ಭಾರೀ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ: ತಾಯಿ-ಮಗನಿಗೆ ಗಂಭೀರ ಗಾಯ

Untitled design 2026 04 01T221507.231

ಬೆಳಗಾವಿ : ಅಕಾಲಿಕ ಗಾಳಿ- ಭಾರೀ ಮಳೆಗೆ ಮನೆಯ ಮೇಲೆ ತೆಂಗಿನ ಮರ ಬಿದ್ದು ತಾಯಿ ಮತ್ತು ಮಗನಿಗೆ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ನಡೆದಿದೆ.

ನೀಲವ್ವ ಯಲ್ಲಯ್ಯನವರ (70) ಮತ್ತು ಉಳವಪ್ಪ ಯಲ್ಲಯ್ಯನವರ (37) ಗಾಯಗೊಂಡವರು. ಮಂಗಳವಾರ ಸಂಜೆ ರಭಸವಾಗಿ ಬೀಸಿದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಮನೆ ಪಕ್ಕದಲ್ಲಿದ್ದ ತೆಂಗಿನ ಮರವೊಂದು ಬೇರು ಸಮೇತ ಉರುಳಿ ಮನೆಯ ಮೇಲೆ ಬಿದ್ದಿದೆ. ಈ ವೇಳೆ ಮನೆಯೊಳಗೆ ನಿದ್ರಿಸುತ್ತಿದ್ದ ನೀಲವ್ವ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಪುತ್ರ ಉಳವಪ್ಪಗೂ ಸಹ ಗಾಯಗಳಾಗಿವೆ.

ಮನೆಗೆ ಭಾರೀ ಹಾನಿ
ಮರ ಬಿದ್ದ ಪರಿಣಾಮ ಮನೆಯ ಛಾವಣಿ ಮತ್ತು ಗೋಡೆಗೆ ಭಾರೀ ಹಾನಿಯಾಗಿದೆ. ಮನೆಯ ಸುತ್ತಮುತ್ತಲೂ ಮರದ ರೆಂಬೆಗಳು ಬಿದ್ದು ಚೆಲ್ಲಾಪಿಲ್ಲಿಯಾಗಿವೆ. ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನೀಲವ್ವ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳವಪ್ಪ ಅವರಿಗೂ ಸಹ ಸ್ವಲ್ಪ ಗಾಯಗಳಾಗಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಬೆಳಗಾವಿಯಲ್ಲಿ ಬಸ್ ಹತ್ತುವ ವೇಳೆ ಚಕ್ರದಡಿ ಸಿಲುಕಿದ ಮಗು ಗಂಭೀರ ಗಾಯ

ಸವದತ್ತಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಬರದಲ್ಲಿ ತಾಯಿಯ ಕೈಯಿಂದ ಜಾರಿ ಬಿದ್ದ ಮಗು ಬಸ್ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದೆ. ಈ ಅಪಘಾತವು ಬಾರಿ ಅನಾಹುತವನ್ನು ತಪ್ಪಿಸಿದೆ.

ಘಟನೆಯ ವಿವರ: ಸವದತ್ತಿಯಿಂದ ಬೆಳವಡಿ ಕಡೆಗೆ ಹೊರಟಿದ್ದ ಬಸ್‍ನಲ್ಲಿ ಸೀಟು ಹಿಡಿಯುವ ಬರದಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಓಡೋಡಿ ಬಸ್ ಹತ್ತುವ ಪ್ರಯತ್ನ ಮಾಡುತ್ತಿದ್ದಳು. ಈ ವೇಳೆ ಶಕ್ತಿ ಯೋಜನೆಯ ಪ್ರಭಾವದಿಂದಾಗಿ ಬಸ್‍ನಲ್ಲಿ ಸೀಟುಗಳಿಗಾಗಿ ನಡೆದ ತುಸುಕು ತುಸುಕಿನಲ್ಲಿ ತಾಯಿಯ ಕೈಯಿಂದ ಮಗು ಜಾರಿ ಬಿದ್ದಿದೆ.

ಕೆಳಗೆ ಬಿದ್ದ ಮಗು ಬಸ್‍ನ ಮುಂದಿನ ಚಕ್ರದಡಿ ಸಿಲುಕಿದೆ. ಬಸ್ ಸಂಚರಿಸುತ್ತಿದ್ದ ಕಾರಣ ಮಗುವಿನ ಕಾಲಿನ ಮೇಲೆ ಬಸ್ ಹರಿದು ಹೋಗಿದೆ. ಪರಿಣಾಮವಾಗಿ ಮಗುವಿನ ಕಾಲು ಸಂಪೂರ್ಣವಾಗಿ ಜಖಂಗೊಂಡಿದೆ.

ಮಗುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾಕ್ಟರ್‌‌ಗಳು ಮಗುವಿನ ಗಾಯಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ. ಗಾಯದ ತೀವ್ರತೆ ಹೆಚ್ಚಾಗಿದ್ದರೂ, ಮಗುವಿನ ಜೀವ ಉಳಿದಿದೆ ಎಂದು ತಿಳಿದುಬಂದಿದೆ.

ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಬಸ್ ನಿಲ್ದಾಣಗಳಲ್ಲಿ ಶಕ್ತಿ ಯೋಜನೆಯಿಂದಾಗಿ ಉಂಟಾಗುತ್ತಿರುವ ರಶ್ ಮತ್ತು ಅಸ್ತವ್ಯಸ್ತತೆಯಿಂದಾಗಿ ಇಂತಹ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಸೂಕ್ತ ನಿಯಂತ್ರಣ ಮತ್ತು ಮಕ್ಕಳಿಗೆ ವಿಶೇಷ ಎಚ್ಚರಿಕೆ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

Exit mobile version