ಯಶಸ್ವಿನಿ ಗೌಡ ವಿರುದ್ಧ ದೂರು ನೀಡಿದ ನಟ ಪ್ರಥಮ್!

ಬೆದರಿಕೆ, ಮಾನಹಾನಿ ಆರೋಪ: ಪ್ರಥಮ್‌ ದೂರು!

111 (23)

ದೊಡ್ಡಬಳ್ಳಾಪುರ: ಕನ್ನಡ ಚಿತ್ರರಂಗದ ನಟ ಪ್ರಥಮ್ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ಮತ್ತು ಇತರರ ವಿರುದ್ಧ ಬೆದರಿಕೆ ಮತ್ತು ಮಾನಹಾನಿ ಆರೋಪದ ದೂರು ದಾಖಲಿಸಿದ್ದಾರೆ.

ಫೋನ್ ಕರೆಗಳು ಮತ್ತು ವಿಡಿಯೋಗಳ ಮೂಲಕ ತಮಗೆ ಬೆದರಿಕೆ ಹಾಕಲಾಗಿದೆ ಎಂದು ಪ್ರಥಮ್ ಆರೋಪಿಸಿದ್ದು, ತಮ್ಮ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡಿ ಮಾನಹಾನಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಜುಲೈ 22ರಂದು ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯದ ಯಲ್ಲಮ್ಮ ದೇವಸ್ಥಾನದ ಬಳಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರಥಮ್ ದೂರು ದಾಖಲಿಸಿದ್ದರು. ಆ ಘಟನೆಯಲ್ಲಿ ಯಶಸ್ವಿನಿ ಗೌಡ ಮತ್ತು ಬೇಕರಿ ರಘು ಸೇರಿದಂತೆ ಕೆಲವರು ತಮ್ಮನ್ನು ಅಡ್ಡಗಟ್ಟಿ, ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಈ ದೂರಿನ ಮೇರೆಗೆ ಪೊಲೀಸರು ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಿದ್ದರು. ಈಗ ಮತ್ತೊಮ್ಮೆ ಯಶಸ್ವಿನಿ ಗೌಡ ವಿರುದ್ಧ ಬೆದರಿಕೆ ಮತ್ತು ಮಾನಹಾನಿಯ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version