ಕೇಂದ್ರ ಸರ್ಕಾರದಿಂದ ಸ್ಯಾಂಡಲ್‌ವುಡ್‌ಗೆ ಅವಮಾನ.. ‘ವೇವ್ಸ್‌‌’ಗಿಲ್ಲ ಆಹ್ವಾನ

ವಾರ್ತಾ & ಪ್ರಸಾರ ಸಚಿವಾಲಯಕ್ಕೆ ಚಂದನವನ ಕಾಣ್ಲಿಲ್ವಾ ?

11 2025 04 25t165133.406

ವೇವ್ಸ್ ವರ್ಲ್ಡ್‌ ಆಡಿಯೋ ವಿಶ್ಯುವಲ್ & ಎಂಟರ್‌ಟೈನ್ಮೆಂಟ್ ಸಮ್ಮಿಟ್‌ಗೆ ದಿನಗಣನೆ ಶುರುವಾಗಿದೆ. ಮುಂಬೈನಲ್ಲಿ ನಡೆಯುತ್ತಿರೋ ಈ ಸಮ್ಮಿಟ್‌ಗೆ ವಿಶ್ವ ಸಿನಿದುನಿಯಾದ ಟಾಪ್ ಟೆಕ್ನಿಷಿಯನ್ಸ್ ಹಾಗೂ ಕಲಾವಿದರ ದಂಡು ಆಗಮಿಸುತ್ತಿದೆ. ಸ್ಯಾಂಡಲ್‌ವುಡ್‌‌‌ನಿಂದ ಯಾರೆಲ್ಲಾ ಹೋಗ್ತಿದ್ದಾರೆ..? ಕೇಂದ್ರ ಸರ್ಕಾರಕ್ಕೆ ನಮ್ಮ ಚಂದನವನದ ಮೇಲೆ ಇರೋ ಪ್ರೀತಿ ಎಂಥದ್ದು ಅನ್ನೋದು ಗೊತ್ತಾಗ್ಬೇಕಾ..?

ADVERTISEMENT
ADVERTISEMENT

ಎಲೆಕ್ಷನ್ಸ್ ಹತ್ತಿರ ಬರ್ತಿದ್ದಂತೆ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರದ ರಾಜಕೀಯ ಧುರೀಣರೆಲ್ಲಾ ನಮ್ಮ ಕರ್ನಾಟಕಕ್ಕೆ ವಿಸಿಟ್ ಮೇಲೆ ವಿಸಿಟ್ ಹಾಕ್ತಾರೆ. ರೋಡ್ ಶೋಗಳು ಮಾಡೋದೇನು ಟೆಂಪಲ್ ರನ್ ಮಾಡೋದೇನು ಚಿತ್ರ ಕಲಾವಿದರನ್ನ ಭೇಟಿ ಆಗೋದೇನು. ಅಬ್ಬಬ್ಬಾ ಒಂದಾ ಎರಡಾ ಲೆಕ್ಕವಿಲ್ಲದಷ್ಟು ಸ್ಟಂಟ್ಸ್ ಮಾಡ್ತಾರೆ.

ಕೆಜಿಎಫ್, ಕಾಂತಾರ ಸಿನಿಮಾಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ ಯಶ್, ರಿಷಬ್ ಶೆಟ್ಟಿಯರನ್ನೆಲ್ಲಾ ಅವ್ರ ಪಬ್ಲಿಸಿಟಿ ಸ್ಟಂಟ್ಸ್‌‌ಗೆ ಬಳಸಿಕೊಳ್ತಾರೆ. ಆದ್ರೆ ಅದೇ ಕೇಂದ್ರ ಸರ್ಕಾರದ ವಾರ್ತಾ & ಪ್ರಸಾರ ಸಚಿವಾಲಯದಿಂದ ಆಯೋಜನೆ ಆಗಿರೋ ವೇವ್ಸ್ ಸಮ್ಮಿಟ್‌ಗೆ ಮಾತ್ರ ನಮ್ಮ ಸ್ಯಾಂಡಲ್‌ವುಡ್‌‌ಗೆ ಆಹ್ವಾನವಿಲ್ಲ ಅಂದ್ರೆ ನೀವು ನಂಬಲೇಬೇಕು. ಇದೇ ಮೇ 1ರಿಂದ 4ರವರೆಗೆ ಮುಂಬೈನಲ್ಲಿ ವೇವ್ಸ್ ಸಮ್ಮಿಟ್ ನಡೆಯುತ್ತಿದೆ.

ವರ್ಲ್ಡ್‌ ಆಡಿಯೋ ವಿಶ್ಯುವಲ್ & ಎಂಟರ್‌ಟೈನ್ಮೆಂಟ್ ಸಮ್ಮಿಟ್‌ ಇದಾಗಿದ್ದು, ನಾಲ್ಕು ದಿನಗಳ ಕಾಲ ಕೇಂದ್ರ ಸರ್ಕಾರದ ಮುಂದಾಳತ್ವದಲ್ಲೇ ನಡೆಯುತ್ತಿರೋ ಈ ಸಮ್ಮಿಟ್‌‌‌ನಲ್ಲಿ ಬಾಲಿವುಡ್ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಮರಾಠಿ, ಬೋಜ್ಪುರಿ ಹೀಗೆ ಎಲ್ಲಾ ಚಿತ್ರರಂಗದ ಗಣ್ಯರು ಭಾಗಿಯಾಗ್ತಿದ್ದಾರೆ. ಆದ್ರೆ ನಮ್ಮ ಕನ್ನಡ ಚಿತ್ರರಂಗಕ್ಕೆ ಆಹ್ವಾನವೇ ಬಂದಿಲ್ಲ ಅನ್ನೋದು ದುರಂತ.

ಚಿರಂಜೀವಿ, ರಾಜಮೌಳಿ, ನಾಗಾರ್ಜುನ್, ಮೋಹನ್‌ಲಾಲ್, ರಜನೀಕಾಂತ್, ಅಮಿತಾಬ್ ಬಚ್ಚನ್, ಆಮೀರ್ ಖಾನ್ ಸೇರಿದಂತೆ ಪರಭಾಷಾ ಸ್ಟಾರ್‌ಗಳೆಲ್ಲಾ ಈ ಸಮ್ಮಿಟ್‌‌ನಲ್ಲಿ ಪಾಲ್ಗೊಳ್ತಿದ್ದಾರೆ. ಆದ್ರೆ ಕನ್ನಡದ ಒಬ್ಬೇ ಒಬ್ಬ ತಂತ್ರಜ್ಞ ಅಥ್ವಾ ಕಲಾವಿದನಿಗೆ ಈ ಸಮ್ಮಿಟ್‌ಗೆ ಆಹ್ವಾನ ನೀಡದಿರೋದು ನಿಜಕ್ಕೂ ಬೇಸರದ ಸಂಗತಿ. ಈ ಬಗ್ಗೆ ನಮ್ಮ ಚಿತ್ರರಂಗ ಮೌನವಾಗಿರೋದು ಅದಕ್ಕಿಂತ ದೊಡ್ಡ ದುರಂತ. ಕೇಂದ್ರ ಈ ಬಗ್ಗೆ ಮಲತಾಯಿ ಧೋರಣೆ ತೋರ್ತಿರೋದ್ರ ಉದ್ದೇಶವಾದ್ರು ಏನು ಅಂತ ಗೊತ್ತಿಲ್ಲ.

ವೇವ್ಸ್‌‌ ಸಮ್ಮಿಟ್‌‌ನಲ್ಲಿ ಭಾಗಿಯಾಗ್ತಿರೋ ಬಹುತೇಕ ಎಲ್ಲಾ ಸ್ಟಾರ್ಸ್‌ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ವತಃ ಪ್ರಧಾನಿ ಮೋದಿ ಅವರೇ ಮಾತನಾಡಿದ್ದಾರೆ. ಆಗಲಾದ್ರೂ ಕನ್ನಡ ಚಿತ್ರರಂಗದಿಂದ ಯಾರೂ ಇಲ್ಲ ಅನ್ನೋದು ತಿಳಿಯದೆ ಹೋಗಿರೋದು ಕೆಟ್ಟ ಬೆಳವಣಿಗೆ ಅನಿಸಿದೆ. ಭಾರತೀಯ ಚಿತ್ರರಂಗಕ್ಕೆ 90 ವರ್ಷಗಳಿಂದ ನಮ್ಮ ಕನ್ನಡಿಗರ ಕೊಡುಗೆ ಅಪಾರವಾದದ್ದು. ನ್ಯಾಷನಲ್ ಇಂಟರ್ ನ್ಯಾಷನಲ್ ಲೆವೆಲ್‌‌ನಲ್ಲಿ ಸದ್ದು ಮಾಡ್ತಿರೋ ನಮ್ಮ ಕನ್ನಡ ಚಿತ್ರೋದ್ಯಮ ಬಾಲಿವುಡ್‌‌ಗೂ ಸೆಡ್ಡು ಹೊಡೆದಿತ್ತು. ಆದ್ರೀಗ ಈ ರೀತಿ ಆಹ್ವಾನ ಕೂಡ ನೀಡದೆ ಅಪಮಾನ ಮಾಡಿರೋದ್ರ ಹಿಂದಿನ ಉದ್ದೇಶ ಬಯಲಾಗಬೇಕಿದೆ. ಈ ಬಗ್ಗೆ ನಮ್ಮ ಸ್ಯಾಂಡಲ್‌ವುಡ್‌‌ ಮಂದಿ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version