ಮ್ಯಾನ್ಮಾರ್ ಭೂಕಂಪಕ್ಕೂ ಮುನ್ನ ಭವಿಷ್ಯ ನುಡಿದಿದ್ದ ಜ್ಯೋತಿಷಿ ಅಭಿಜ್ಞ

Untitled design 2025 03 31t133910.827

ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಭೂಕಂಪ ಸಂಭವಿಸಿ ಭಾರೀ ತೊಂದರೆ ಉಂಟುಮಾಡಿದೆ. ಈ ಭೂಕಂಪ ಸಂಭವಿಸುವ 21 ದಿನಗಳ ಮುಂಚೆನೇ ಜ್ಯೋತಿಷಿ ಅಭಿಜ್ಞ ಆನಂದ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮುನ್ಸೂಚನೆ ನೀಡಿದ್ದರು. ಅವರ ಭವಿಷ್ಯ ನಿಜವಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ.

ಮ್ಯಾನ್ಮಾರ್‌ನಲ್ಲಿ ಭೂಕಂಪ

ಈ ಭೂಕಂಪದಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಈಗಾಗಲೇ 1,000 ಕ್ಕೆ ಹೆಚ್ಚು ಆಗಿದ್ದು, 2,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಜೋರಾಗಿದ್ದು, ಅವಶೇಷಗಳಡಿ ಸಿಕ್ಕಿಬಿದ್ದವರನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ. ಈ ಭೀಕರ ಪರಿಸ್ಥಿತಿಯಲ್ಲಿ, ಭೂಕಂಪದ ಮುನ್ಸೂಚನೆಗಳು ಪ್ರಾಣಾಪಾಯ ತಪ್ಪಿಸಲು ಸಹಾಯ ಮಾಡಬಹುದಾಗಿತ್ತೇ ಎಂಬ ಪ್ರಶ್ನೆ ಮೂಡಿದೆ.

ಭೂಕಂಪದ ಮುನ್ಸೂಚನೆ

ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಈ ಭೂಕಂಪ ಸಂಭವಿಸುವುದನ್ನು ಕಿರಿಯ ಜ್ಯೋತಿಷಿ ಅಭಿಜ್ಞ ಆನಂದ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 21 ದಿನಗಳ ಮುಂಚೆ ಹೇಳಿದ್ದರು. ಅವರ ಮುನ್ಸೂಚನೆ ನಿಜವಾಗಿದ್ದು, ಮತ್ತೊಮ್ಮೆ ಅವರು  ನುಡಿದ ಭವಿಷ್ಯ ಸಾಬೀತಾಗಿದೆ.

ಯಾರು ಈ ಅಭಿಜ್ಞ ಆನಂದ್?

ಅಭಿಜ್ಞ ಆನಂದ್ ಕರ್ನಾಟಕ ಮೂಲದವರು. ಕೇವಲ 20 ವರ್ಷದ ಈ ಯುವ ಜ್ಯೋತಿಷಿ ತಾವು ತ್ರಿಕಾಲಜ್ಞ ಎಂದು ಪರಿಗಣಿಸಿಕೊಂಡಿದ್ದಾರೆ. ಅವರು ಹಲವು ಮಹತ್ವದ ಘಟನೆಗಳನ್ನು ಮುನ್ಸೂಚನೆ ನೀಡಿದ್ದು, ಪ್ರತೀ ಬಾರಿಯೂ ಅವರ ಭವಿಷ್ಯ ನಿಜವಾಗುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಅವರು ತಮ್ಮ ಜ್ಯೋತಿಷ್ಯ ಅಭ್ಯಾಸವನ್ನು ಕಿರಿಯ ವಯಸ್ಸಿನಿಂದಲೇ ಪ್ರಾರಂಭಿಸಿದರು. 7ನೇ ವಯಸ್ಸಿಗೆ ಭಗವದ್ಗೀತೆಯನ್ನು ಪಾಠ ಮಾಡಿದರು. 11ನೇ ವಯಸ್ಸಿನಿಂದ ಜ್ಯೋತಿಷ್ಯ ಅಧ್ಯಯನ ಆರಂಭಿಸಿದರು ಮತ್ತು 12ನೇ ವಯಸ್ಸಿನಲ್ಲಿ ವಾಸ್ತು ಶಾಸ್ತ್ರದಲ್ಲಿ ಪದವಿ ಪಡೆದರು. 2018ರಲ್ಲಿ ಪ್ರಜ್ಞಾ ಜ್ಯೋತಿಷ್ಯ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ವಿಡಿಯೋ ಅಪ್‌ಲೋಡ್ ಮತ್ತು ಭವಿಷ್ಯ

ಈ ವರ್ಷದ ಮಾರ್ಚ್ 1ರಂದು, ಅಭಿಜ್ಞ ಆನಂದ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭೂಕಂಪದ ಬಗ್ಗೆ ಮುನ್ಸೂಚನೆ ನೀಡುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ, ಮೂರು ವಾರಗಳ ಒಳಗಾಗಿ ಮ್ಯಾನ್ಮಾರ್ ಭೂಕಂಪದಿಂದ ತತ್ತರಿಸಲಿದೆ ಎಂದು ಅವರು ಭವಿಷ್ಯ ನುಡಿದರು. ಈ ಮುನ್ಸೂಚನೆಯಂತೆ ಮ್ಯಾನ್ಮಾರ್ ಭೂಕಂಪನಕ್ಕೆ ತತ್ತರಿಸಿ ಹೋಗಿದೆ. 

ಹಿಂದಿನ ಭವಿಷ್ಯಗಳು

ಅಭಿಜ್ಞ ಆನಂದ್ ಅವರ ಭವಿಷ್ಯ ನುಡಿದ ಘಟನೆಗಳು ನಿರಂತರವಾಗಿ ನಿಜವಾಗುತ್ತಲೇ ಇವೆ. ಪ್ರಮುಖವಾದವುಗಳು ಇವು

ಅಭಿಜ್ಞ ಆನಂದ್ ಅವರ ಭವಿಷ್ಯಕ್ಕೆ ಜನರ ಪ್ರತಿಕ್ರಿಯೆ

ಅಭಿಜ್ಞ ಆನಂದ್ ಅವರ ಭವಿಷ್ಯ ನಿರೂಪಣೆಗೆ ಭಾರಿ ಫಾಲೋವರ್ಸ್ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ, ಅವರ ಜ್ಯೋತಿಷ್ಯ ತಿಳಿವಳಿಕೆಗೆ ವಿಶ್ವದಾದ್ಯಂತ ಒಲವು ವ್ಯಕ್ತವಾಗಿದೆ. ಅವರ ಅಚ್ಚುಕಟ್ಟಾದ ಮುನ್ಸೂಚನೆಗಳು ಹೆಚ್ಚಿನ ಜನರನ್ನು ವಿಶ್ವಾಸಕ್ಕೆ ತರುವಂತೆ ಮಾಡಿದೆ. ಭವಿಷ್ಯವನ್ನು ನಿಖರವಾಗಿ ಹೇಳುವ ಕಲೆ ಹೊಂದಿರುವ ಅಭಿಜ್ಞ ಆನಂದ್ ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ಮುನ್ಸೂಚನೆ ನೀಡಬಹುದೆಂಬ ನಿರೀಕ್ಷೆಯಿದೆ.

Exit mobile version