25 ವರ್ಷಗಳ ನಂತರ ಯಜಮಾನ ರೀ ರಿಲೀಸ್‌‌ಗೆ ಸಜ್ಜು..!

ಪ್ರೇಮಾಗೆ ಯಜಮಾನ ಪ್ರೊಡ್ಯೂಸರ್ ಮಹಾ ಮಂಗಳಾರತಿ

Untitled design 2025 11 05t203733.347

ವಿಷ್ಣುದಾದಾ ಅಭಿನಯದ ಯಜಮಾನ‌ ಸಿನಿಮಾ ಮಾಡಿದ್ದ ಮೋಡಿ ಇಂದಿಗೂ ದಾಖಲೆಯೇ ಸರಿ. ಹೀಗಿರುವಾಗ ಯಜಮಾನ ಮತ್ತೆ ರಿ ರಿಲೀಸ್ ಆಗ್ತಿದೆ ಆದ್ರೆ ಯಜಮಾನ ಸಿನಿಮಾ ಜರ್ನಿ ಮೆಲಕು ಹಾಕುತ್ತಾ ನಿರ್ಮಾಪಕ ರೆಹಮಾನ್ ನಟಿ ಪ್ರೇಮ್ ಬಗ್ಗೆ ಕೆಂಡಾ ಮಂಡಲ ಆಗಿದ್ದಾರೆ. ಅದ್ಯಾಕೆ ಏನ್ ಸ್ಟೋರಿ ಅನ್ನೋದರ ಝಲಕ್ ಇಲ್ಲಿದೆ ನೋಡಿ.

 

25 ವರ್ಷಗಳ ನಂತರ ಯಜಮಾನ ರೀ ರಿಲೀಸ್‌‌ಗೆ ಸಜ್ಜು

ಪ್ರೇಮಾಗೆ ಯಜಮಾನ ಪ್ರೊಡ್ಯೂಸರ್ ಮಹಾ ಮಂಗಳಾರತಿ

ಯಜಮಾನಗಿಂತ ಮಹಾನಟಿ ಹೆಚ್ಚಾಯ್ತ ಅಂದ ರಹಮಾನ್..!

ಒಬ್ಬ ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ವೃತ್ತಿ ಬದುಕಿನಲ್ಲಿ ಯಜಮಾನ ಸಿನಿಮಾ ಮಾಡಿದ್ದ ಮೋಡಿಯನ್ನ ಯಾರೂ ಮರೆಯೋಕೆ ಆಗಲ್ಲ‌. 25 ವರ್ಷಗಳ ನಂತರ ಯಜಮಾನ ಸಿನಿಮಾ ರಿ ರಿಲೀಸ್ ಆಗ್ತಿದೆ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡೋ ವೇಳೆಯೇ ಮತ್ತೆ ಅಭಿಮಾನಿಗಳಿಗೆ ಯಜಮಾನನ ದರ್ಶನ ಆಗ್ತಿದೆ. ಯಜಮಾನ 2000ನೇ ಇಸವಿಯಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತ್ತು. 2 ಕೋಟಿ ವೆಚ್ಚದ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ 20 ಕೋಟಿ ಗ್ರಾಸ್‌ ಕಲೆಕ್ಷನ್‌ ಮಾಡಿ ಅಬ್ಬರಿಸಿ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ 20 ಕೋಟಿ ಗಳಿಸಿದ ಚಿತ್ರ ಎಂಬ ದಾಖಲೆ ನಿರ್ಮಿಸಿತ್ತು.

ಉಪೇಂದ್ರ ನಿರ್ದೇಶನದ ʼಎʼ ಚಿತ್ರದ ದಾಖಲೆಯನ್ನು ಮುರಿದು ಚಂದನವನದ ಹೊಸ ಇಂಡಸ್ಟ್ರಿ ಹಿಟ್‌ ಎನಿಸಿಕೊಂಡಿತ್ತು. ಇಂತಹ ಮಹಾನ್‌ ಚಿತ್ರಕ್ಕೆ 25 ವರ್ಷಗಳು ಕಳೆದಿದ್ದು ಚಿತ್ರದ ನಿರ್ಮಾಪಕ ರಹಮಾನ್‌ 25 ವರ್ಷಗಳ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇನ್ನು ಚಿತ್ರದಲ್ಲಿ ನಟಿಸಿದ್ದ ಶಶಿಕುಮಾರ್‌, ರಮೇಶ್‌ ಭಟ್‌, ಅಭಿಜಿತ್ ಸೇರಿ ರವಿ ಶ್ರೀವತ್ಸವ.. ಕೆ ಮಂಜು.. ವೀರಕಪುತ್ರ ಶ್ರೀನುವಸ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದರೆ ಚಿತ್ರದ ನಾಯಕಿ ನಟಿ ಪ್ರೇಮ ಗೈರಾಗಿದ್ದರು.

ಈ ಕುರಿತು ವೇದಿಕೆಯಲ್ಲಿಯೇ ಕೆಂಡಾಮಂಡಲವಾದ ನಿರ್ಮಾಪಕ ರಹಮಾನ್‌ ನಟಿ ಪ್ರೇಮನ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಆದರೆ ಆಕೆ ಮಹಾನಟಿ ಎಂಬ ಕಾರ್ಯಕ್ರಮ ಮಾಡುತ್ತಿದ್ದು, ಅಲ್ಲಿಗೆ ಹೋಗಬೇಕು, ಬರುವುದಿಲ್ಲ ಎಂದಳು. ಬಿಡಮ್ಮ ನೀನು ದೊಡ್ಡ ಮಹಾನಟಿ ನೀನು ಬೇಡ ಎಂದೆ. ಅವರಿಗೆ ಈ ಚಿತ್ರಕ್ಕಿಂತ ಮಹಾನಟಿ ಎಂಬ ಕಾರ್ಯಕ್ರಮ ದೊಡ್ಡದಂತೆ ಎಂದರು. ಹೀಗಾಗಿ ನಿರ್ಮಾಪಕ‌ ರೆಹಮಾನ್‌ ಮಾತಾಡ್ತಾ …ಪ್ರೇಮ ಅವರನ್ನ ಅಂದು ವಿಷ್ಣುವರ್ಧನ್ ಯಜಮಾನ ಸಿನಿಮಾಗೆ ಬೇಡ ಅಂತ ಹೇಳಿದ್ರು. ನಾನೇ ಒತ್ತಾಯ ಮಾಡಿ ಒಪ್ಪಿಸಿದ್ದೆ. ಈಗ ಪ್ರೇಮಗೆ ಮಹಾನಟಿ ದೊಡ್ಡದಾಯ್ತಾ ಅಂತ  ಅಂತ ಆಕ್ರೋಶಗೊಂಡಿದ್ರು.

ಸುದ್ಧಿಗೋಷ್ಠಿಗೆ ಗೈರು ಪ್ರೇಮಗೆ ಏನ್‌ ಅಹಂಕಾರ..?

ವಿಷ್ಣುವರ್ಧನ್ ಯಜಮಾನಕ್ಕೆ ಪ್ರೇಮನ ಬೇಡ ಅಂದಿದ್ರು

ಅಂದ ಹಾಗೆ ವಿಷ್ಣು ವರ್ಧನ್ ಅವರ ಯಜಮಾನ ಸಿನಿಮಾ ವನ್ನ ಇಂದು ಡಿಐ ಬಳಸಿ 4k ಪ್ರೊಜೆಕ್ಷನ್ ಗೆ ತಯಾರು ಮಾಡಲಾಗಿದೆ. ಇನ್ನೂ ಕಲಾವಿದರ ಧ್ವನಿಗಳನ್ನ 5.1 ಹಾಗೆ 7.1 ಡಿಜಿಟಲ್ ಸೌಂಡ ಗೆ ಅಳವಡಿಡಲಾಗಿದೆ. ಹೀಗಾಗಿ ಸದ್ಯದ ಟೆಕ್ನಾಲಜಿ ಬಳಸಿ ಯಜಮಾನನಿಗೆ ಆಧುನಿಕ ಟಚ್ ಕೊಟ್ಟು ಅಭಿಮಾನಿಗಳೆದುರು ತರಲಾಗ್ತಿದೆ. ವಿಷ್ಣುವರ್ಧನ್  ಶಶಿಕುಮಾರ್…ರಮೇಶ್ ಭಟ್ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

25 ವರ್ಷಗಳ ಹಿಂದೆಯೇ ಯಜಮಾನ ಸಿನಿಮಾ ಅದೆಂತ ಮೋಡಿ ಮಾಡಿತ್ತು ಅಂದ್ರೆ ಬರೊಬ್ಬರಿ 35 ಕೋಟಿ ಹಣ ಗಳಿಸಿ ದಾಖಲೆ ಬರೆದಿತ್ತು.130 ಕ್ಕೂ ಹೆಚ್ಚು ಕಡೆ ಶತದಿನೋತ್ಸವ…40 ಕ್ಕೂ ಹೆಚ್ಚು ಕಡೆ 25 ವಾರ ಓಡಿದ್ದ ಸಿನಿಮಾ 4 ಥಿಯೇಟರ್ ನಲ್ಲಿ ಒಂದು ವರ್ಷ ಪೂರೈಸಿತ್ತು ಸಿನಿಮಾ. ಸದ್ಯ ಹೀಗೆ ದಾಖಲೆ ಬರೆದ ಸಿನಿಮಾವನ್ನ ನವೆಂಬರ್ 7ರಂದು ಮತ್ತೆ ರಿ ರಿಲೀಸ್ ಮಾಡಲಾಗ್ತಿದೆ. ಒಟ್ಟಿನಲ್ಲಿ ಅಂದು ಅವಕಾಶ ಕೊಟ್ಟ ಸಿನಿಮಾ ಪ್ರಮೋಶನ್ ಗೆ ಪ್ರೇಮ ಬಂದಿಲ್ಲ ಅಂತ ನಿರ್ಮಾಪಕ ಆಕ್ರೋಶ ಹೊರ ಹಾಕಿದ್ದು ಪ್ರೇಮಾ ಏನ್ ಹೇಳ್ತಾರೆ. ಆಧುನಿಕ ತಂತ್ರಜ್ನಾನದಲ್ಲಿ ಮೂಡಿ ಬಂದ ಸಿನಿಮಾವನ್ನ ಥಿಯೇಟರ್ ನಲ್ಲಿ ಹೇಗೆ ಮತ್ತೆ ಜನ‌ಮುಗಿಬಿದ್ದು ನೋಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Exit mobile version