ಧರ್ಮಸ್ಥಳ ಕೇಸ್: ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್ ಚಿನ್ನಯ್ಯ ಸುಳ್ಳು ಆರೋಪ ಸಾಬೀತು

1 2025 08 23t110921.739

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಸುಳ್ಳು ಆರೋಪ ಮಾಡಿದ ‘ಮಾಸ್ಕ್ ಮ್ಯಾನ್’ ಚಿನ್ನಯ್ಯನನ್ನು ಇಂದು (ಆಗಸ್ಟ್ 23) ಎಸ್‌ಐಟಿ ಬಂಧಿಸಿದೆ. ಸತತ ವಿಚಾರಣೆಯಲ್ಲಿ ಆತನ ಆರೋಪಗಳು ಸುಳ್ಳು ಎಂದು ದೃಢಪಟ್ಟಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಚಿನ್ನಯ್ಯನ ದೂರಿನ ಆಧಾರದ ಮೇಲೆ ಧರ್ಮಸ್ಥಳದ 17 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಆದರೆ, ಯಾವುದೇ ಸಾಕ್ಷ್ಯ ಸಿಗದ ಕಾರಣ, ಎಸ್‌ಐಟಿ ತಂಡವು ಆತನ ವಿರುದ್ಧವೇ ತನಿಖೆ ಆರಂಭಿಸಿತು.

ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದ ತಂಡವು, “ತಲೆಬುರುಡೆ ಎಲ್ಲಿಂದ ತಂದೆ? ಸಮಾಧಿಯಿಂದ ಅಗೆದದ್ದು ನಿಜವೇ? ವೀಡಿಯೊದಲ್ಲಿ ಇರುವವರು ಯಾರು?” ಎಂಬ ಪ್ರಶ್ನೆಗಳನ್ನು ಕೇಳಿತು. ಚಿನ್ನಯ್ಯ ಯಾವುದೇ ಸ್ಪಷ್ಟ ಉತ್ತರ ನೀಡದ ಕಾರಣ, ಆತನ ಆರೋಪಗಳು ಸುಳ್ಳು ಎಂದು ಖಚಿತವಾಯಿತು.

ಇಂದು ಕೋರ್ಟ್‌ಗೆ ಹಾಜರುಪಡಿಸಿ, ಬಳಿಕ ಚಿನ್ನಯ್ಯನನ್ನು ಕಸ್ಟಡಿ ವಿಚಾರಣೆಗೆ ಪಡೆಯುವ ಸಾಧ್ಯತೆಯಿದೆ.

Exit mobile version