Karnataka Budget 2026: ಸಿಲಿಕಾನ್ ಸಿಟಿ ಟ್ರಾಫಿಕ್‌ಗೆ ಶಾಶ್ವತ ಪರಿಹಾರ ಸಿಗುತ್ತಾ? ಬೆಂಗಳೂರಿನ ನಿರೀಕ್ಷೆಗಳೇನು?

BeFunky collage 2026 03 06T101638.465

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸುತ್ತಿದ್ದು, ಇಡೀ ರಾಜ್ಯದ ಗಮನ ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲಿದೆ. ನಗರದ ಬೆಳೆಯುತ್ತಿರುವ ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆ, ಮೂಲಸೌಕರ್ಯ ಕೊರತೆ ಮತ್ತು ಜನಸಂಖ್ಯಾ ಒತ್ತಡದ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರಿಗೆ ವಿಶೇಷ ಗಮನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಮುಂಬರುವ ಬೃಹತ್ ಬೆಂಗಳೂರು ಪ್ರಾಧಿಕಾರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 12,000 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಘೋಷಣೆಯಾಗಬಹುದು ಎಂಬ ಊಹಾಪೋಹಗಳಿವೆ.

ಬೆಂಗಳೂರಿನ ಮುಖ್ಯ ನಿರೀಕ್ಷೆಗಳು ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಐಟಿ ಉದ್ಯಮ, ಶಿಕ್ಷಣ ಮತ್ತು ಉದ್ಯೋಗದ ಕಾರಣದಿಂದ ದೇಶದಾದ್ಯಂತದಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಆದರೆ ಜನಸಂಖ್ಯಾ ಹೆಚ್ಚಳದಿಂದ ಟ್ರಾಫಿಕ್ ದಟ್ಟಣೆ, ಕುಡಿಯುವ ನೀರು ಕೊರತೆ, ರಸ್ತೆ ಗುಂಡಿಗಳು, ಮಳೆಗಾಲದ ನೀರು ನಿಲ್ಲುವಿಕೆ ಮತ್ತು ವಸತಿ ಸಮಸ್ಯೆಗಳು ತೀವ್ರವಾಗಿವೆ. ಈ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ

ಈ ಕೆಳಗಿನ ಯೋಜನೆಗಳಿಗೆ ದೊಡ್ಡ ಹಂಚಿಕೆಯ ನಿರೀಕ್ಷೆ ಇದೆ :

ಈ ಎಲ್ಲಾ ಯೋಜನೆಗಳಿಗೆ ಒಟ್ಟು 12,000 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಘೋಷಣೆಯಾಗಬಹುದು ಎಂಬ ಊಹೆಗಳಿವೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈ ಬಾರಿಯ ಬಜೆಟ್‌ನಲ್ಲಿ ಪ್ರಮುಖ ಆದ್ಯತೆಯಾಗಿರುವ ಸಾಧ್ಯತೆ ಇದೆ.

ಇಂದು ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದು, ಬೆಂಗಳೂರು ನಿವಾಸಿಗಳು ಮತ್ತು ರಾಜ್ಯದ ಜನರು ಈ ಘೋಷಣೆಗಳಿಗಾಗಿ ಕಾಯುತ್ತಿದ್ದಾರೆ. ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಹಲವು ಬಸ್ ನಿಲ್ದಾಣಗಳಲ್ಲೂ ಏರ್ಪಡಿಸಲಾಗಿದೆ.

Exit mobile version