ವಿದ್ಯಾರ್ಥಿ ದಿಗಂತ್ ನಾಪತ್ತೆ: ಮಂಗಳಮುಖಿಯರ ಜೊತೆ ಹೋದ್ನಾ?

Befunky collage 2025 03 08t132112.577

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ , ಪ್ರಥಮ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ. ದಿಗಂತ್​ ಬಂಟ್ವಾಳ ತಾಲೂಕಿನ ಸಜಿಪ ಮೂಲದ ಮಂಗಳಮುಖಿ ಸಂಘದ ಸದಸ್ಯರ ಜೊತೆ ದಿಗಂತ್ ಅನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿರಬಹುದು ಎಂಬ ಮಾಹಿತಿ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದ್ದಿ ಹರಡುತ್ತಿದೆ. ಈ ಬಗ್ಗೆ ವಿಶೇಷ ತನಿಖಾ ತಂಡದ ಎಸ್ಐ ಜೊತೆ ಕುಟುಂಬ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ಇದೆಯಾ ಎಂದು ವಿಚಾರಿಸಿದೆ. ಅವರು ನಮಗೆ ಈ ರೀತಿಯ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ರು. ಜನ ಆ ರೀತಿ‌ ಹೇಳುತ್ತಿದ್ದಾರೆ ಅಂದ್ರು. ಅದು‌ ಸುಳ್ಳು ‌ಸುದ್ದಿಯಾಗಿರಬಹುದು. ಈವರೆಗೂ ಆತನ ವರ್ತನೆಯಲ್ಲಿ ಈ ರೀತಿಯ ಬದಲಾವಣೆ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ADVERTISEMENT
ADVERTISEMENT

ಸ್ನೇಹಿತರ ಜೊತೆ ಮೆಸೇಜ್ ಮಾಡುತ್ತಿದ್ದನು. ತಡರಾತ್ರಿವರೆಗೂ ಮೊಬೈಲ್​ನಲ್ಲಿ ಗೇಮ್ಸ್ ಆಡುತ್ತಿದ್ದನಂತೆ. ಅವನು ಬೇರೆ ಬೇರೆ ಮೊಬೈಲ್​ನ್ನೂ ಉಪಯೋಗಿಸುತ್ತಿದ್ದನು ಎಂದು ಪೊಲೀಸರು ಹೇಳಿದ ಬಳಿಕವಷ್ಟೇ ಕುಟುಂಬದವರಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಫರಂಗಿಪೇಟೆಯಲ್ಲಿ‌ ಸಿಸಿ ಕ್ಯಾಮರಾ ತುಂಬಾ ಕಡಿಮೆಯಿವೆ. ನಾಪತ್ತೆಯಾಗಿ‌ 48 ಗಂಟೆ ಬಳಿಕ ಶ್ವಾನದಳ ಬಂದಿತ್ತು. ಆದರೆ, 6 ಗಂಟೆ ಬಳಿಕ ಶ್ವಾನಕ್ಕೆ ವಾಸನೆ ಗ್ರಹಿಸುವುದು ಸಾಧ್ಯವಾಗಲ್ಲ. ಶ್ವಾನ ಬಂದರೂ ಸಹ ಏನು ಪ್ರಯೋಜನ ಇಲ್ಲದಂತಾಗಿದೆ. 24 ಗಂಟೆ ಒಳಗೆ ಹುಡುಕಾಟ ಆರಂಭಿಸಿದ್ದರೇ ಏನಾದರೂ ಒಳ್ಳೆ ಸುದ್ದಿ ಸಿಗುತ್ತಿತ್ತು. ಹಿಂದೂ ಸಂಘಟನೆಗಳ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ತನಿಖೆಯಲ್ಲಿ ಯಾವುದೇ ಬೆಳವಣಿಗೆ ಇಲ್ಲದಾಗ ಇನ್ನಷ್ಟು ಒತ್ತಡ ಹಾಕಬೇಕಿದೆ ಎಂದರು.

ಮೊದಲಿಗೆ ದಿಗಂತ್ ನಾಪತ್ತೆಯಾಗಿದ್ದ ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ನೇತ್ರಾವತಿ ನದಿ ಭಾಗದ ಸುತ್ತಲಿನ ಭಾಗದಲ್ಲಿ ದೋಣಿ ಬಳಸಿಕೊಂಡು ‌ನದಿಯಲ್ಲೂ ಕೂಡ ಸರ್ಚ್ ಮಾಡಲಾಗುತ್ತಿದೆ.

ಕಳೆದ ಶನಿವಾರ ಪರಂಗಿಪೇಟೆ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದ ಜನರು. ಈಗ ಮತ್ತೆ ಪ್ರತಿಭಟನೆಗೆ ಮುಂದಾದ ಗ್ರಾಮದ ಜನರು. ಸೋಮವಾರ ಸ್ಥಳೀಯ ಗ್ರಾಮಗಳ ಜನ ಪರಂಗಿಪೇಟೆ‌ ಚಲೋ ಎಂಬ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನ ಮಾಡಿದ್ದಾರೆ. ಪೊಲೀಸ್ ವೈಫಲ್ಯದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗಿದ್ದೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಯತೀಶ್ ಎನ್ ಬಂಟ್ವಾಳ ಡಿವೈಎಸ್ ಪಿ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಿ ಪತ್ತೆ ಕಾರ್ಯ ನಡೆಸಲಾಗಿದೆ. ಕೆಲವರು ಗಾಂಜಾ ಗಿರಾಕಿಗಳು ದಿಗಂತ್ ನನ್ನು ಅಪಹರಣ ಮಾಡಿರಬಹುದು ,ಮತ್ತೆ ಕೆಲವರು ಮಂಗಳಮುಖಿಗಳು ಅಪಹರಣ ಮಾಡಿರಬಹುದು ಎಂದು ಶಂಕೆ ಮುಡಿದೆ. ಪೊಲೀಸರು ಜನರ ಆಯಾಮಗಳನ್ನೂ ಗಣನೆಗೆ ತೆಗೆದುಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Exit mobile version