ಮೂರೂವರೆ ವರ್ಷದಿಂದ ಯಶ್ ರನ್ನ ಕಾಡ್ತಿತ್ತು ಈ ಒಂದು ಘಟನೆ..!!

ಅದೆಷ್ಟು ಕಾಡಿತ್ತು ಆ ಘಟನೆ.. ಅದೆಷ್ಟು ನೊಂದಿದ್ರು ರಾಕಿಭಾಯ್ ಯಶ್..?!

11 (20)

ಒಂದೊಂದು ಇನ್ಸಿಡೆಂಟ್ ಒಮ್ಮೊಮ್ಮೆ ಮನುಷ್ಯನನ್ನ ಇನ್ನಿಲ್ಲದೆ ಕಾಡುತ್ತೆ.. ಭಾದಿಸುತ್ತೆ. ನಿದ್ದೆಯಲ್ಲೂ ಕಾಡಲಾರಂಭಿಸುತ್ತೆ. ಕೆಜಿಎಫ್ ಚಿತ್ರದ ಮೂಲಕ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದಂತಹ ಹೆಮ್ಮೆಯ ಕನ್ನಡಿಗ ಯಶ್ ಕೂಡ ಅದರಿಂದ ಹೊರತಾಗಿಲ್ಲ. ಹೌದು.. ಮೂರೂವರೆ ವರ್ಷದ ಹಿಂದೆ ನಡೆದಂತಹ ಆ ಒಂದು ಘಟನೆಯಿಂದ ಸಿಕ್ಕಾಪಟ್ಟೆ ವಿಚಲಿತರಾಗಿದ್ರು ರಾಕಿಭಾಯ್ ಯಶ್. ಅದರಿಂದ ಹೊರ ಬರೋಕೆ ಅವರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರೂವರೆ ವರ್ಷಗಳೇ ಹಿಡಿದಿದೆ. ಇಷ್ಟಕ್ಕೂ ಅಂಥದ್ದೇನಾಗಿತ್ತು ಅಂತೀರಾ..? ಈ ಸ್ಟೋರಿ ಒಮ್ಮೆ ನೋಡ್ಕೊಂಡ್ ಬನ್ನಿ, ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಸಿಗಲಿದೆ.

ADVERTISEMENT
ADVERTISEMENT

ಅಕ್ಟೋಬರ್ 26, 2021ರ ರಾತ್ರಿ ಬೆಂಗಳೂರಿನ ಪಂಚತಾರಾ ಹೋಟೆಲ್ ತಾಜ್ ವೆಸ್ಟೆಂಡ್ ನಲ್ಲಿ ನಟ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಿತು. ಅಲ್ಲಿ ಶಿವಣ್ಣ ಹಾಗೂ ರಾಜರತ್ನ ಅಪ್ಪು ಜೊತೆ ನಟ ಯಶ್ ಕೂಡ ವೇದಿಕೆ ಹಂಚಿಕೊಂಡಿದ್ರು. ಅಲ್ಲದೆ, ಅಪ್ಪು ಶಿವಣ್ಣ ಜೊತೆಗೂಡಿ ಸ್ಟೆಪ್ ಕೂಡ ಹಾಕಿದ್ರು. ಆದ್ರೆ ಅದಾದ ಎರಡು ದಿನ ಬಿಟ್ಟು ಮೂರನೇ ದಿನವೇ ಭಜರಂಗಿ-2 ಸಿನಿಮಾ ತೆರೆಗಪ್ಪಳಿಸಿತು.

ಅಂದೇ ಅಪ್ಪುಗೆ ಹೃದಯಾಘಾತವೂ ಆಯಿತು. ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ ಸಿಡಿಲು ಬಡಿದಂತೆ ಕಿವಿಗಳಿಗೆ ಬಂದೆರಗಿತ್ತು. ಆ ಶಾಕ್ ನಿಂದ ಇನ್ನೂ ಹೊರಬರಲಾಗದೆ ಒದ್ದಾಡ್ತಿರೋ ಯಶ್, ಅರೇ ನಾನಿದ್ದ ಆ ಇವೆಂಟ್ ಪುನೀತ್ ರಾಜ್ ಕುಮಾರ್ ಅವರಿಗೆ ಕೊನೆಯದ್ದಾಗುತ್ತೆ ಅಂತ ಊಹಿಸಿರಲಿಲ್ಲ ಅಂತ ಅದೆಷ್ಟು ನೊಂದುಕೊಂಡ್ರೋ ಏನೋ.. ಅಂದಿನಿಂದ ಅವರು ಮತ್ಯಾವ ಫಿಲ್ಮ್ ಇವೆಂಟ್ಸ್ ಗೆ ಹೋದ ನಿದರ್ಶನವೇ ಇಲ್ಲ.

ಹೌದು.. ಸತತವಾಗಿ ಮೂರೂವರೆ ವರ್ಷಗಳಿಂದ ರಾಕಿಭಾಯ್ ಯಶ್ ಯಾವುದೇ ಸಿನಿಮಾದ ಟೀಸರ್, ಟ್ರೈಲರ್, ಸಾಂಗ್ ಲಾಂಚ್ ಅಥ್ವಾ ಪ್ರೀ ರಿಲೀಸ್ ಇವೆಂಟ್ಸ್ ಅಟೆಂಡ್ ಮಾಡಿಲ್ಲ. ಬೇಕು ಅಂತಲೇ ಎಲ್ಲವನ್ನು ಅವಾಯ್ಡ್ ಮಾಡ್ತಾ ಬರ್ತಿದ್ರು. ಅದ್ಯಾಕೋ ಇತ್ತೀಚೆಗೆ ಅಪ್ಪು 50ನೇ ಬರ್ತ್ ಡೇ ಆಯ್ತು. ಬೆನ್ನಲ್ಲೇ ಶಿವಣ್ಣ ಮನೆಗೆ ತೆರಳಿ ಪತ್ನಿ ಸಮೇತ ಕುಶಲೋಪರಿ ವಿಚಾರಿಸಿ ಬಂದಿದ್ರು ಯಶ್.

ಇದೀಗ ಅಪ್ಪು ಅವರ ಆ ಘಟನೆಯನ್ನ ಮರೆತು, ಮತ್ತೆ ಮೊದಲಿನಂತೆ ಹೊರಬರೋಕೆ ದಿಟ್ಟ ಮನಸ್ಸು ಮಾಡಿದ್ದಾರೆ. ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗಾಗಿಯೇ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಭಾಗಿಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇದೇ ಮಾರ್ಚ್ 23ರ ಸಂಜೆ 6.15ಕ್ಕೆ ಬೆಂಗಳೂರಿನ ಲುಲು ಮಾಲ್ ನಲ್ಲಿ ಮನದ ಕಡಲು ಸಿನಿಮಾದ ಟ್ರೈಲರ್ ಲಾಂಚ್ ಫಂಕ್ಷನ್ ನಡೆಯಲಿದೆ. ಭಟ್ರ ಡ್ರಾಮಾ ಚಿತ್ರದಲ್ಲಿ ನಟಿಸಿದ್ದ ನಟ ಯಶ್, ಇದೀಗ ತಮ್ಮ ಆತ್ಮೀಯರಿಗಾಗಿ ಸಿನಿಮಾ ಇವೆಂಟ್ ನಲ್ಲಿ ಭಾಗಿಯಾಗಲು ಓಕೆ ಅಂದಿದ್ದಾರಂತೆ. ಒಟ್ಟಾರೆ ಕೆಜಿಎಫ್-1, ಕೆಜಿಎಫ್-2 ಸಿನಿಮಾಗಳ ಬಳಿಕ ಟಾಕ್ಸಿಕ್ ನಲ್ಲಿ ಬ್ಯುಸಿಯಾಗಿದ್ದ ಯಶ್ ಅವರು, ಹೀಗೆ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಸಾಥ್ ನೀಡ್ತಿರೋದು ಒಳ್ಳೆಯ ಬೆಳವಣಿಗೆ. ರಾಕಿಭಾಯ್ ತೆಗೆದುಕೊಂಡಿರೋ ಈ ರಾಕಿಂಗ್ ನಿರ್ಧಾರಕ್ಕೆ ಇಡೀ ಚಿತ್ರರಂಗ ದಿಲ್ ಖುಷ್ ಆಗಿದೆ. ಈ ಪರ್ವ ಮುಂದುವರೆಯಲಿ. ಆಗಲೇ ಚಂದನವನಕ್ಕೊಂದು ಹೊಸ ಚೈತನ್ಯ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version