ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಬ್ಯಾನರ್‌ಗಳ ಹಾವಳಿ: ಕಣ್ಣು ಮುಚ್ಚಿ ಕುಳಿತ ಬಿಬಿಎಂಪಿ

123 2025 04 26t131025.534

ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಇದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಣ್ಣುಮುಚ್ಚಿ ಕುಳಿತಿರುವಂತೆ ಕಾಣುತ್ತಿದೆ. ಒಂದೆಡೆ ಸಾಮಾನ್ಯ ಜನರಿಗೆ ಕಠಿಣ ನಿಯಮಗಳು ಜಾರಿಯಲ್ಲಿದ್ದರೆ, ಶಾಸಕರಿಗೆ ಬೇರೊಂದು ನ್ಯಾಯವೇ ಇರುವಂತಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಹಿಂದೆ ಯುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಅನಧಿಕೃತ ಬ್ಯಾನರ್‌ಗಳನ್ನು ತಕ್ಷಣವೇ ತೆಗೆಸುವಂತೆ ಸೂಚಿಸಿದ್ದರು. ಆದರೆ, ವಿಜಯನಗರದಲ್ಲಿ ಕಳೆದ 11 ದಿನಗಳಿಂದ ಒಂದೇ ಬ್ಯಾನರ್ ರಾರಾಜಿಸುತ್ತಿದ್ದರೂ, ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಡಿಕೆ ಶಿವಕುಮಾರ್ ಅವರ ಆದೇಶಕ್ಕೆ ಅವರದೇ ಪಕ್ಷದ ನಾಯಕರು ಬೆಲೆ ನೀಡದಿರುವುದನ್ನು ತೋರಿಸುತ್ತದೆ.

ಪಾದಚಾರಿ ಮಾರ್ಗಗಳಿಗೆ ಕಂಟಕ

ಈ ಅನಧಿಕೃತ ಬ್ಯಾನರ್‌ಗಳು ಪಾದಚಾರಿ ಮಾರ್ಗಗಳನ್ನೇ ಅಡ್ಡಿಪಡಿಸಿವೆ. ಕಿಲೋಮೀಟರ್‌ಗಟ್ಟಲೆ ಪಾದಚಾರಿ ಮಾರ್ಗಗಳನ್ನು ಬ್ಯಾನರ್‌ಗಳು ಮುಚ್ಚಿಹಾಕಿವೆ, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಆದರೂ, 11 ದಿನಗಳು ಕಳೆದರೂ ಬಿಬಿಎಂಪಿ ಸಂಪೂರ್ಣ ಮೌನವಾಗಿದೆ.

ಅನಧಿಕೃತ ಬ್ಯಾನರ್‌ಗಳಿಂದಾಗಿ ಪಾದಚಾರಿಗಳಿಗೆ ಸಂಚಾರದಲ್ಲಿ ತೊಂದರೆಯಾಗುತ್ತಿದ್ದು, ಸಾರ್ವಜನಿಕರು ಪಾಲಿಕೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬ್ಯಾನರ್‌ಗಳನ್ನು ತೆಗೆಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Exit mobile version