ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್ ಹಿಂದೂಗಳ ಪಕ್ಷವಲ್ಲ, ಅದು ಮುಸ್ಲಿಂರಿಗಾಗಿ ಹುಟ್ಟಿದೆ. ದೇಶದಲ್ಲಿ ಮುಸ್ಲಿಂರು ಇರುವವರೆಗೆ ಕಾಂಗ್ರೆಸ್ ಕಲ್ಲು ಹೊಡೆಯುವವರಿಗೆ ಬೆಂಬಲ ನೀಡುತ್ತದೆ” ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯನವರನ್ನು “ಪಾಕಿಸ್ತಾನದ ಏಜೆಂಟ್” ಎಂದು ಕರೆದ ಯತ್ನಾಳ್” ಅವರು ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿಯಾಗಲಿ, ಟೋಪಿ ಕುಷಿಯಿಂದ ಧರಿಸುತ್ತಾರೆ, ಆದರೆ ಬಿಂದಿ, ಕುಂಕುಮ ಹಚ್ಚಿಕೊಳ್ಳುವುದಿಲ್ಲ ಎಂದು ವೈಯಕ್ತಿಕ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ನ ಹಾಲಿ ಸಚಿವ ಸಂತೋಷ ಲಾಡ್ರನ್ನು “ಮೋದಿ ಮುಂದೆ ಬಚ್ಚಾ” ಎಂದು ಕರೆದ ಯತ್ನಾಳ್, ಸಿದ್ದರಾಮಯ್ಯ ರಾಹುಲ್ ಗಾಂಧಿಯ ಖುಷಿಗಾಗಿ ಈ ರೀತಿ ಮಾತನಾಡುತ್ತಿದ್ದಾರೆ, ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಲು ಚಮಚಾಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಂಬೇಡ್ಕರ್ರ ಹೇಳಿಕೆಯನ್ನು ಉಲ್ಲೇಖಿಸಿ, “ಒಬ್ಬ ದಲಿತ ಕೂಡ ಕಾಂಗ್ರೆಸ್ಗೆ ಮತ ಹಾಕಬಾರದು” ಎಂದು ಹೇಳಿದ್ದಾರೆ.
ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ ನಿಷೇಧ
ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಧಾರ್ಮಿಕ ಚಿಹ್ನೆಗಳನ್ನು ಧರಿಸದಂತೆ ಸೂಚನೆ ನೀಡಿರುವ ವಿಚಾರವನ್ನು ಯತ್ನಾಳ್ ಖಂಡಿಸಿದ್ದಾರೆ. “ಯಾರೇ ಈ ನಿಯಮ ಮಾಡಿದರೂ ತಪ್ಪು. ಮಂಗಳಸೂತ್ರಕ್ಕೆ ಕೈ ಹಾಕಿದವರನ್ನು ವಜಾಗೊಳಿಸಬೇಕು” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.
ಬಿಜೆಪಿ ಒಳಗಿನ ಅಸಮಾಧಾನ
ಬಿಜೆಪಿ ಶಾಸಕರ ಉಚ್ಚಾಟನೆ ರದ್ದುಗೊಳಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ ವಿಚಾರಕ್ಕೆ ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು “ಅಪ್ರಬುದ್ಧ” ಎಂದು ಕರೆದ ಅವರು, “ಶಾಸಕರಿಗೆ ಮೇಲೆ ಹೋಗಿ ದಾಂದಲೆ ಮಾಡಲು ಸೂಚನೆ ನೀಡಿದ್ದು ವಿಜಯೇಂದ್ರ. ಕುರ್ಚಿ ಬಳಿ ಹೋಗಿ ಹೋರಾಟ ಮಾಡಿದರೆ ತಪ್ಪು. ಸದನದ ಬಾವಿಯಲ್ಲಿ ಮಾತ್ರ ಹೋರಾಟ ನಡೆಸಬೇಕು” ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ “ಚಮಚಾಗಿರಿ ಮಾಡುವ ಶಾಸಕರು” ಹೆಚ್ಚಾಗಿದ್ದಾರೆ ಎಂದು ಟೀಕಿಸಿದ ಯತ್ನಾಳ್, “ನನ್ನ ಉಚ್ಚಾಟನೆಯಿಂದ ವಿಜಯೇಂದ್ರರ ಯಾವ ಆದೇಶವೂ ಲಾಗೂ ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಅಣುಬಾಂಬ್ ಬೆದರಿಕೆ
ಪಾಕಿಸ್ತಾನದಿಂದ ಭಾರತದ ಮೇಲೆ ಅಣುಬಾಂಬ್ ಬೆದರಿಕೆಯ ಬಗ್ಗೆ ಯತ್ನಾಳ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನಮ್ಮ ಅಣುಬಾಂಬ್ಗಳು ಪಟಾಕಿ ಹಚ್ಚಲು ಇಲ್ಲ. ನಾಲ್ಕು ಒಗೆದರೆ ಪಾಕಿಸ್ತಾನ ಸರ್ವನಾಶವಾಗುತ್ತದೆ. ಭಾರತದ ಶಕ್ತಿಯನ್ನು ಯಾರೂ ಹಗುರವಾಗಿ ಪರಿಗಣಿಸಬಾರದು,” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸತ್ಯಾನಾಶವಾಗಬೇಕು. ಭಾರತ ಒಳಗಿನ ಮತ್ತು ಹೊರಗಿನ ವೈರಿಗಳನ್ನು ಎದುರಿಸಬೇಕು ಎಂದು ಹೇಳಿದ್ದಾರೆ. ಭಾರತದಲ್ಲಿ “ಹಿಂದೂ ತಾಯಗಂಡರು” ಹೆಚ್ಚಾಗಿದ್ದಾರೆ ಎಂದು ಆರೋಪಿಸಿದ ಯತ್ನಾಳ್, “ಯುದ್ಧವಾದರೆ ಅವರ ಅಸಲಿತನ ಹೊರಗೆ ಬರುತ್ತದೆ” ಎಂದಿದ್ದಾರೆ. ಮುಂದೆ “ಹಿಂದೂ ಪಕ್ಷ” ಕಟ್ಟುವ ಬಗ್ಗೆ ಯೋಚಿಸುವುದಾಗಿಯೂ ತಿಳಿಸಿದ್ದಾರೆ.