ಕಾರ್ಮಿಕ ದಿನಾಚರಣೆಯ ದಿನವೇ ಸರ್ಕಾರದಿಂದ ಬಂಪರ್ ಗಿಫ್ಟ್..!

Untitled design (10)

ಅದೆಷ್ಟೋ ಪ್ರತಿಭಟನೆ, ಅದೆಷ್ಟೋ ದಿನಗಳ ಹೋರಾಟದ ಬಳಿಕ ಕೊನೆಗೂ ಪೌರಕಾರ್ಮಿಕರ ಬಹುದಿನದ ಬೇಡಿಕೆ ಈಡೇರಿದೆ. ಕೆಲಸ ಕಾಯಂ ಮಾಡಿ ಅಂತಾ ಪಟ್ಟುಹಿಡಿದಿದ್ದ ಪೌರಕಾರ್ಮಿಕರ ಕರೆಗೆ ಓಗೊಟ್ಟ ಸರ್ಕಾರ ಕೊನೆಗೂ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬರೋಬ್ಬರಿ 12 ಸಾವಿರ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದ್ದು, ಸರ್ಕಾರದ ನೇರವೇತನಕ್ಕೆ ಒಳಪಟ್ಟ ಪೌರಕಾರ್ಮಿಕರು ಖುಷ್ ಆಗಿದ್ದಾರೆ.

ರಾಜಧಾನಿ ಬೆಂಗಳೂರಿನ ಗಲ್ಲಿ ಗಲ್ಲಿಯನ್ನ ಸ್ವಚ್ಚಗೊಳಿಸೋ ಪೌರಕಾರ್ಮಿಕರಿಗೆ ಇಂದು ಸರ್ಕಾರ ಬಂಪರ್ ಗಿಫ್ಟ್ ಕೊಟ್ಟಿದೆ. ಹಲವು ವರ್ಷಗಳಿಂದ ಕೆಲಸ ಕಾಯಂ ಮಾಡಿ, ನೇರಪಾವತಿಗೆ ಸೇರಿಸಿ ಅಂತಾ ಹೋರಾಟ ಮಾಡ್ತಿದ್ದ ಪೌರಕಾರ್ಮಿಕರಿಗೆ ಕೊನೆಗೂ ಜಯ ಸಿಕ್ಕಿದೆ. ಸದ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರೋಬ್ಬರಿ 12, 692 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿರೋ ಸರ್ಕಾರ, ಕಾರ್ಮಿಕರ ದಿನದಂದೆ ಪೌರಕಾರ್ಮಿಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಸದ್ಯ ಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಕಾಯಂ ನೇಮಕಾತಿ ಪತ್ರ ವಿತರಿಸುವ ಮೂಲಕ ಕಾರ್ಮಿಕ ದಿನಾಚರಣೆಯಂದೇ ಬಂಪರ್ ಗಿಫ್ಟ್ ನೀಡಿದ್ದಾರೆ.

ADVERTISEMENT
ADVERTISEMENT

ಇನ್ನು ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶ ನೀಡಿದ ಸಿಎಂ ಸಿದ್ದರಾಮಯ್ಯ, ಇತ್ತ ಮತ್ತೊಂದು ಗುಡ್ ನ್ಯೂಸ್ ಕೊಡೋ ಮೂಲಕ ಪೌರಕಾರ್ಮಿಕರ ಪರ ಇರ್ತೀವೆ ಅಂತಾ ಭರವಸೆ ನೀಡಿದ್ದಾರೆ. ಆದೇಶ ಪತ್ರ ವಿತರಿಸಿ ಮಾತಾನಾಡಿದ ಸಿದ್ದರಾಮಯ್ಯ, ಸದ್ಯ ಪೌರಕಾರ್ಮಿಕರ ಜೊತೆಗೆ ಮುಂದಿನ ದಿನಗಳಲ್ಲಿ ಹೆಲ್ಪರ್ಸ್, ಕಸದ ವಾಹನ ಚಾಲಕರು ಸೇರಿ ಬೇರೆ ಬೇರೆ ವರ್ಗದ ಕಾರ್ಮಿಕರನ್ನ ಕೂಡ ನೇರ ಪಾವತಿಗೆ ಸೇರಿಸ್ತೀವೆ ಅಂತಾ ಭರವಸೆ ಕೊಟ್ಟಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 12, 692 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ನೀಡಿರೋ ಸರ್ಕಾರ, ಪಾಲಿಕೆಯ ವಿವಿಧ ವಲಯಗಳಲ್ಲಿ ಆಯ್ದ ಪೌರಕಾರ್ಮಿಕರನ್ನ ಆಯ್ಕೆ ಮಾಡೋ ಮೂಲಕ ನೇರ ಪಾವತಿಗೆ ಒಳಪಡಿಸಿದೆ. ಸದ್ಯ ಕಾಯಂ ನೇಮಕಾತಿ ಆದೇಶ ಪಡೆದ ಪೌರಕಾರ್ಮಿಕರಿಗೆ ತಲಾ 30 ಸಾವಿರ ರೂಪಾಯಿ ವೇತನ ನಿಗಧಿಪಡಿಸಿದ್ದು, ಇತ್ತ ವಿವಿಧ ವಲಯಗಳಿಂದ ಪೌರಕಾರ್ಮಿಕರ ಆಯ್ಕೆ ಮಾಡಲಾಗಿದೆ.
ಯಾವ್ಯಾವ ವಲಯದಲ್ಲಿ ಎಷ್ಟು ಜನರಿಗೆ ಕಾಯಂ..?

ಇನ್ನು ಬಹುದಿನಗಳಿಂದ ಕೆಲಸ ಕಾಯಂ ಮಾಡಿ ಅಂತಾ ಹೋರಾಟ ನಡೆಸಿದ್ದ ಪೌರಕಾರ್ಮಿಕರು, ಇದೀಗ ಕಾಯಂ ನೇಮಕಾತಿ ಪತ್ರ ಸಿಕ್ಕಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ನೇರ ನೇಮಕಾತಿ ಮೂಲಕ ಬೇಡಿಕೆ ಈಡೇರಿಸಿರೋದಕ್ಕೆ ಸಂತಸ ಹಂಚಿಕೊಂಡ ಪೌರಕಾರ್ಮಿಕರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಇಡೀ ರಾಜಧಾನಿಯನ್ನ ಸ್ವಚ್ಚಗೊಳಿಸೋ ಪೌರಕಾರ್ಮಿಕರ ಬಹುದಿನದ ಕನಸು ಕೊನೆಗೂ ನನಸಾಗಿದೆ. ಇತ್ತ ಗುತ್ತಿಗೆದಾರರ ಕಾಟಕ್ಕೆ ಬೇಸತ್ತಿದ್ದ ಪೌರಕಾರ್ಮಿಕರಿಗೆ ಕೊನೆಗೂ ಸರ್ಕಾರದ ನೇರವೇತನ ಸಿಕ್ಕಂತಾಗಿದ್ದು, ಇತ್ತ ಉಳಿದ ಪೌರಕಾರ್ಮಿಕರು, ಕಸದ ವಾಹನ ಚಾಲಕರಿಗೂ ಕಾಯಂ ನೀಡ್ತೀವೆ ಅಂದಿರೋ ಸರ್ಕಾರ ತನ್ನ ಭರವಸೆಯನ್ನ ಯಾವಾಗ ಈಡೇರಿಸುತ್ತೆ.

Exit mobile version