ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1!: ಮತ್ತೊಂದು ಯಡವಟ್ಟು ಮಾಡಿದ ಸಿಎಂ ಆರ್ಥಿಕ ಸಲಹೆಗಾರ

Untitled design 2025 04 09t203037.539

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸ್ತಿದೆ.‌ ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್, ಅಧಿಕಾರದ ಗದ್ದುಗೆ ಏರಲು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿತ್ತು.‌ ಆದ್ರೆ ಅದೇ ಕಮಿಷನ್ ಆರೋಪ ಕಾಂಗ್ರೆಸ್ ಸರ್ಕಾರಕ್ಕೂ ಕುತ್ತು ತರುವ ಲಕ್ಷಣ ಕಂಡುಬರುತ್ತಿದೆ.‌ ಅದರಲ್ಲೂ ‌ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ‌ಬಸವರಾಜ್ ರಾಯರೆಡ್ಡಿ ಕರ್ನಾಟಕ ಭ್ರಷ್ಟಾಚಾರದಲ್ಲಿದೆ ಎನ್ನೋ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನಕ್ಕೆ ಕಾರಣರಾಗಿದ್ದಾರೆ. ಅಲ್ಲದೇ‌ ಬಸವರಾಜ್‌ ರಾಯರೆಡ್ಡಿ ಮಾಡಿರೋ ಯಡವಟ್ಟು ಬಿಜೆಪಿಗೆ ಸಂಚಕಾರ ತಂದೊಡ್ಡತ್ತಾ ಅನ್ನೋ ಪ್ರಶ್ನೆ ಮೂಡಿದೆ.

ಸರ್ಕಾರ ಆಡಳಿತಕ್ಕೆ ಬಂದ‌ ದಿನದಿಂದಲೂ ಗುತ್ತಿಗೆದಾರರ ಸಂಘ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಲೇ ಇದೆ.‌‌ ಇತ್ತ‌ ಕೊಪ್ಪಳದಲ್ಲಿ ಸಿಎಂ‌ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ ಎಂದು‌ ಹೇಳಿದ್ದು ಬಿಜೆಪಿ, ಜೆಡಿಎಸ್‌ಗೆ ಅಸ್ತ್ರವನ್ನಾಗಿಸಿದೆ. ರಾಜ್ಯ ಸರ್ಕಾರದ ‌ಬೆಲೆ ಏರಿಕೆ ವಿರುದ್ಧ‌ ಹೋರಾಟಕ್ಕೆ ಮುಂದಾಗ್ತಿರೋ‌ ಜೆಡಿಎಸ್ ಇದಕ್ಕೆ ಸಿಎಂ ಸಿದ್ದರಾಮಯ್ಯ ಏನು ಉತ್ತರ ಕೊಡ್ತಾರೆ ಅಂತ ಚಾಟಿ‌ ಬೀಸಿದರು.

ಭ್ರಷ್ಟಾಚಾರದ ಹೇಳಿಕೆ‌ ನೀಡುವ ಮೂಲಕ ಸಿಎಂ‌ ಸಿದ್ದರಾಮಯ್ಯ ಸಲಹೆಗಾರ ಮತ್ತೊಂದು ಯಡವಟ್ಟು ಮಾಡಿದ್ರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿನ ಭ್ರಷ್ಟಾಚಾರದ ಚರ್ಚೆ ಕಾಂಗ್ರೆಸ್ ಗೆ ಮುಜುಗರ ತಂದಿದೆ.‌ ಭ್ರಷ್ಟಾಚಾರಕ್ಕೆ‌ ಕಡಿವಾಣ ಹಾಕೋ‌ ನಿಟ್ಟಿನಲ್ಲಿ ನಾನು ‌ಹಲವು ಬಾರಿ ಸಿಎಂ ಪತ್ರ ಬರೆದಿದ್ದೇನೆ‌ ಎನ್ನೋ ಮೂಲಕ ರಾಯರೆಡ್ಡಿ ಸಮರ್ಥನೆಗಿಳಿದಿದ್ದಾರೆ. ಆದ್ರೆ ಸಿಎಂ‌ ಸಿದ್ದರಾಮಯ್ಯ ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಕಾದು ನೋಡೋಣ.

ದುರ್ಗೇಶ್ ನಾಯಿಕ, ಪೊಲಿಟಿಕಲ್ ಬ್ಯೂರೋ ಗ್ಯಾರಂಟಿ ನ್ಯೂಸ್ ಬೆಂಗಳೂರು
Exit mobile version