ಬೆಂಗಳೂರು ದಕ್ಷಿಣ: ಎಂ ಕೃಷ್ಣಪ್ಪ ಗೆಲುವಿಗೆ ಅಡ್ಡಿಯಿಲ್ಲ.!

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t194901.101

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ 2023ರಲ್ಲಿ ಬಿಜೆಪಿ ಎಂ ಕೃಷ್ಣಪ್ಪ – 1,96,220 (51 %) ಮತ ಗಳಿಸಿ ಗೆದಿದ್ದರು. ಕಾಂಗ್ರೆಸ್ ಪರ ಆರ್.ಕೆ. ರಮೇಶ್ ಗೆ 1,46,521 (38 %) ಜೆಡಿಎಸ್ನ ಹೆಚ್.ಪಿ. ರಾಜಗೋಪಾಲ ರೆಡ್ಡಿ 24,612 (6 %) ಮತ ಪಡೆದಿದ್ದರು. ಫಲಿತಾಂಶದಲ್ಲಿ 49,699 ಮತಗಳ ಅಂತರದಿಂದ ಎಂ ಕೃಷ್ಣಪ್ಪ ಭರ್ಜರಿ ಗೆಲುವು ಸಾಧಿಸಿದ್ದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಚಿತ್ರಣ..

2008ರಿಂದ ಇಲ್ಲಿ ಬಿಜೆಪಿ ಬಿರುಗಾಳಿಯೇ ಇದ್ದು, ನಾಲ್ಕು ಬಾರಿ ಎಂ ಕೃಷ್ಣಪ್ಪ ಗೆಲುವುಸಾದಿಸಿದ್ದಾರೆ. ಕಾಂಗ್ರೆಸ್ ಗೆ ಈ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ. ಒಕ್ಕಲಿಗರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆರ್ ಕೆ ರಮೇಶ್ ಸೋಲು ಕಂಡಿದ್ದಾರೆ.

ಮೂಡ್ ಆಫ್ ಕರ್ನಾಟಕ ಬೆಂಗಳೂರು ದಕ್ಷಿಣ ಮೂಡ್ ಹೇಗಿದೆ.?

ಬಿಜೆಪಿಯಲ್ಲಿ ಎಷ್ಟೇ ಬಣ ಇದ್ದರು ಎಂ. ಕೃಷ್ಣಪ್ಪ ಮಾತ್ರ ಡೋಂಟ್ ಕೇರ್, ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕ ಹೊಂದಿರುತ್ತಾರೆ. ಒಕ್ಕಲಿಗರ ಪ್ರಾಬಲ್ಯವನ್ನ ಚೆನ್ನಾಗಿ ತಮ್ಮ ಪರ ಮಾಡಿಕೊಳ್ಳುವ ಕೃಷ್ಣಪ್ಪ ಕಾಂಗ್ರೆಸ್ ನ ಅಭ್ಯರ್ಥಿಗಳಿಗೆ ನೇರ ಫೈಟ್ ನೀಡುತ್ತಾರೆ. ಸೋತರು ಕ್ಷೇತ್ರದಲ್ಲೇ ಹೆಚ್ಚು ಸಮಯ ಕಳೆಯುವ ರಮೇಶ್ ಮತ್ತೆ ಅವಕಾಶದ ನಿರೀಕ್ಷೆಯಲ್ಲಿ ಇದ್ದಾರೆ.ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ಎಂ ಕೃಷ್ಣಪ್ಪ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ.!

ಬೆಂಗಳೂರು ದಕ್ಷಿಣದ ಆಕಾಂಕ್ಷಿಗಳು
ಬಿಜೆಪಿಯಿಂದ ಸತತ ಗೆಲುವು ಸಾಧಿಸುತ್ತಿರುವ ಎಂ. ಕೃಷ್ಣಪ್ಪ ಟೆಕೆಟ್ ಸಿಗುವ ಪಕ್ಕಾ. ಕಾಂಗ್ರೆಸ್ ನಿಂದ ಆರ್.ಕೆ. ರಮೇಶ್, ತೇಜಸ್ವಿನಿ ಗೌಡ, ರಾಜಗೋಪಾಲ ರೆಡ್ಡಿ ಟಿಕೆಟ್‌‌‌ಗೆ ಲಾಬಿ ನಡೆಸುತ್ತಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version