ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?

ಉಪ್ಪಿಯೇ ಬರೆದ ಕಥೆಗೆ ಗೋಧ್ರಾ ರೈಲು ದುರಂತದ ಟಚ್

Untitled design (4)

ಗೋಧ್ರಾ ರೈಲು ದುರಂತದ ಬಳಿಕ ಅನೌನ್ಸ್ ಆಗಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹಿಂದೂ ಸಿನಿಮಾ ಬರೀ ಬರವಣಿಗೆಗಷ್ಟೇ ಸೀಮಿತ ಆಯಿತೇ ಹೊರತು, ಬೆಳ್ಳಿತೆರೆಗೆ ಬರಲೇ ಇಲ್ಲ. ಶ್ರೀರಾಮನ ಅವತಾರದಲ್ಲಿದ್ದ ಉಪೇಂದ್ರ ಫಸ್ಟ್‌ಲುಕ್ ಕೂಡ ಬಿಡುಗಡೆ ಆಗಿದ್ದ ಆ ಸಿನಿಮಾ ನಿಂತೋಗಿದ್ಯಾಕೆ..? ಅಂಥದ್ದೇನು ಸೆನ್ಸೇಷನಲ್ ಕಂಟೆಂಟ್ ಇತ್ತು ಆ ಸಿನಿಮಾದ ಕಥೆಯಲ್ಲಿ ಅಂತೀರಾ..? ಈ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ರಿಯಲ್ ಸ್ಟಾರ್ ಉಪೇಂದ್ರ.. ಅದ್ಭುತ ನಟ, ನಿರ್ದೇಶಕ, ನಿರ್ಮಾಪಕ. ಎಲ್ಲಕ್ಕಿಂತ ಮಿಗಲಾಗಿ ಒಳ್ಳೆಯ ಬರಹಗಾರ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿರೋ ಉಪೇಂದ್ರ ಸನಾತನಿ ಕೂಡ ಹೌದು. ದೇವರನ್ನ ನಂಬುವಂತಹ ಆಸ್ತಿಕನಾಗಿದ್ದು, ಲಾರ್ಡ್ ಗಣೇಶನನ್ನ ಸಿಕ್ಕಾಪಟ್ಟೆ ಆರಾಧಿಸ್ತಾರೆ. ಇಂದಿಗೂ ಮನೆಯಲ್ಲಿ ಆಗಾಗ ಹೋಮ, ಹವನ, ಪೂಜೆ, ಪುನಸ್ಕಾರಗಳನ್ನ ಮಾಡಿಸ್ತಾನೇ ಇರ್ತಾರೆ.

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ?
ಉಪ್ಪಿಯೇ ಬರೆದ ಕಥೆಗೆ ಗೋಧ್ರಾ ರೈಲು ದುರಂತದ ಟಚ್

ಆದ್ರೆ ಅವ್ರ ಸಿನಿಮಾಗಳಲ್ಲಿ ಮಾತ್ರ ನಾಸ್ತಿಕರಂತೆ ಬಿಂಬಿಸಿಕೊಂಡಿದ್ದಾರೆ. ಐ ಆ್ಯಮ್ ಗಾಡ್. ಗಾಡ್ ಈಸ್ ಗ್ರೇಟ್ ಅಂತ ಹೇಳಿ, ಆ ಲಾರ್ಡ್ ಗಣಪನನ್ನೇ ತೆಗೆದು ಬಾವಿಗೆ ಹಾಕಿದ್ರು ಉಪ್ಪಿ. ಹಾಗಾಗಿ ಅವ್ರ ಬಹು ನಿರೀಕ್ಷಿತ, ಬಹುದೊಡ್ಡ ಹಿಂದೂ ಸಿನಿಮಾದ ಕನಸು ಕನಸಾಗಿಯೇ ಉಳಿದಿದೆ. ನನಸಾಗಲೇ ಇಲ್ಲ. ನನಸಾಗುವುದೂ ಇಲ್ಲ. ಯಾಕಂದ್ರೆ ಹಿಂದೂ ಸಿನಿಮಾ ಅನೌನ್ಸ್ ಆಗಿದ್ದು 2002ರಲ್ಲಿ. ಅದೂ ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ. ರಘುಕುಲ ತಿಲಕ ಶ್ರೀರಾಮನಾಗಿ ಬಣ್ಣ ಹಚ್ಚಿದ್ದ ಉಪೇಂದ್ರ, ಅದ್ರ ಫಸ್ಟ್‌ಲುಕ್‌ನಿಂದಲೇ ಸಂಚಲನ ಮೂಡಿಸಿದ್ರು.

ಮುನಿರತ್ನ ನಿರ್ಮಾಣ ಮಾಡಿ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಬೇಕಿದ್ದ ಹಿಂದೂ ಸಿನಿಮಾಗೆ ಸ್ವತಃ ಉಪೇಂದ್ರ ಅವರೇ ಕಥೆ, ಚಿತ್ರಕಥೆ ಬರೆದು ಡೈಲಾಗ್ಸ್ ಕೂಡ ಬರೆದಿದ್ರು. ಲೀಡ್‌ನಲ್ಲಿ ತಾವೇ ನಟಿಸಲು ಗ್ರೀನ್ ಸಿಗ್ನಲ್ ನೀಡಿ, ನಿರ್ದೇಶನದ ಜವಾಬ್ದಾರಿ ಎಸ್‌‌ವಿ ರಾಜೇಂದ್ರ ಸಿಂಗ್ ಬಾಬುಗೆ ನೀಡಿದ್ರು. ಆದ್ರೆ ಹಿಂದೂಪರ ಸಂಘಟನೆಗಳಿಂದಲೇ ಈ ಸಿನಿಮಾಗೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಹೀಗಾಗಿ ಹಿಂದೂ ಸಿನಿಮಾದ ಉಪ್ಪಿ ಕನಸು ಅಂದೇ ನುಚ್ಚಿ ನೂರಾಯ್ತು.

ಕೋಮು ದಳ್ಳುರಿ.. ಹಿಂದೂ ಸಂಘಟನೆಗಳಿಂದ್ಲೇ ವಿರೋಧ

ಮುನಿರತ್ನ ನಿರ್ಮಾಣ.. SV ರಾಜೇಂದ್ರ ಸಿಂಗ್ ಬಾಬು ನಿರ್ದೇಶನ

ಇಷ್ಟಕ್ಕೂ ಅಂಥದ್ದೇನು ಕಂಟೆಂಟ್ ಇತ್ತು ಈ ಚಿತ್ರದಲ್ಲಿ ಅಂತ ನೋಡೋದಾದ್ರೆ.. 2002ರಲ್ಲಿ ಗುಜರಾತ್ ಕೋಮು ಗಲಭೆಗಳಿಂದ ಹೊತ್ತಿ ಉರಿಯುತ್ತಿತ್ತು. ಸಬರಮತಿ ಎಕ್ಸ್‌‌ಪ್ರೆಸ್ ರೈಲಿನಲ್ಲಿ ಅಯೋಧ್ಯೆಗೆ ತೆರಳಿ, ವಾಪಸ್ ಆಗುತ್ತಿದ್ದ ಹಿಂದೂ ಕರ ಸೇವಕರಿದ್ದ ಬೋಗಿಗಳಿಗೆ ಗೋಧ್ರಾ ರೈಲ್ವೇ ನಿಲ್ದಾಣದ ಬಳಿ ಮುಸ್ಲಿಂ ಗುಂಪು ಬೆಂಕಿ ಹಚ್ಚುತ್ತೆ. ಅಲ್ಲಿ 59 ಮಂದಿ ಕರ ಸೇವಕರು ಸಜೀವ ದಹನವಾಗ್ತಾರೆ. ಮುಸ್ಲಿಂ ಸಮುದಾಯವೇ ಇದ್ದಂತಹ ಗೋಧ್ರಾದಲ್ಲಿ ಅಂಥದ್ದೊಂದು ಘಟನೆ ನಡೆದ ಬಳಿಕ, ಹಿಂದೂಗಳು ಕೂಡ ಮುಸ್ಲಿಂರ ಮೇಲೆ ಅಟ್ಯಾಕ್ ಮಾಡ್ತಾರೆ. ಗೋಧ್ರಾ ರೈಲು ದುರಂತ ಪ್ರಕರಣ, ಅಪಾರ ಸಾವು ನೋವುಗಳಿಂದ ಗೋಧ್ರಾ ಹತ್ಯಾಕಾಂಡಕ್ಕೆ ಮುನ್ನುಡಿ ಬರೆಯುತ್ತೆ. ಜಾತಿ, ಸಮುದಾಯ ಅಂತ ಬಡಿದಾಡೋ ಆ ನೈಜ ಘಟನೆಗಳನ್ನ ಆಧರಿಸಿ ಉಪೇಂದ್ರ ಕಥೆ ಹೆಣೆದು, ಶೂಟಿಂಗ್‌ಗೆ ಸಜ್ಜಾಗ್ತಾರೆ. ಅಷ್ಟರಲ್ಲೇ ವಿರೋಧಗಳು ವ್ಯಕ್ತವಾಗುತ್ತವೆ.

ತೆಲುಗಿನಲ್ಲಿ ರಾ, ನೀತೋನೇ ಉಂಟಾ ಸಿನಿಮಾಗಳ ಜೊತೆ ಕನ್ನಡದಲ್ಲಿ H2O, ಸೂಪರ್ ಸ್ಟಾರ್ ಸಿನಿಮಾಗಳಿಂದ ಸಕ್ಸಸ್‌‌ನ ಉತ್ತುಂಗದಲ್ಲಿದ್ದ ಉಪೇಂದ್ರ, ಆ ಸಮಯದಲ್ಲಿ ಹಿಂದೂ ಸಿನಿಮಾ ಮಾಡ್ತೀನಿ ಅಂದಿದ್ದೇ ಬಿಗ್ಗೆಸ್ಟ್ ಸೆನ್ಸೇಷನ್. ಅಂದು ಅದು ಸಿನಿಮಾ ಆಗಿದ್ದಿದ್ರೆ ಅವ್ರ ಫಿಲಾಸಫಿ ಹಾಗೂ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿ ಮತ್ತೊಂದು ಎ, ಉಪೇಂದ್ರ, ಸೂಪರ್ ಸಿನಿಮಾ ರೀತಿ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಆಗ್ತಿತ್ತೋ ಏನೋ ಗೊತ್ತಿಲ್ಲ. ಆದ್ರೆ ಎಲ್ಲರ ತಲೆಗೆ ಹುಳ ಬಿಡೋ ಉಪ್ಪಿ ಮಾತ್ರ ತಮ್ಮ ಕ್ಯಾರೆಕ್ಟರ್‌‌ನ ಬಹಳ ಡಿಫರೆಂಟ್ ಆಗಿ ಬರೆದಿದ್ದರಂತೆ. ಪಾಕಿಸ್ತಾನದ ಟೆರರಿಸ್ಟ್‌‌‌ನಿಂದ ಹಿಡಿದು ಹಿಂದೂ ಮಹಾನಾಯಕನವರೆಗೆ ಉಪ್ಪಿ ಪಾತ್ರವಿತ್ತು ಎನ್ನಲಾಗುತ್ತೆ.

ಜಾತಿ, ಸಮುದಾಯಗಳ ಹೆಸರಲ್ಲಿ ಯಾಕೆ ಈ ರೀತಿಯ ನರಮೇಧಗಳು ಆಗುತ್ತವೆ ಅನ್ನೋದನ್ನ ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದ ಉಪೇಂದ್ರ ತಮ್ಮ ಕನಸುಗಳನ್ನ ಸಾಯಿಸಿಕೊಳ್ಳಬೇಕಾಯಿತು. ಆ ಸಿನಿಮಾ ಮತ್ತೆಲ್ಲಿ ಕೋಮು ಗಲಭೆಗಳಿಗೆ ಎಡೆಮಾಡಿಕೊಡುತ್ತೋ ಅನ್ನೋ ಭಯ ಎಲ್ಲರಲ್ಲೂ ಕಾಡಿತ್ತು. ಅದೇ ಕಾರಣಕ್ಕೆ ಹಿಂದೂ ಸಿನಿಮಾ ಶೂಟಿಂಗ್ ಆಗಲೇ ಇಲ್ಲ. ಆಗುವುದೂ ಇಲ್ಲ ಅನ್ನೋದೇ ಬೇಸರದ ಸಂಗತಿ.

 

 

Exit mobile version