ಮದ್ವೆ ಆಗಿದ್ರೂ ಮೂರು ಮೂರು ಹೆಸರಿಟ್ಕೊಂಡು ಯುವಕರ ಜೊತೆ ಚೆಲ್ಲಾಟ

ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ..ದುಡ್ಡಿಗಾಗಿ ಪ್ರೀತಿ ಹೆಸರಲ್ಲಿ ಮೋಸ

BeFunky collage 2026 02 18T111602.980

ಧಾರವಾಡ ನಗರದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಯುವಕರನ್ನು ಪ್ರೀತಿ-ಮದುವೆಯ ನಾಟಕವಾಡಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆಕೆಯ ಅಸಲಿ ಹೆಸರು ಐಶ್ವರ್ಯಾ ಎಂದು ತಿಳಿದುಬಂದಿದ್ದು, ವಿವಿಧ ಯುವಕರಿಗೆ ಐಶ್ವರ್ಯಾ, ರೇಣುಕಾ, ಆರೋಹಿ ಎಂಬ ಮೂರು ಹೆಸರುಗಳನ್ನು ಬಳಸಿ ಮೋಸ ಮಾಡುತ್ತಿದ್ದಳು ಎಂದು ಆರೋಪವಿದೆ.

ಧಾರವಾಡ ತಾಲ್ಲೂಕಿನ ಕವಲಗೇರಿ ಗ್ರಾಮದ ಗುರು ವಕ್ಕುಂದ ಎಂಬ ಯುವಕನನ್ನು ಆಕೆ ಟಾರ್ಗೆಟ್ ಮಾಡಿದ್ದಳು. ಕಳೆದ 3 ವರ್ಷಗಳಿಂದ ಇಬ್ಬರ ನಡುವೆ ಸ್ನೇಹ ಮತ್ತು ಪ್ರೀತಿಯ ಸಂಬಂಧವಿತ್ತು. ಐಶ್ವರ್ಯಾ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಪ್ರಮಾಣ ಮಾಡಿ, ಗುರು ಅವರ ಕುಟುಂಬಸ್ಥರನ್ನೂ ನಂಬಿಸಿದ್ದಳು. ಆಕೆಗೆ ಈಗಾಗಲೇ ಮದುವೆಯಾಗಿ ಮಗು ಇದ್ದರೂ ಅದನ್ನು ಒಪ್ಪಿಕೊಂಡು ಮದುವೆಯಾಗುವುದಾಗಿ ಹೇಳಿದ್ದಳು.

ಆದರೆ “ನನಗೆ ಸಾಲದ ಸಮಸ್ಯೆ ಇದೆ, ಹಣ ಕೊಟ್ಟರೆ ಮದುವೆಯಾಗುತ್ತೇನೆ” ಎಂದು ಕಂಡೀಷನ್ ಹಾಕಿ ಗುರು ಕುಟುಂಬದವರಿಂದ ಸಾಲ ಮಾಡಿ 6 ಲಕ್ಷ ರೂಪಾಯಿ ಪಡೆದಿದ್ದಳು. ಹಣ ಪಡೆದ ನಂತರ ಮದುವೆಗೆ ನಿರಾಕರಿಸಿ ಹಣವನ್ನೂ ಹಿಂದಿರುಗಿಸದೆ ತಪ್ಪಿಸಿಕೊಂಡಿದ್ದಳು.

ಸಾಲಗಾರರ ಕಾಟ, ಮಾನಸಿಕ ಒತ್ತಡದಿಂದಾಗಿ ಗುರು ವಕ್ಕುಂದ ಆತ್ಮಹತ್ಯೆಗೆ ಯತ್ನಿಸಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾನೆ. ಈ ಸುದ್ದಿ ತಿಳಿದ ಐಶ್ವರ್ಯಾ ಧಾರವಾಡ ಜಿಲ್ಲಾ ಆಸ್ಪತ್ರೆಗೆ “ಬಾಯ್‌ಫ್ರೆಂಡ್” ನೋಡಲು ಬಂದಿದ್ದಳು. ಆದರೆ ಅಲ್ಲಿಗೆ ಬಂದ ಗುರು ಅವರ ಪೋಷಕರು ಮತ್ತು ಸಂಬಂಧಿಕರು ಆಕೆಯನ್ನು ನಡುರಸ್ತೆಯಲ್ಲೇ ಧರ್ಮದೇಟು  ನೀಡಿದ್ದಾರೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು ಎಂದು ವರದಿಯಾಗಿದೆ.

ಪೊಲೀಸರು ಈಕೆಯ ವಿರುದ್ಧ ದೂರು ಪಡೆದು ತನಿಖೆ ನಡೆಸುತ್ತಿದ್ದಾರೆ. ಯುವಕರನ್ನು ಟಾರ್ಗೆಟ್ ಮಾಡಿ ಹಣ ಪೀಕುವ ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿರುವುದರಿಂದ ಜಾಗೃತರಾಗಿರಿ ಎಂದು ಸಾರ್ವಜನಿಕರು ಎಚ್ಚರಿಕೆ ನೀಡುತ್ತಿದ್ದಾರೆ.

ಇದು ಆರೋಪ ಮಾತ್ರವಾಗಿದ್ದು, ಪೊಲೀಸ್ ತನಿಖೆಯ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ. ಆತ್ಮಹತ್ಯೆ ಪ್ರಯತ್ನದಂತಹ ಸೂಕ್ಷ್ಮ ವಿಷಯಗಳಲ್ಲಿ ಸಹಾನುಭೂತಿಯಿಂದ ವರ್ತಿಸಿ.

Exit mobile version