ವಿಜಯನಗರ ಮತದಾರರ ಒಲವು ಈಗಲೂ ಎಂ. ಕೃಷ್ಣಪ್ಪ ಪರ?

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Film 2025 04 04t180857.401

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಈ ಪೈಕಿ ಬೆಂಗಳೂರು ನಗರ ಜಿಲ್ಲೆಯ ವಿಜಯ ನಗರ ವಿಧಾನಸಭಾ ಕ್ಷೇತ್ರದಲ್ಲಿ 2023ರಲ್ಲಿ ನಡೆದ ವಿಧಾನಸಭಾ ಚುನವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಂ. ಕೃಷ್ಣಪ್ಪ ರವರು-80,157 (50%)ಮತಗಳಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಎಚ್.ರವೀಂದ್ರ-72,833 (46%)ಮತ ಗಳಿಸಿದ್ದರು. ಈ ಚುನಾವಣೆಯಲ್ಲಿ ಕೃಷ್ಣಪ್ಪ ಅವರು 7,324 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ವಿಜಯ ನಗರ ಕ್ಷೇತ್ರದ ಚಿತ್ರಣ..!
ಬೆಂಗಳೂರಿನಲ್ಲಿ 2008ರಲ್ಲಿ ಹೊಸದಾಗಿ ರಚನೆಯಾದ ವಿಜಯನಗರ ಕ್ಷೇತ್ರದಲ್ಲಿ ಕೃಷ್ಣಪ್ಪನವರು ಸತತ 4 ಬಾರಿ ಗೆದ್ದು ಕ್ಷೇತ್ರವನ್ನು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಜಾತಿ ಬಲದ ಜೊತೆಗೆ ಹಣ ಬಲದಲ್ಲೂ ಜೋರಾಗಿರುವ ಲೇಔಟ್ ಕೃಷ್ಣಪ್ಪ ವಿರುದ್ದ ಬಿಜೆಪಿ ಮತ್ತು ಜೆಡಿಎಸ್‌‌‌‌ನ ನಾಯಕರು ಸತತ ಸೋಲು ಕಾಣುತ್ತಿದ್ದಾರೆ. 2013ರಲ್ಲಿ ಕೃಷ್ಣಪ್ಪ ವಿರುದ್ದ ಪ್ರಬಲ ಸ್ಪರ್ಧೆ ನೀಡಿ ವಿ.ಸೋಮಣ್ಣ ಸಹ ಸೋಲು ಕಂಡಿದ್ದರು. ನಂತರ 2018 ಹಾಗೂ 2023ರಲ್ಲೂ ಎಚ್. ರವೀಂದ್ರ ಸೋಲು ಕಂಡರು. ಈ ಮೂಲಕ ಒಕ್ಕಲಿಗ ಜೊತೆ ಅಹಿಂದ ಮತಗಳ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಕೃಷ್ಣಪ್ಪ ರವರೆ ಗೆದ್ದು ಬಿಗಿದ್ದಾರೆ.

ಬೆಂಗಳೂರಿನಲ್ಲಿ ಅಭಿವೃದ್ಧಿ ಹೊಂದಿರುವ ಪ್ರದೇಶಗಳಲ್ಲಿ ವಿಜಯನಗರ ಕ್ಷೇತ್ರ ಕೂಡಾ ಒಂದಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನ ನಮ್ಮ ಪರ ಇದ್ದಾರೆ ಅನ್ನೋದು ಕೃಷ್ಣಪ್ಪನವರ ನಂಬಿಕೆ. ಜೊತೆಗೆ ಅಹಿಂದ, ಪ್ರಜ್ಞಾವಂತ ಮತದಾರರೇ ನಮ್ಮ ಶಕ್ತಿ ಅಂತಿದೆ ಕಾಂಗ್ರೆಸ್. ಶಾಸಕ ಎಂ.ಕೃಷ್ಣಪ್ಪ ಸ್ಥಳೀಯ ನಾಯಕರಾಗಿರುವುದರಿಂದ ಜನರಿಗೆ ಸುಲಭವಾಗಿ ಸಿಗುತ್ತಾರೆ. ತಮ್ಮ ಕಷ್ಟಗಳಿಗೆ ಬೇಗ ಪರಿಹಾರ ದೊರೆಯುತ್ತದೆ ಎಂಬುದು ಜನರ ಅಭಿಪ್ರಾಯ.

ಆದರೆ, ಇತ್ತಿಚಿನ ಬೆಲೆ ಏರಿಕೆ, ತುಷ್ಠೀಕರಣ ವಿಚಾರದಲ್ಲಿ ಲಾಭ ಪಡೆಯಲು ಬಿಜೆಪಿ ಪ್ಲಾನ್ ಮಾಡಿದೆ. ಇನ್ನು ಜೆಡಿಎಸ್ ಈ ಕ್ಷೇತ್ರದಲ್ಲಿ ಹಲವು ಪ್ರಯತ್ನ ಮಾಡಿದ್ರೂ ಸತತ ಸೋಲು ಕಂಡಿದೆ.

ಜನರ ಒಲವು ಈಗ ಯಾರ ಕಡೆ?
ಗ್ಯಾರಂಟಿ ನ್ಯೂಸ್‌‌ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಈಗಲೂ ವಿಜಯನಗರ ಕ್ಷೇತ್ರದ ಜನ ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version