ಭೀಕರ ರಸ್ತೆ ಅಪಘಾತ: ಓರ್ವ ಬೈಕ್‌ ಸವಾರ ಸಾವು

ಭೀಕರ ರಸ್ತೆ ಅಪಘಾತ: ಓರ್ವ ಬೈಕ್‌ ಸವಾರ ಸಾವು

Bidar accident

ಬೀದರ್ : ಟಿಟಿ ವಾಹನ ಮತ್ತು ಬೈಕ್​ ನಡುವೆ ಮುಖಾಮುಖಿಯಾಗಿ ಡಿಕ್ಕಿಯಾಗಿ ವೈದ್ಯನೋರ್ವ ಸಾವನ್ನಪ್ಪಿದ ಘಟನೆ ಬೀದರ್​ನ ಔರಾದ್ ತಾಲೂಕಿನ ಮುಸ್ತಾಪುರ ಟೋಲ್‌ ನಾಕಾ ಬಳಿ ನಡೆದಿದೆ.

ಸಂತಪೂರ ನಿವಾಸಿ 41 ವರ್ಷದ ನೀಲಕಂಠ ಬೋಸ್ಲೆ ಎಂಬಾತ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರ ಕಡೆಯಿಂದ ಬರುತ್ತಿದ್ದ ಟಿಟಿ ಟ್ರಾವೆಲರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್​ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಅಪಘಾತದ ನಂತರ ಟ್ರಾವಲರ್​ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಸಂತಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಸಂತಪೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಸಿಸಿಟಿವಿ ದೃಷ್ಯ ಗ್ಯಾರಂಟಿ ನ್ಯೂಸ್ ಗೆ ಲಭ್ಯವಾಗಿದೆ.

Exit mobile version