ಹಾಸನದಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಒಂದು ಗ್ಯಾಂಗ್‌ನಿಂದ ಮತ್ತೊಂದು ಗ್ಯಾಂಗ್‌ ಮೇಲೆ ಹಲ್ಲೆ

Siddu stalin kcr (61)

ಕ್ಷುಲ್ಲಕ ಕಾರಣಕ್ಕಾಗಿ ಪುಡಿರೌಡಿಯೊಬ್ಬ ಇನ್ನೋರ್ವ ರೌಡಿಗೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.

ಕುಖ್ಯಾತ ರೌಡಿಶೀಟರ್ ಆದ ಚೇತು ಅಲಿಯಾಸ್ ಮತ್ತು ಬರಗೂರು ವಿಜಿ ಸಹಚರರರಾದ ಯತೀಶ್ ಹಾಗೂ ಅಡಗೂರು ಗ್ರಾಮದ ದಿಲೀಪ್ ನಡುವೆ ಗಲಾಟೆಯಾಗಿದ್ದು, ಬಳಿಕ ಅಲ್ಲಿಂದ ಇಬ್ಬರೂ ಬೈಕ್‍ನಲ್ಲಿ ತೆರಳಿದ್ದರು. ಶಿವನ ಪಾರ್ಕ್ ಹತ್ತಿರ ಮೂತ್ರ ವಿಸರ್ಜನೆಗೆ ಯತೀಶ್ ಬೈಕ್ ನಿಲ್ಲಿಸಿದ್ದನ್ನು ಗಮನಿಸಿದ ದಿಲೀಪ್ ಡ್ರ್ಯಾಗರ್‌ನಿಂದ ಯತೀಶ್‍ಗೆ ಇರಿದಿದ್ದಾನೆ.

ದಾಳಿಯಿಂದ ಯತೀಶ್‍ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಯತೀಶ್‍ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೂ ಮುನ್ನ ಯತೀಶ್, ದಿಲೀಪ್ ಮತ್ತು ಕಾರ್ತಿಕ್ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿದ್ದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೈಕ್ ಟಚ್ ಆಗಿದ್ದಕ್ಕೇ ಚಾಕುವಿನಿಂದ ಪುಂಡರ ಅಟ್ಯಾಕ್..!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿ ಮೀರ್ತಿದೆ.. ಪೊಲೀಸರ ಭಯವೇ ಇಲ್ಲದಂತೆ ಮೆರೆತಿದ್ದಾರೆ.ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್ ತೆಗೆದು ಡ್ರ್ಯಾಗರ್,ಚಾಕುನಿಂದ ಇರೀತಿದ್ದಾರೆ.. ಇತ್ತೀಚೆಗೆ ಬಸವೇಶ್ವರ ನಗರ ಲಿಮಿಟ್ಸ್ ನಲ್ಲೂ ಅದೇ ಆಗಿದ್ದು.. ಜಸ್ಟ್ ಬೈಕ್ ಟಚ್ ಆಗಿದ್ದು ಅಷ್ಟೇ ಐದಾರು ಜನ ಅಟ್ಯಾಕ್ ಮಾಡಿದವ್ರೇ ಸೀದಾ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.

ಅಟ್ಟಹಾಸ ಮಿತಿಇಲ್ಲದಂತಾಗಿದೆ.. ಅದ್ರಲ್ಲು ರಸ್ತೆಯಲ್ಲಿ ಆಗೋ ಸಣ್ಣ ಪುಟ್ಟ ಕಿರಿಕ್ ನಲ್ಲಿ ಪುಂಡರ ಅಟ್ಟಹಾಸ ಕೇಳೋ ಹಾಗಿಲ್ಲ.. ಇತ್ತೀಚೆಗೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಮೇಲೆ ಹಲ್ಲೆ ಆಗಿತ್ತು.. ಜ್ಞಾನ ಭಾರತಿ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವನ ಮೇಲೆ ಅಟ್ಯಾಕ್ ಆಗಿತ್ತು.. ಹೀಗೆ ಸಾಲು ಸಾಲು ಕೃತ್ಯಗಳು ನಡೆಯುತ್ತಿದ್ರು ಇದನ್ನ ಕಡಿವಾಣ ಹಾಕೋಕೆ ಮಾತ್ರ ಪೊಲೀಸರಿಗೆ ಸಾದ್ಯವಾಗ್ತಿಲ್ಲ.ಈಗ ಬಸವೇಶ್ವರ ನಗರ ಲಿಮಿಟ್ಸ್ ನಲ್ಲಿಯೂ ಚಾಕು ಇರಿದಿದ್ದ ಪ್ರಕರಣ ವರದಿಯಾಗಿದೆ.. ಬರೀ ಗಾಡಿ ಟಚ್ ಆಗಿದ್ದಕ್ಕೆ ಚಾಕು ತೆಗೆದಿದ್ದ ಆರೋಪಿಗಳು ವ್ಯಕ್ತಿಯೋರ್ವನಿಗೆ ಇರಿದು ಎಸ್ಕೇಪ್ ಆಗಿದ್ದಾರೆ.

ಅಂದ್ಹಾಗೆ ಈ ಘಟನೆ ನಡೆದಿದ್ದು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾನಗರದಲ್ಲಿ.. ಮಾರ್ಚ್ ಒಂದನೇ ತಾರೀಖು ಚಿರಂಜೀವಿ ಎಂಬಾತನ ಮೇಲೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.. ಅವತ್ತು ಹೊಸ ತೊಡ್ಕು ಹಿನ್ನೆಲೆ ಚಿರಂಜೀವಿ ಅತ್ತೆ ಮನೆಗೆ ಹೋಗಿ ಊಟ ಮುಗಿಸ್ಕೊಂಡು ಸ್ನೇಹಿತನ ಜೊತೆ ಬೈಕ್ ನಲ್ಲಿ ಬಸವೇಶ್ವರ ನಗರದ ಮನೆಗೆ ಬರ್ತಿದ್ದ.. ಕಮಲಾನಗರದ ರಸ್ತೆಯೊಂದರ ಬಳಿ ಹೋಗ್ತಿದ್ದ ಯುವಕರಿಗೆ ಬೈಕ್ ಟಚ್ ಆಗಿದೆ.. ಅಷ್ಟಕ್ಕೆ ಕೋಪಗೊಂಡಿರುವ ಆರೋಪಿಗಳು ಏಕಾ ಏಕಿ ಜಗಳ ತೆಗೆದು ಚಾಕು ತೆಗೆದವರೇ ಬೈಕ್ ನಲ್ಲಿ ಹಿಂದೆ ಚಿರಂಜೀವಿ ಬಲ ಭಾಗದ ಭುಜದ ಬಳಿ ಇರಿದಿದ್ದಾರೆ.. ಈ ವೇಳೆ ಗಾಯಳು ಜೊತೆಗಿದ್ದ ಸ್ನೇಹಿತನ ಮೇಲೂ ಹಲ್ಲೆಗೆ ಮುಂದಾಗಿದ್ದಾಗ ಇಬ್ಬರೂ ತಪ್ಪಿಸಿಕೊಂಡು ಹೋಗಿದ್ದಾರೆ.

ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ.. ಈಗಾಗಲೇ ಆರೋಪಿಗಳ ಚಹರೆ ಪತ್ತೆಯಾಗಿದ್ದು ಇನ್ನೇನು ಅರೆಸ್ಟ್ ಮಾತ್ರ ಬಾಕಿಇದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version