ಹುಬ್ಬಳ್ಳಿ ಕಾಮುಕನಿಗೆ ಗುಂಡಿಟ್ಟ ಲೇಡಿ ಸಿಂಗಂ! ಹೇಗೆ ನಡೀತು ಕಾರ್ಯಾಚರಣೆ?

ಕರ್ನಾಟಕ ಇತಿಹಾಸದಲ್ಲೇ ಲೇಡಿ PSI ಮಾಡಿದ ಮೊದಲ ಎನ್‌ಕೌಂಟರ್‌

111 (19)

ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಸೃಷ್ಟಿಸಿದ್ದು ಹುಬ್ಬಳ್ಳಿಯ ಲೇಡಿ ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI) ಅನ್ನಪೂರ್ಣ. ಬಾಲಕಿಯನ್ನು ಕಿಡ್ನಾಪ್‌ ಮಾಡಿ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ್ದ ಬಿಹಾರ ಮೂಲದ ಕೀಚಕನ ಮೇಲೆ ಎನ್‌ಕೌಂಟರ್‌‌ ಮಾಡಿದ ಮೊದಲ ಮಹಿಳಾ ಪೊಲೀಸ್ ಅಧಿಕಾರಿಯಾಗಿ ಅವರು ರಾಜ್ಯದಲ್ಲಿ ಚರಿತ್ರೆ ಸೃಷ್ಟಿಸಿದ್ದಾರೆ.

ಅನ್ನಪೂರ್ಣರ ಹಿನ್ನೆಲೆ ಮತ್ತು ಸಾಧನೆ

ಅನ್ನಪೂರ್ಣ ಮೂಲತಃ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುಜನಟ್ಟಿ ಗ್ರಾಮದವರು. ಕೃಷಿಕ ಕುಟುಂಬದಿಂದ ಬಂದ ಇವರು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ MSc ಪದವಿಯನ್ನು ಪಡೆದಿದ್ದಾರೆ. 2018ರಲ್ಲಿ ಪೊಲೀಸ್ ಉಪನಿರೀಕ್ಷಕ (PSI) ಹುದ್ದೆಗೆ ಸೇರ್ಪಡೆಯಾದ ಇವರು ಪ್ರಸ್ತುತ ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ನಡೆದಿದೆ ಎನ್‌ಕೌಂಟರ್ ಘಟನೆ ಇವರ ಧೈರ್ಯ ಹಾಗೂ ಕರ್ತವ್ಯದ ನಿಷ್ಠೆಯ ಪ್ರಕಾರ ಗಮನ ಸೆಳೆದಿದೆ.

ಎನ್ಕೌಂಟರ್ ಹಿನ್ನೆಲೆ ಮತ್ತು ಘಟನೆ

ಹುಬ್ಬಳ್ಳಿಯ ಪುಟ್ಟ ಬಾಲಕಿಯನ್ನು ಬಿಹಾರದ ವ್ಯಕ್ತಿಯೊಬ್ಬ ಅಪಹರಣ ಮಾಡಿ ಹತ್ಯೆಗೈದು ಪರಾರಿಯಾಗಿದ್ದ. ಬಳಿಕ ಈ ಘಟನೆಗೆ ಸಂಬಂಧಿಸಿದಂತೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಆರೋಪಿ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಹಚ್ಚುವಲ್ಲಿ ಮುಂದಾಗಿದ್ದರು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಲೇಡಿ PSI ಅನ್ನಪೂರ್ಣ ನೇತೃತ್ವದ ತಂಡ ಕಾರ್ಯ ಮುಂದುವರೆಸಿದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಯ ಚಲನವಲನ ಪತ್ತೆ ಹಚ್ಚಿ, ಆತನನ್ನು ಬೆನ್ನತ್ತಿ ಅವನನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾದರು.

ಆರೋಪಿಯನ್ನು ಬಂಧಿಸುವ ವೇಳೆ, ಆತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾದ್ದನು. ಆಗ ಲೇಡಿ PSI ಅನ್ನಪೂರ್ಣ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ, ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಹಿನ್ನಲೆಯಲ್ಲಿ ಅನ್ನಪೂರ್ಣ ಆರೋಪಿಯ ಎದೆ ಹಾಗೂ ಕಾಲಿಗೆ ಗುಂಡು ಹಾರಿಸಿದರು. ಆರೋಪಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟದ್ದಾನೆ. 

ಪೊಲೀಸ್ ಕಮಿಷನರ್ ಶಶಿಕುಮಾರ್ ಶ್ಲಾಘನೆ

ಲೇಡಿ PSI ಅನ್ನಪೂರ್ಣ ಅವರ ಈ ದಿಟ್ಟ ಕಾರ್ಯಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಶ್ಲಾಘಿಸಿದ್ದಾರೆ. ಶಶಿಕುಮಾರ್, 2008 ಬ್ಯಾಚ್ IPS ಅಧಿಕಾರಿಯಾಗಿದ್ದು, ದಕ್ಷ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದಾರೆ. ಬೆಂಗಳೂರು ಉತ್ತರದ ಡಿಸಿಪಿಯಾಗಿದ್ದಾಗ, ಸ್ಲಂ ಭರತ ಎಂಬ ರೌಡಿಗೆ ಎನ್‌ಕೌಂಟರ್ ನಡೆಸಿ ದಿಟ್ಟ ಅಧಿಕಾರಿ ಎಂದು ಪರಿಚಿತರಾಗಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version