ದಳಪತಿ ವಿಜಯ್‌ಗೆ 120 ಕೋಟಿ ಹಿನ್ನಡೆ..OTT ಡೀಲ್ ಕ್ಯಾನ್ಸಲ್..?

ಜನನಾಯಗನ್ ಪ್ರೊಡ್ಯೂಸರ್ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ

Untitled design 2026 03 13T143807.833

ತಮಿಳುನಾಡಿನಲ್ಲಿ ಬಹುಶಃ ಸಿಎಂ ಸ್ಟಾಲಿನ್‌‌ಗಿಂತ ಜಾಸ್ತಿ ಸುದ್ದಿಯಲ್ಲಿರೋದು ಒನ್ ಅಂಡ್ ಓನ್ಲಿ ದಳಪತಿ ವಿಜಯ್. ಅದಕ್ಕೆ ಕಾರಣ ಹತ್ತು ಹಲವು. ಆ ಪೈಕಿ ಜನ ನಾಯಗನ್ ರಿಲೀಸ್‌ಗೆ ಸೆನ್ಸಾರ್ ಅಡ್ಡಿಯಾಗಿರೋದು ಕೂಡ ಒಂದು. ಇದ್ರಿಂದ ಪ್ರೊಡ್ಯೂಸರ್‌ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದ್ದು, ಇದೀಗ ಓಟಿಟಿ ಡೀಲ್ ಕೂಡ ಕ್ಯಾನ್ಸಲ್ ಆಗಿದೆಯಂತೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ..

ಜನ ನಾಯಗನ್.. ಬಹುಶಃ ಒಂದು ಸಿನಿಮಾ ರಿಲೀಸ್ ಆಗಿ ಸಾವಿರ ಕೋಟಿ ಕ್ಲಬ್ ಸೇರಿದ್ರೂ ಇಷ್ಟರ ಮಟ್ಟಿಗೆ ಸುದ್ದಿ ಆಗಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ದಳಪತಿ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಎನ್ನಲಾಗಿರೋ ಜನ ನಾಯಗನ್ ಮಾತ್ರ ಪ್ರತೀ ದಿನ ಟಾಕ್ ಆಫ್ ದಿ ಟೌನ್ ಆಗಿದೆ. ಒಂದಿಲ್ಲೊಂದು ಕಾರಣಕ್ಕೆ ನಿರಂತರ ಸದ್ದು ಗದ್ದಲದಲ್ಲೇ ಇದೇ ಈ ಮಾಸ್ ಎಂಟರ್‌ಟೈನರ್.

ವಿನೋದ್ ನಿರ್ದೇಶನದ ಹಾಗೂ ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ತಯಾರಾಗಿರೋ ಜನನಾಯಗನ್, ಟೀಸರ್ ಹಾಗೂ ಟ್ರೈಲರ್‌‌ನಿಂದಲೇ ಸುನಾಮಿ, ಸುಂಟರಗಾಳಿ ಎಬ್ಬಿಸಿತ್ತು. ಒಂದ್ಕಡೆ ಬಾಲಯ್ಯನ ಭಗವಂತ್ ಕೇಸರಿ ರಿಮೇಕ್ ಎನ್ನಲಾಗಿರೋ ಈ ಸಿನಿಮಾ, ಅದರ ಹೊರತಾಗಿಯೂ ಸಹ ವಿಜಯ್ ಫ್ಯಾನ್ ಫಾಲೋಯಿಂಗ್‌ನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಆದ್ರೆ ಸೆನ್ಸಾರ್ ತಂದ ಆಪತ್ತು, ಇಂದಿಗೂ ಸಿನಿಮಾ ತೆರೆ ಕಂಡಿಲ್ಲ.

ಯೆಸ್.. ಜನವರಿಯಲ್ಲಿ ಪೊಂಗಲ್ ಹಬ್ಬದ ವಿಶೇಷ ವರ್ಲ್ಡ್ ವೈಡ್ ಬೆಳ್ಳಿತೆರೆ ಬೆಳಗಬೇಕಿದ್ದ ಜನ ನಾಯಗನ್, ಇಂದಿಗೂ ಬಿಗ್ ಸ್ಕ್ರೀನ್‌ಗೆ ಬಂದಿಲ್ಲ. ಬರುವ ಯಾವುದೇ ಸೂಚನೆ ಕೂಡ ಇಲ್ಲ. ಕೋರ್ಟ್, ಕಟ್ಟಳೆ ಅಂತ ಇಂದಿಗೂ ರಿಲೀಸ್ ಸ್ಪಷ್ಟತೆ ಇಲ್ಲದೆ ಒದ್ದಾಡ್ತಿದ್ದಾರೆ ನಿರ್ಮಾಪಕರು. 300 ರಿಂದ 400 ಕೋಟಿ ಬಿಗ್ ಬಜೆಟ್ ಮೂವಿ ಇದಾಗಿದ್ದು, ತಮಿಳುನಾಡು ಎಲೆಕ್ಷನ್ಸ್‌‌ನಿಂದ ಮತ್ತಷ್ಟು ವಿಳಂಬ ಆಗುವ ಮುನ್ಸೂಚನೆ ಇದೆ.

ಮಿನಿಮಮ್ ಗ್ಯಾರಂಟಿ ಆಗಿದ್ದ ದಳಪತಿ ವಿಜಯ್‌, ಬಾಕ್ಸ್ ಅಫೀಸ್‌‌ನಲ್ಲಿ ನಿರ್ಮಾಪಕರನ್ನ ಹಂಡ್ರೆಡ್ ಪರ್ಸೆಂಟ್ ಬಚಾವ್ ಮಾಡ್ತಿದ್ರು. ಆದ್ರೀಗ ಸೆನ್ಸಾರ್ ತಿಕ್ಕಾಟಕ್ಕೆ ಬಲಿಯಾಗಿರೋ ಜನ ನಾಯಗನ್, ಕಂಪ್ಲೀಟ್ ಬ್ಯುಸಿನೆಸ್‌‌ಗೆ ಹೊಡೆತ ನೀಡಿದೆ. ಅಮೆಜಾನ್ ಪ್ರೈಮ್‌‌ಗೆ ಬರೋಬ್ಬರಿ 120 ಕೋಟಿಗೆ ಡೀಲ್ ಆಗಿದ್ದ ಸಿನಿಮಾ, ಈ ಬಿಡುಗಡೆ ತಡೆಯಿಂದಾಗಿ ಆ ಡೀಲ್ ಕ್ಯಾನ್ಸಲ್ ಕೂಡ ಆಗಿದೆ ಎನ್ನಲಾಗ್ತಿದೆ. ಯಾಕಂದ್ರೆ ಓಟಿಟಿ ಪ್ಲಾಟ್‌ಫಾರ್ಮ್‌‌ಗಳ ಬ್ಯುಸಿನೆಸ್ ಸ್ಟ್ರ್ಯಾಟಜಿಗೆ ಹೊಡೆತ ಬಿದ್ದಾಗ ಅವರು ಕಂಪ್ಲೀಟ್ ಕಾಂಟ್ರಾಕ್ಟ್‌‌‌‌ನೇ ಕ್ಯಾನ್ಸಲ್ ಮಾಡಿ ಬಿಡ್ತಾರೆ. ಅದಕ್ಕೆ ಜನ ನಾಯಗನ್ ಕೂಡ ಈಗ ಸಾಕ್ಷಿ ಆಗಿದೆ.

ಒಂದ್ಕಡೆ ವಿಜಯ್ ರಾಜಕೀಯ ನಡೆ, ಈ ಸಿನಿಮಾ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಇದ್ರಿಂದ ವಿಜಯ್‌ಗೆ ಭಾರೀ ಹಿನ್ನಡೆ ಆಗಿದೆ. ವಿಜಯ್ ಹೇಗೋ ಸರ್ವೈವ್ ಆಗ್ತಾರೆ. ಆದ್ರೆ ಇಷ್ಟು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿರೋ ಪ್ರೊಡ್ಯೂಸರ್ ಮಾತ್ರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿದು ಸಿನಿಮಾ ಬಿಡುಗಡೆ ಆಗಿ, ನಿರ್ಮಾಪಕರು ಬೀದಿಗೆ ಬಾರದಂತೆ ಆದ್ರೆ ಅಷ್ಟೇ ಸಾಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version