BMTC ಸಿಬ್ಬಂದಿ ನಿರ್ಲಕ್ಷ್ಯಕ್ಕೆ 2 ಬಸ್‌ಗಳು ಸುಟ್ಟು ಭಸ್ಮ!

ಸಿಗರೇಟ್‌ ಸೇದಿ ಡಿಪೋದಲ್ಲಿದ್ದ ಕಸದ ರಾಶಿಗೆ ಎಸೆದಿದ್ದ ಸಿಬ್ಬಂದಿ

BeFunky collage (43)

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪೀಣ್ಯಾ ಡಿಪೋ-9ರಲ್ಲಿ ಕಳೆದ ಶುಕ್ರವಾರ ರಾತ್ರಿ ಭಾರೀ ಬೆಂಕಿ ಘಟನೆ ನಡೆದಿದೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಎರಡು ಬಸ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಘಟನೆಯ ವಿವರ : ರಾತ್ರಿ 7.30ರಿಂದ 8.30ರ ನಡುವೆ ನಡೆದ ಈ ಘಟನೆಯಲ್ಲಿ, ಡಿಪೋದಲ್ಲಿ ಸಿಗರೇಟ್ ಸೇದಿದ ಸಿಬ್ಬಂದಿ ಕಸದ ರಾಶಿಗೆ ಸಿಗರೇಟ್ ಎಸೆದಿದ್ದರಿಂದ ಬೆಂಕಿ ಹೊತ್ತಿಕೊಂಡಿತು. ಕಸದ ರಾಶಿಯ ಪಕ್ಕದಲ್ಲೇ ನಿಲ್ಲಿಸಿದ್ದ ಎರಡು ಬಸ್‌ಗಳಿಗೆ ಬೆಂಕಿ ತಗುಲಿ, ಅವು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಗ್ನಿಶಾಮಕ ದಳ ತ್ವರಿತವಾಗಿ ಬಂದು ಬೆಂಕಿಯನ್ನು ನಂದಿಸಿದ್ದರೂ, ಈ ವೇಳೆಗಾಗಲೇ ಬಸ್‌ಗಳು ಭಸ್ಮವಾಗಿದ್ದವು.

ಆರೋಪ-ಪ್ರತ್ಯಾರೋಪ ಘಟನೆಯ ನಂತರ ಡಿಪೋ ಮ್ಯಾನೇಜರ್ ಪುಟ್ಟರಾಜು ಚಾಲಕ ಶರಣಪ್ಪ ಅವರನ್ನು ಮನೆಯಿಂದ ಕರೆಯಿಸಿ, “ನಾನು ಬಸ್ ಚಾಲನೆಯಲ್ಲಿ ಇಟ್ಟಿದ್ದೆ, ನನ್ನದೇ ತಪ್ಪು” ಎಂದು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ.

ಆದರೆ ನಿಯಮಗಳ ಪ್ರಕಾರ:

ಹೀಗಿರುವಾಗ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಿದ್ದ ಚಾಲಕನ ಮೇಲೆ ಆರೋಪ ಹೊರಿಸುವುದು ಯಾರದ್ದೋ ತಪ್ಪನ್ನು ಮುಚ್ಚಲು ಮಾಡಿದ ಪ್ರಯತ್ನವೇ ಎಂಬ ಅನುಮಾನಗಳು ಉಂಟಾಗಿವೆ.

ಡಿಪೋದಲ್ಲಿ ಸಿಗರೇಟ್ ನಿಷೇಧ ಡಿಪೋ ಒಳಗೆ ಸಿಗರೇಟ್ ಸೇದುವುದು ನಿಷೇಧವಿದ್ದರೂ, ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ಈ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ. ಘಟನೆಯ ವಿಡಿಯೋ ಲಭ್ಯವಿದ್ದು, ಇದು BMTC ಆಡಳಿತದಲ್ಲಿ ನಿರ್ಲಕ್ಷ್ಯವಿದೆ ಎಂಬ ಚರ್ಚೆಯನ್ನು ತೀವ್ರಗೊಳಿಸಿದೆ.

ಈ ಘಟನೆಯ ಬಗ್ಗೆ BMTC ಉನ್ನತ ಅಧಿಕಾರಿಗಳು ತನಿಖೆಗೆ ಆದೇಶ ನೀಡಬೇಕು ಎಂದು ಡಿಪೋ ಸಿಬ್ಬಂದಿ ಮತ್ತು ಚಾಲಕರು ಒತ್ತಾಯಿಸುತ್ತಿದ್ದಾರೆ.

Exit mobile version