔಟ್‌, ಬಿಡಿಎ 13ನೇ ಮತ್ತು 14ನೇ ಬ್ಲಾಕ್‌, ಕೆಂಗುಟೆ, ಭೈರವೇಶ್ವರನಗರ, ನಾಗರಬಾವಿ ಕೊಕನಟ್ ಗಾರ್ಡನ್‌, ಕಾವೇರಿ ಲೇಔಟ್‌, ಎಸ್‌.ವಿ‌.ಜಿ. ಗಾರ್ಡನ್‌, ಸಂಜೀವಿನಿ ನಗರ, ಎನ್‌.ಜಿ‌.ಇ‌.ಎಫ್‌ ಲೇಔಟ್‌, ಕಲ್ಯಾಣನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ವಿದ್ಯುತ್‌ ವ್ಯತ್ಯಯದ ವ್ಯಾಪ್ತಿಗೆ ಬರಲಿವೆ.

ಕಟ್ಟಿಗೇನಹಳ್ಳಿ ವ್ಯಾಪ್ತಿಯಲ್ಲೂ ಪವರ್‌ ಕಟ್‌

ಇದೇ ದಿನ 66/11 ಕೆ.ವಿ. ಕಟ್ಟಿಗೇನಹಳ್ಳಿ ವಿದ್ಯುತ್ ಕೇಂದ್ರ ವ್ಯಾಪ್ತಿಯಲ್ಲಿಯೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ಮಾಹಿತಿ ಪ್ರಕಾರ, ಇಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕರೆಂಟ್‌ ಇರಲ್ಲ.

ಈ ವ್ಯಾಪ್ತಿಯಲ್ಲಿ ಉತ್ತರ ಗೇಟ್‌ 1, 2, 3, ರಾಯಭಾರ ಕಚೇರಿ ಪ್ರದೇಶ, ಫಿಲಿಪ್ಸ್ ಕಂಪನಿ, ದ್ವಾರಕಾನಗರ, ಬಾಬಾನಗರ, ಕಟ್ಟಿಗೇನಹಳ್ಳಿ ಸರ್ಡಿಂಗ್‌, ಬಾಗಲೂರು ಕ್ರಾಸ್‌, ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, ಬಿಎಸ್‌ಎಫ್‌, ಪಿಡಿಎಂಎಸ್‌, ವಿನಾಯಕನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಒಳಗೊಂಡಿವೆ.

ವಿದ್ಯುತ್ ಸಮಸ್ಯೆಗಳಿಗೆ 1912 ಅಥವಾ ವಾಟ್ಸ್‌ಆ್ಯಪ್‌ ಮೂಲಕ ದೂರು

ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಸಾರ್ವಜನಿಕರು ತಕ್ಷಣ ಬೆಸ್ಕಾಂನ 1912 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಒಂದು ವೇಳೆ 1912 ಲಭ್ಯವಾಗದಿದ್ದರೆ, ಬೆಸ್ಕಾಂ ನೀಡಿರುವ ವಾಟ್ಸ್‌ಆ್ಯಪ್‌ ಸಹಾಯವಾಣಿ ಸಂಖ್ಯೆಗಳ ಮೂಲಕವೂ ದೂರು ಸಲ್ಲಿಸಲು ಅವಕಾಶವಿದೆ.

ಬೆಂಗಳೂರು ನಗರ ವಾಟ್ಸ್‌ಆ್ಯಪ್‌ ಸಹಾಯವಾಣಿ ಸಂಖ್ಯೆಗಳು

ಬೆಸ್ಕಾಂ ಅಧಿಕಾರಿಗಳು ಸಾರ್ವಜನಿಕರು ಸಹಕರಿಸುವಂತೆ ಹಾಗೂ ತುರ್ತು ಕಾಮಗಾರಿ ಪೂರ್ಣಗೊಂಡ ನಂತರ ವಿದ್ಯುತ್‌ ಪೂರೈಕೆಯನ್ನು ಶೀಘ್ರವಾಗಿ ಪುನಃ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Exit mobile version