ಬೆಂಗಳೂರು: ನಗರದ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆ ಫೆಬ್ರವರಿ 10ರಂದು (ಮಂಗಳವಾರ) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕೃತವಾಗಿ ಮಾಹಿತಿ ನೀಡಿದೆ.
ನಗರದ ಪ್ರಮುಖ 66/11 ಕೆ.ವಿ “ಟೆಲಿಕಾಂ” ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಡೆಸಲಾಗುತ್ತಿರುವುದರಿಂದ ಈ ಪವರ್ ಕಟ್ ಅನಿವಾರ್ಯವಾಗಿದೆ. ನಿರ್ವಹಣಾ ಕಾರ್ಯಗಳು ಪೂರ್ಣಗೊಂಡ ಬಳಿಕ ವಿದ್ಯುತ್ ಪೂರೈಕೆಯನ್ನು ಹಂತ ಹಂತವಾಗಿ ಪುನಃ ಆರಂಭಿಸಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರಮುಖ ಪ್ರದೇಶಗಳು
ಫೆಬ್ರವರಿ 10ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಹೊಸಹಳ್ಳಿ ಮೇನ್ ರಸ್ತೆ, ಅರ್ಫಾತ್ ನಗರ (ಪಡರಾಯನಪುರ ಪೂರ್ವ ಹಾಗೂ ಪಶ್ಚಿಮ), ದೇವರಾಜ್ ಉರ್ಸ್ ನಗರ, ಸುಜಾತ ಟೆಂಟ್ ಪ್ರದೇಶ, ಜೆಜೆಆರ್ ನಗರ, ಹೆಗ್ಡೆ ಆಸ್ಪತ್ರೆ ಸುತ್ತಮುತ್ತ, ಸಂಗಂ ಸರ್ಕಲ್, ಒಬ್ಲೀಶ್ ಕಾಲೋನಿ, ವಿ.ಎಸ್. ಗಾರ್ಡನ್, ರಾಯಪುರಂ, ಬಿನ್ನಿ ಪೇಟೆ, ಪಡರಾಯನಪುರ, ಗೋಪಾಲನ್ ಮಾಲ್ ಪ್ರದೇಶ, ಮೈಸೂರು ರಸ್ತೆ 1ನೇ, 2ನೇ ಮತ್ತು 3ನೇ ಕ್ರಾಸ್, ಮೊಮಿನ್ಪುರ, ಜನತಾ ಕಾಲೋನಿ, ಶಮನಾ ಗಾರ್ಡನ್, ರಂಗನಾಥ ಕಾಲೋನಿ, ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟ್ಸ್ (ಬಿನ್ನಿ ಪೇಟೆ), ಅಂಜನಪ್ಪ ಗಾರ್ಡನ್, ದೊರಸ್ವಾಮಿ ನಗರ, ಫ್ಲವರ್ ಗಾರ್ಡನ್, ನ್ಯೂ ಪೊಲೀಸ್ ಕ್ವಾರ್ಟರ್ಸ್, ಎಸ್.ಡಿ. ಮಠ ಪ್ರದೇಶ, ಕಾಟನ್ಪೇಟೆ, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಮಾನವರ್ಥಿ ಪೇಟೆ, ಸುಲ್ತಾನ್ಪೇಟೆ, ನಾಲಬಂಡವಾಡಿ (ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಎದುರು), ಪೊಲೀಸ್ ರಸ್ತೆ, ಟೆಲಿಕಾಂ ಲೇಔಟ್, ಅಂಬೇಡ್ಕರ್ ಲೇಔಟ್, ಕುಷ್ಠರೋಗ ಆಸ್ಪತ್ರೆ ಪ್ರದೇಶ, ನಾಗಮ್ಮ ನಗರ, ಚೆಲುವಪ್ಪ ಗಾರ್ಡನ್, ಎಸ್ಬಿಐ ಕ್ವಾರ್ಟರ್ಸ್, ಗೋಪಾಲನ್ ಅಪಾರ್ಟ್ಮೆಂಟ್ಸ್, ಮರಿಯಪ್ಪನ ಪಾಳ್ಯ, ಕೆ.ಪಿ. ಅಗ್ರಹಾರ, ಕೆ.ಪಿ.ಎಸ್. ಮಠ ಪ್ರದೇಶ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ, ಇಟಿಎ ಅಪಾರ್ಟ್ಮೆಂಟ್ಸ್, ಆರೋಗ್ಯ ಭವನ ಪ್ರದೇಶ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ಮೆಂಟ್ಸ್, ಹಂಪಿನಗರ, ವಿಜಯನಗರ, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ ಹಾಗೂ ಸುತ್ತಮುತ್ತಲ ಪ್ರದೇಶಗಳು ಸೇರಿವೆ.
ನಿಮ್ಹಾನ್ಸ್–ಜಯದೇವ ಉಪಕೇಂದ್ರ ವ್ಯಾಪ್ತಿಯಲ್ಲೂ ವಿದ್ಯುತ್ ವ್ಯತ್ಯಯ
ಇದೇ ದಿನ, ನಿಮ್ಹಾನ್ಸ್ ಹಾಗೂ ಜಯದೇವ ಉಪಕೇಂದ್ರಗಳ ವ್ಯಾಪ್ತಿಯಲ್ಲೂ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಎಸ್-1 ನಿಮ್ಹಾನ್ಸ್, ಕಿದ್ವಾಯ್, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಹಾಗೂ ಇಂದಿರಾ ಗಾಂಧಿ ಆಸ್ಪತ್ರೆ ಪ್ರದೇಶಗಳು, ಜಯನಗರ 1, 2, 3, 4 ಹಾಗೂ 9ನೇ ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್, ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ, ಐಎಎಸ್ ಹಾಗೂ ಕೆಎಎಸ್ ಕಾಲೋನಿ, ಎನ್.ಎಸ್ ಪಾಳ್ಯ ಇಂಡಸ್ಟ್ರಿಯಲ್ ಏರಿಯಾ, ಜಾಹ್ನವಿ ಎನ್ಕ್ಲೇವ್, ಅನಂತ ಲೇಔಟ್, ಬಿಳೇಕಳ್ಳಿ ಮೇನ್ ರೋಡ್, ಜಯನಗರ ಈಸ್ಟ್ ಎಂಡ್, ಬಿಎಚ್ಇಎಲ್ ಲೇಔಟ್, ಎಸ್.ಆರ್.ಕೆ ಗಾರ್ಡನ್, ಎನ್.ಎಲ್ ಲೇಔಟ್, ತಿಲಕ್ ನಗರ, ಜಯದೇವ ಆಸ್ಪತ್ರೆ ಸುತ್ತಮುತ್ತ, ಬಿಟಿಎಮ್ ಮೊದಲನೇ ಹಂತ, ವೆಗಾಸಿಟಿ ಮಾಲ್, ಎರ್ಟೆಲ್ ಆಫೀಸ್, ಕೆ.ಇ.ಬಿ ಕಾಲೋನಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಸಾರ್ವಜನಿಕರಿಗೆ ಬೆಸ್ಕಾಂ ಮನವಿ
ವಿದ್ಯುತ್ ವ್ಯತ್ಯಯದಿಂದ ಉಂಟಾಗುವ ಸಮಸ್ಯೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ. ಅಗತ್ಯವಿದ್ದಲ್ಲಿ ಮೊಬೈಲ್ ಚಾರ್ಜಿಂಗ್, ಇನ್ವರ್ಟರ್ ಹಾಗೂ ಇತರ ತುರ್ತು ವ್ಯವಸ್ಥೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
