ಜಮೀರ್ ಮಗ ಕಲ್ಟ್ ಖಾನ್ ಮೀಟ್ಸ್ ಡ್ರ್ಯಾಗನ್ NTR..ಕಾದಿದೆ ಬಿಗ್ ಸರ್‌‌ಪ್ರೈಸ್

ತೆಲುಗು ಸಿನಿಮಾ ಮಾಡಲು ಝೈದ್ ಖಾನ್ ತೆರೆಮರೆ ಸಜ್ಜು..?

Untitled design 2026 06 10T175742.783

ನಮ್ಮ ಸ್ಯಾಂಡಲ್‌ವುಡ್‌ನ ಯಂಗ್‌ಸ್ಟರ್ ಝೈದ್ ಖಾನ್, ಟಾಲಿವುಡ್‌ನ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್‌ನ ಭೇಟಿ ಆಗಿದ್ದು, ಆ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಈ ಇಬ್ಬರು ಕಲಾವಿದರ ಭೇಟಿಯ ಹಿಂದೆ ಇರೋ ಇಂಟರೆಸ್ಟಿಂಗ್ ವಿಷಯವಾದ್ರೂ ಏನು..? ಒಟ್ಟಿಗೆ ಸಿನಿಮಾ ಮಾಡ್ತಾರಾ..? ಅಥ್ವಾ ಯಾತಕ್ಕಾಗಿ ಈ ಅಪರೂಪದ ಸಂಗಮ ಅನ್ನೋದು ಗೊತ್ತಾಗ್ಬೇಕಂದ್ರೆ ಈ ಸ್ಟೋರಿ ನೋಡಿ.

ಬನಾರಸ್ ಹಾಗೂ ಕಲ್ಟ್ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಸ್ಟಾರ್ ಆಗುವ ಸೂಚನೆ ನೀಡಿದ್ರು ನಟ ಝೈದ್ ಖಾನ್. ಮಾಜಿ ಸಚಿವ ಜಮೀರ್ ಖಾನ್ ಮುದ್ದಿನ ಮಗ ಝೈದ್, ನೋಡೋಕೆ ಸ್ಫುರದ್ರೂಪಿ ನಟ. ಇನ್‌ಫ್ಯಾಕ್ಟ್ ಒಳ್ಳೆಯ ಪರ್ಫಾರ್ಮರ್ ಕೂಡ ಹೌದು. ಡ್ಯಾನ್ಸ್, ಫೈಟ್, ಎಮೋಷನ್ಸ್.. ಹೀಗೆ ಸನ್ನಿವೇಶಕ್ಕೆ ತಕ್ಕನಾಗಿ ಎಲ್ಲವನ್ನೂ ನಿಭಾಯಿಸಿ ಭೇಷ್ ಅನಿಸಿಕೊಂಡ ಕನ್ನಡದ ಉದಯೋನ್ಮುಖ ನಟ.

ಮತ್ತೊಂದ್ಕಡೆ ಆಂಧ್ರ ಮಾಜಿ ಸಿಎಂ ಕಮ್ ಲೆಜೆಂಡರಿ ಆ್ಯಕ್ಟರ್ ಎನ್‌ಟಿಆರ್ ಮೊಮ್ಮಗ, ಇಂಡಿಯಾಗೆ ನಾಟು ನಾಟು ಸಾಂಗ್‌ನಿಂದ ಆಸ್ಕರ್ ಬರೋಕೆ ಕಾರಣೀಭೂತರಾದ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್. ಹೌದು.. ಆಂಧ್ರದಲ್ಲಿ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇರೋ ತ್ರಿಬಲ್ ಆರ್ ಸ್ಟಾರ್ ತಾರಕ್, ಸದ್ಯ ಡ್ರ್ಯಾಗನ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಡ್ರ್ಯಾಗನ್ ಟೀಸರ್ ಸಿನಿದುನಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ.

ಇದೀಗ ಈ ಡ್ರ್ಯಾಗನ್ ಹೀರೋ ಜೂನಿಯರ್‌ ಎನ್‌ಟಿಆರ್‌ನ ನಮ್ಮ ಕನ್ನಡದ ಕಲ್ಟ್ ಖಾನ್ ಝೈದ್ ಭೇಟಿ ಆಗಿರೋ ಫೋಟೋಗಳು ಎಲ್ಲೆಡೆ ಭಾರೀ ವೈರಲ್ ಆಗ್ತಿವೆ. ತಾರಕ್ ಸರಳತೆ, ಸಜ್ಜನಿಕೆ ಹಾಗೂ ಅವರು ನೀಡಿದ ಆ ಆತಿಥ್ಯಕ್ಕೆ ಝೈದ್ ಅಕ್ಷರಶಃ ಫಿದಾ ಆಗಿದ್ದಾರೆ. ಇದು ನನ್ನ ಜೀವನದ ಮರೆಯಲಾಗದ ಕ್ಷಣ ಅಂತೆಲ್ಲಾ ಬಣ್ಣಿಸಿ, ಫೋಟೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಕಲ್ಟ್ ಚಿತ್ರ ನಾಯಕನಟ ಝೈದ್.

ಅಂದಹಾಗೆ ಈ ಕನ್ನಡ ಹಾಗೂ ತೆಲುಗು ಕಲಾವಿದರ ಅಪರೂಪದ ಭೇಟಿ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಯಾಕಂದ್ರೆ ಕಲ್ಟ್ ಚಿತ್ರದ ಬಳಿಕ ಝೈದ್ ಖಾನ್ ಕನ್ನಡ ಹಾಗೂ ತೆಲುಗು ದ್ವಿಭಾಷಾ ಚಿತ್ರ ಮಾಡುವ ಯೋಜನೆ ಹೊಂದಿದ್ದರು. ಅದಕ್ಕೆ ಪೂರಕವಾಗಿ ಈಗ ತಾರಕ್ ಜೊತೆ ಕಾಣಿಸಿಕೊಂಡಿರೋದು ಅಚ್ಚರಿ ಮೂಡಿಸಿದೆ. ಡ್ರ್ಯಾಗನ್ ಚಿತ್ರದಲ್ಲಿ ಏನಾದ್ರೂ ಝೈದ್ ನಟಿಸ್ತಿದ್ದಾರಾ ಅನ್ನೋ ಅನುಮಾನಗಳು ಶುರುವಾಗಿವೆ. ಅಥ್ವಾ ಡ್ರ್ಯಾಗನ್ ಬಳಿಕ ತಾರಕ್ ನೆಕ್ಸ್ಟ್ ಚಿತ್ರದಲ್ಲಿ ಝೈದ್ ಬಣ್ಣ ಹಚ್ಚುತ್ತಾರಾ ಅಂತೆಲ್ಲಾ ಚಿತ್ರಪ್ರೇಮಿಗಳು ಕಮೆಂಟ್ಸ್ ಮಾಡ್ತಿದ್ದಾರೆ.

ಒಟ್ಟಾರೆ ಹೈದ್ರಾಬಾದ್‌‌‌ನಲ್ಲಿರೋ ಝೈದ್.. ಅಚಾನಕ್ಕಾಗಿ ಯಂಗ್ ಟೈಗರ್‌ನ ಮೀಟ್ ಮಾಡಿದ್ರಾ ಅಥ್ವಾ ಉದ್ದೇಶಪೂರ್ವಕವಾಗಿಯೇ ಭೇಟಿ ಆದ್ರಾ ಅನ್ನೋದು ಯಕ್ಷ ಪ್ರಶ್ನೆ. ಸದ್ಯ ಈ ಬಗ್ಗೆ ಮಾಹಿತಿ ಬಿಟ್ಟುಕೊಡದ ಝೈದ್, ವಿಷಯವನ್ನ ಗೌಪ್ಯವಾಗಿಟ್ಟಿರೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version