ರಾವಣ ಆಗೋಕೆ ಮುನ್ನ ಮಹಾಕಾಳೇಶ್ವರ ದರ್ಶನ

ಕುಲದೇವರ ಬಗ್ಗೆ ರಾಕಿಭಾಯ್ ಎಕ್ಸ್‌ಕ್ಲೂಸಿವ್ ಟಾಕ್

Film 2025 04 21t144040.638

ಶಿವನ ಆಜ್ಞೆ ಇಲ್ಲದೆ ಹುಲ್ಲುಕಡ್ಡಿ ಕೂಡ ಅಲುಗಾಡದು ಅಂತಾರೆ. ಅದ್ರಂತೆ ಆ ಪರಮೇಶ್ವರನ ದರ್ಶನ ಪಡೆಯದೆ ರಾಕಿಭಾಯ್ ಯಶ್ ಮಹತ್ವದ ಹೆಜ್ಜೆ ಇಡಲಾರರು. ಯೆಸ್.. ರಾವಣನ ಅವತಾರ ತಾಳೋಕು ಮುನ್ನ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ ರಾಕಿಂಗ್ ಸ್ಟಾರ್. ಇಷ್ಟಕ್ಕೂ ಕುಲದೇವರ ಬಗ್ಗೆ ಯಶ್ ಹೇಳಿದ್ದೇನು..? ಇಂಡಿಯನ್ ಸಿಇಓನ ಮೀಟ್ ಮಾಡಿದ ಸಿಎಂ ಏನಂದ್ರು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.

ಯಶ್ ಬರೀ ವ್ಯಕ್ತಿಯಲ್ಲ ಇಟ್ಸ್ ಬ್ರ್ಯಾಂಡ್. ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟ ಅದ್ಭುತ ಕಲಾವಿದ. ಕೆಜಿಎಫ್ ಸಿನಿಮಾದಿಂದ ಕನ್ನಡ ಸಿನಿಮಾಗಳು ಕೂಡ ಸಾವಿರಾರು ಕೋಟಿ ಗಳಿಸಬಲ್ಲವು ಅನ್ನೋದನ್ನ ತೋರಿಸಿಕೊಟ್ಟ ನಟ. ಕೆಜಿಎಫ್ ಬಳಿಕ ಯಶ್ ತಮ್ಮ ಮುಂದಿನ ಪ್ರಾಜೆಕ್ಟ್ ಟಾಕ್ಸಿಕ್‌‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ರು.

ADVERTISEMENT
ADVERTISEMENT

ಹಾಲಿವುಡ್ ಸ್ಟ್ಯಾಂಡರ್ಡ್‌ನಲ್ಲಿ ಟಾಕ್ಸಿಕ್ ಸಿನಿಮಾನ ಕಟ್ಟಿಕೊಡೋಕೆ ಸಜ್ಜಾಗಿರೋ ಯಶ್, ಭಾರತೀಯ ಚಿತ್ರರಂಗದ ಬೆಸ್ಟ್ ಕಲಾವಿದರು, ತಂತ್ರಜ್ಞರ ಜೊತೆ ಒಂದಷ್ಟು ಹಾಲಿವುಡ್ ಮಂದಿಯನ್ನ ಕೂಡ ಬಳಸಿಕೊಂಡಿರೋದು ಇಂಟರೆಸ್ಟಿಂಗ್. ಗೋವಾ ಡ್ರಗ್ ಮಾಫಿಯಾ ಕುರಿತ ಸಿನಿಮಾಗೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಯಶ್ ನಟನೆ ಜೊತೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಟಾಕ್ಸಿಕ್ ಸಿನಿಮಾನ ನಿರ್ಮಾಣ ಕೂಡ ಮಾಡ್ತಿದ್ದಾರೆ.

ಬೆಂಗಳೂರು, ತೂತುಕುಡಿ, ಗೋವಾ ಹಾಗೂ ಜೈಪುರ್‌‌ನಲ್ಲಿ ಶೂಟಿಂಗ್ ಮುಗಿಸಿರೋ ಯಶ್ & ಟಾಕ್ಸಿಕ್ ಟೀಂ, ಸದ್ಯ ಟಾಕ್ಸಿಕ್ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಿದೆ. ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿರೋ ರಾಮಾಯಣ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲು ಮುಂಬೈಗೆ ಹಾರಿದ್ದಾರೆ ಯಶ್. ಹೌದು.. ರಣ್‌ಬೀರ್ ಕಪೂರ್- ಸಾಯಿ ಪಲ್ಲವಿ ರಾಮ-ಸೀತೆಯಾಗಿ ಬಣ್ಣ ಹಚ್ಚಿರೋ ರಾಮಾಯಣಕ್ಕೆ ಲಂಕೇಶ್ವರ ನಮ್ಮ ಹೆಮ್ಮೆಯ ಕನ್ನಡಿಗ ಯಶ್.

ಈಗಾಗ್ಲೇ ರಾಮಾಯಣ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದ್ದು, ಯಶ್ ಬಣ್ಣ ಹಚ್ಚಲಿರೋ ರಾವಣ ಪಾತ್ರದ ಚಿತ್ರೀಕರಣ ಈ ವಾರದಿಂದ ನಡೆಯಲಿದೆಯಂತೆ. ಅದಕ್ಕಾಗಿ ಉತ್ತರ ಭಾರತದ ಕಡೆ ಪಯಣ ಬೆಳೆಸಿರೋ ಯಶ್‌ರನ್ನ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಭೇಟಿಯಾಗಿ, ಕುಶಲೋಪರಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಿಎಂ ಮೀಟ್ಸ್ ಇಂಡಿಯನ್ ಸಿಇಓ ಎನ್ನಲಾಗ್ತಿದೆ.

ಸಿಎಂ ಮೋಹನ್ ಯಾದವ್‌ ಹೂಗುಚ್ಚ ನೀಡಿ, ಯಶ್‌ರ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಿಗೆ ತುಂಬು ಹೃದಯದಿಂದ ಶುಭ ಹಾರೈಸಿದ ಬಳಿಕ, ಉಜ್ಜಯಿನಿಗೆ ಭೇಟಿ ನೀಡಿದ್ದಾರೆ ಯಶ್. ಅಲ್ಲಿನ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯಕ್ಕೆ ಭೇಟಿ ನೀಡಿ, ಪರಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಕೂಡ ಬೆಳಗಿದ್ದಾರೆ ರಾಕಿಭಾಯ್.

ರಾವಣನ ಪಾತ್ರವನ್ನು ನಿರ್ವಹಿಸಲು ಹೋಗ್ತಿರೋ ನನಗೆ, ನಿನ್ನ ಅನುಗ್ರಹವಿರಲಿ. ಆ ಪಾತ್ರವನ್ನು ಪೋಷಿಸುವ ಶಕ್ತಿ ನನಗೆ ನೀಡು ಅಂತ ಶಿವನಲ್ಲಿ ಸಂಕಲ್ಪ ಮಾಡಿಕೊಂಡಿದ್ದಾರೆ ಯಶ್. ಅಲ್ಲದೆ, ಮಾಧ್ಯಮಗಳಿಗೆ ಹೇಳಿಕೆ ನೀಡಿರೋ ರಾಕಿಭಾಯ್, ನನ್ನ ಕುಲದೇವರು ಶಿವ. ನಾನು ಕೂಡ ಶಿವನ ಆರಾಧಕ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲೊಂದು ಪಾಸಿಟಿವ್ ವೈಬ್ ಇದೆ. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಶಿವ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಅವ್ರ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದಿದ್ದಾರೆ.

ಅಂದಹಾಗೆ ಯಶ್‌ ಮನೆ ದೇವರು ನಂಜನಗೂಡಿನ ನಂಜುಂಡೇಶ್ವರ. ಆಗಾಗ ಅಲ್ಲಿಗೆ ಕುಟುಂಬ ಸಮೇತ ತೆರಳಿ, ವಿಶೇಷ ಪೂಜೆ ಪುನಸ್ಕಾರ ಸಲ್ಲಿಸುವುದು ಗೊತ್ತೇಯಿದೆ. ಅಲ್ಲದೆ, ಧರ್ಮಸ್ಥಳದ ಶ್ರೀ ಮಂಜುನಾಥನನ್ನ ಆರಾಧಿಸುವ ಯಶ್, ಕನಿಷ್ಟ ವರ್ಷಕ್ಕೊಮ್ಮೆ ಮಂಜುನಾಥನ ದರ್ಶನ ಪಡೀತಾರೆ. ಎಲ್ಲಕ್ಕಿಂತ ಮಿಗಿಲಾಗಿ ಪುರಾಣದಲ್ಲಿರೋ ರಾಮಾಯಣದ ರಾವಣ ಕೂಡ ಶಿವನ ಬಹುದೊಡ್ಡ ಭಕ್ತ. ಇಲ್ಲಿ ರಾವಣ ಪಾತ್ರ ನಿರ್ವಹಿಸಲು ಹೋಗ್ತಿರೋ ಯಶ್ ಕೂಡ ಶಿವನ ಮಹಾಭಕ್ತ ಅನ್ನೋದು ಕಾಕತಾಳೀಯ. ಅದೇನೇ ಇರಲಿ, ರಾಮಾಯಣದಲ್ಲಿ ರಾವಣನಾಗಿ ನಮ್ಮ ಯಶ್ ಅಬ್ಬರಿಸಿ, ಆರ್ಭಟಿಸಲಿ ಅನ್ನೋದು ನಮ್ಮ ಆಶಯ.

Exit mobile version