ಕನ್ನಡ ಧಾರಾವಾಹಿಗಳಾದ ಸೀತಾರಾಮ, ಅಗ್ನಿಸಾಕ್ಷಿ ಮತ್ತು ದೇವಿಯಲ್ಲಿ ತಮ್ಮ ನಟನೆಯಿಂದ ಗುರುತಿಸಿಕೊಂಡಿರುವ ನಟಿ ವೈಷ್ಣವಿ ಗೌಡ ಇತ್ತೀಚೆಗೆ 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಅವರು ತಮ್ಮ ಪತಿ ಅನುಕೂಲ್ ಮಿಶ್ರಾ ಜೊತೆ ಉತ್ತರಾಖಂಡಗೆ ಹನಿಮೂನ್ ಹಾರಿದ್ದಾರೆ.
ವೈಷ್ಣವಿ ಗೌಡ ಅವರು ಬೆಂಗಳೂರಿನ ಹೊರವಲಯದ ಒಂದು ರೆಸಾರ್ಟ್ನಲ್ಲಿ ಉತ್ತರ ಪ್ರದೇಶ ಮೂಲದ ಅನುಕೂಲ್ ಮಿಶ್ರಾ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮತ್ತು ಮದುವೆಯನ್ನು ಆಚರಿಸಿದರು. ಈ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಹರಸಿದರು. ಈ ಮದುವೆ ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಒಂದು ವರ್ಷದ ಹಿಂದೆಯೇ ಇವರಿಬ್ಬರನ್ನು ಫಿಕ್ಸ್ ಮಾಡಲಾಗಿತ್ತು. ಸೀತಾರಾಮ ಧಾರಾವಾಹಿಯ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಈ ಮದುವೆ ನೆರವೇರಿತು.
ADVERTISEMENT
ADVERTISEMENT
ವೈಷ್ಣವಿಯ ಪತಿ ಅನುಕೂಲ್ ಮಿಶ್ರಾ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಇವರು, ವೈಷ್ಣವಿಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಉತ್ತರಾಖಂಡದ ಹನಿಮೂನ್ನ ಸುಂದರ ಫೋಟೋಗಳನ್ನು ಇವರಿಬ್ಬರೂ ಹಂಚಿಕೊಂಡಿದ್ದು, ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹನಿಮೂನ್ಗಾಗಿ ಉತ್ತರಾಖಂಡಕ್ಕೆ ತೆರಳಿರುವ ವೈಷ್ಣವಿ ಮತ್ತು ಅನುಕೂಲ್, ಅಲ್ಲಿನ ರಮಣೀಯ ತಾಣಗಳಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಹಿಮಾಲಯದ ತಪ್ಪಲಿನ ಸೌಂದರ್ಯದ ಮಧ್ಯೆ ಈ ಜೋಡಿ ಹಂಚಿಕೊಂಡಿರುವ ಫೋಟೋಗಳು ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ವೈಷ್ಣವಿಯ ಇನ್ಸ್ಟಾಗ್ರಾಮ್ ಪೋಸ್ಟ್ಗಳು ಅವರ ಸಂತಸದ ಜೀವನದ ಸಾಕ್ಷಿಯಾಗಿವೆ.
ಅನುಕೂಲ್ ಮಿಶ್ರಾ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿರುವ ಕಾರಣ, ವೈಷ್ಣವಿ ಕೂಡ ಬೆಂಗಳೂರಿನಲ್ಲಿಯೇ ನೆಲೆಸಲಿದ್ದಾರೆ. ಮದುವೆಯಾದರೂ ತಮ್ಮ ನಟನಾ ವೃತ್ತಿಯನ್ನು ಮುಂದುವರಿಸಲು ಯೋಜನೆ ಹಾಕಿರುವ ವೈಷ್ಣವಿ, ಮುಂದಿನ ದಿನಗಳಲ್ಲಿ ಕನ್ನಡ ಧಾರಾವಾಹಿಗಳು ಅಥವಾ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅವರ ಅಭಿಮಾನಿಗಳು ಈ ಜೋಡಿಯ ಹೊಸ ಜೀವನಕ್ಕೆ ಶುಭಾಶಯಗಳನ್ನು ಕೋರುತ್ತಿದ್ದಾರೆ.