ಬೆಂಗಳೂರಿನ ಆಟೋ ಚಾಲಕನ ಮೇಲೆ ಹಿಂದಿ ಮಹಿಳೆಯ ದರ್ಪ: “ಆರ್ಥಿಕತೆ ನಡೆಯುವುದೇ ನಮ್ಮಿಂದ” ಎಂದು ವಾದ!

ಮಿತಿಮೀರಿದ ಹಿಂದಿವಾಲಗಳ ಕುಚೇಷ್ಟೆ

Befunky collage 2025 06 09t113942.227

ಬೆಂಗಳೂರಿನಲ್ಲಿ ಉತ್ತರ ಭಾರತೀಯರಿಂದ ಕನ್ನಡಿಗರಿಗೆ ಎದುರಾಗುವ ಭಾಷಾ ವಿವಾದಗಳು ಹೊಸದೇನಲ್ಲ. ಆದರೆ, ಇತ್ತೀಚಿನ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೊನ್ನೆ ಜೂನ್ 7ರಂದು, ಹಿಂದಿ ಮಾತನಾಡುವ ಮಹಿಳೆಯೊಬ್ಬರು ಆಟೋ ಬಾಡಿಗೆ ವಿಚಾರಕ್ಕೆ ಬೆಂಗಳೂರಿನ ಆಟೋ ಚಾಲಕನೊಂದಿಗೆ ಜಗಳಕ್ಕಿಳಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯ ದರ್ಪದ ವರ್ತನೆಯನ್ನು ನೋಡಿ ಸಾಮಾಜಿಕ ಜಾಲತಾಣ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

@VigilntHindutva ಎಂಬ X ಖಾತೆಯಲ್ಲಿ ಶೇರ್ ಆದ ವಿಡಿಯೋದಲ್ಲಿ, ಹಿಂದಿ ಮಾತನಾಡುವ ಮಹಿಳೆಯೊಬ್ಬರು ಆಟೋ ಚಾಲಕನೊಂದಿಗೆ ತೀವ್ರವಾಗಿ ವಾದಿಸುವುದನ್ನು ಕಾಣಬಹುದು. ಆಟೋ ಹತ್ತುವಾಗ ಮೀಟರ್ 296 ರೂಪಾಯಿ ತೋರಿಸಿತ್ತು, ಆದರೆ ಚಾಲಕ 390 ರೂಪಾಯಿ ಕೇಳಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಆಟೋ ಚಾಲಕ ತನ್ನ ಆಪ್‌ನಲ್ಲಿ ತೋರಿಸಿದ ಬಾಡಿಗೆಯನ್ನು ತೋರಿಸಿದ್ದಾನೆ, ಆದರೆ ವಾದದಿಂದ ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿತು.

ADVERTISEMENT
ADVERTISEMENT

ಚಾಲಕನ ಯಾವುದೇ ವಿವರಣೆಗೆ ಮಹಿಳೆ ಕಿವಿಗೊಡದೇ, ಹಿಂದಿಯಲ್ಲೇ ಮಾತನಾಡಿದ್ದಾಳೆ. ಕೋಪಗೊಂಡ ಆಟೋ ಚಾಲಕ, “ಕನ್ನಡದಲ್ಲಿ ಮಾತನಾಡಿ” ಎಂದು ಒತ್ತಾಯಿಸಿದಾಗ, ಮಹಿಳೆ ಸಿಟ್ಟಿನಿಂದ, “ನಾವೇ ಬೆಂಗಳೂರಿನ ಆರ್ಥಿಕತೆಯನ್ನು ನಡೆಸುತ್ತಿದ್ದೇವೆ, ನಿನಗೇನಾದರೂ ಗೊತ್ತಿದೆಯಾ?” ಎಂದು ಪ್ರಶ್ನಿಸಿದ್ದಾಳೆ. ಈ ಹೇಳಿಕೆಯು ಕನ್ನಡಿಗರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜೂನ್ 7ರಂದು ಶೇರ್ ಆದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರೊಬ್ಬರು, “ಬೆಂಗಳೂರು ತನ್ನ ಐಟಿ ಉದ್ಯಮವನ್ನು ಕಳೆದುಕೊಂಡರೆ ಇಂತಹ ದರ್ಪದ ವರ್ತನೆ ಕಾಣಸಿಗದು,” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಕನ್ನಡ ಕಲಿಯುವುದು ಇಂಗ್ಲಿಷ್‌ಗಿಂತ ಸುಲಭ. ಸ್ಥಳೀಯ ಭಾಷೆಗೆ ಗೌರವ ಕೊಡಿ,” ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, “ಆಟೋ ಚಾಲಕನೊಂದಿಗೆ ಏಕೆ ಜಗಳ? ಬೇರೆ ಆಟೋ ಬುಕ್ ಮಾಡಬಹುದಿತ್ತು,” ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಕನ್ನಡಿಗರ ಮತ್ತು ಉತ್ತರ ಭಾರತೀಯರ ನಡುವಿನ ಭಾಷಾ ವಿವಾದಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಕಳೆದ ವಾರವಷ್ಟೇ ಬಿಹಾರ ಮೂಲದ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯೂ ಇದೇ ರೀತಿಯ ಚರ್ಚೆಗೆ ಕಾರಣವಾಗಿತ್ತು.

ಕನ್ನಡಿಗರಿಗೆ ಸ್ಥಳೀಯ ಭಾಷೆಯ ಬಳಕೆಯ ಬಗ್ಗೆ ತೀವ್ರ ಒಲವಿರುವುದು ಸಹಜ. ಆದರೆ, ಕೆಲವು ವಲಸಿಗರು ಕನ್ನಡ ಕಲಿಯದಿರುವುದು ಮತ್ತು ದರ್ಪದಿಂದ ವರ್ತಿಸುವುದು ಈ ರೀತಿಯ ಘರ್ಷಣೆಗೆ ಕಾರಣವಾಗುತ್ತಿದೆ. ಈ ಘಟನೆಯಿಂದ ಬೆಂಗಳೂರಿನ ಆರ್ಥಿಕತೆಗೆ ಕೊಡುಗೆ ನೀಡುವವರ ಬಗ್ಗೆ ಮಾತನಾಡುವಾಗ ಸ್ಥಳೀಯ ಸಂವೇದನೆಯನ್ನು ಗೌರವಿಸುವ ಅಗತ್ಯದ ಬಗ್ಗೆ ಚರ್ಚೆ ತೀವ್ರಗೊಂಡಿದೆ.

ಏನು ಮಾಡಬಹುದು?
Exit mobile version