ರಾಯಚೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಉಪೇಂದ್ರ ಮತ್ತು ಅವರ ಕುಟುಂಬದ ಜೊತೆ ನಟಿ ತಾರಾ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು. ಈ ಭೇಟಿಯ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಲವರಿಂದ ಆಶೀರ್ವಾದ ಪಡೆದರು.
ಉಪೇಂದ್ರ ದಂಪತಿ ಕುಟುಂಬ ಸಮೇತ ಮಂತ್ರಾಲಯಕ್ಕೆ ಆಗಮಿಸಿದ್ದು, ಮೊದಲಿಗೆ ಅವರು ಮಂಚಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಉಪೇಂದ್ರ, ಅವರ ಕುಟುಂಬಸ್ಥರು ಹಾಗೂ ನಟಿ ತಾರಾ, ಶ್ರೀ ಗುರು ರಾಘವೇಂದ್ರರ ಅವರ ಆಶೀರ್ವಾದ ಪಡೆದರು.
ನಂತರ, ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಲವರು ಉಪೇಂದ್ರ ಮತ್ತು ತಾರಾ ಅವರನ್ನು ಸತ್ಕರಿಸಿ, ಆಶೀರ್ವಾದಿಸಿದರು. ಶ್ರೀಗಳು ಉಪೇಂದ್ರ ಮತ್ತು ತಾರಾ ಅವರಿಗೆ ಮಂತ್ರಾಕ್ಷತೆ ಮತ್ತು ಪ್ರಸಾದವನ್ನು ನೀಡಿದರು. ಈ ವೇಳೆ ಉಪೇಂದ್ರ ಅವರು ಬೆಳ್ಳಿಯ ರಥದಲ್ಲಿ ಭಾಗಿಯಾಗಿದರು.
