ದರ್ಶನ್‌ಗೆ ಉಮಾಪತಿ ಟಾಂಗ್

ನನ್ನ ಭಯ ಬೀಳಿಸೋ ಶಕ್ತಿ ಯಾರಿಗೂ ಇಲ್ಲ

Shn (7)

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಉಮಾಪತಿ ಗೌಡ ಹಾಗೂ ನಟ ದರ್ಶನ್ ನಡುವೆ ಕೆಲದಿನಗಳ ಹಿಂದೆ ಜಗಳವಾಗಿತ್ತು. ಒಬ್ಬರಿಗೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಟೀಕೆ-ಪ್ರತಿಟೀಕೆ ಮಾಡಿಕೊಂಡಿದ್ದರು. ಮುಂದುವರೆದು ಇಂದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಹಲಗಡಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕ ಉಮಾಪತಿ ಗೌಡ ನಟ ದರ್ಶನ್ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು.

ಇಂದು ಕರೆ ಒಕ್ಕಲಿಗರ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಮಾಪತಿಗೌಡ, ತಮ್ಮ ಭಾಷಣದಲ್ಲಿ ಯಾವುದೇ ಹೆಸರನ್ನು ಉಲ್ಲೇಖಿಸದೇ ಸ್ಪಷ್ಟ ಗುರಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿರು.

ಉಮಾಪತಿ ಗೌಡ ಹೇಳಿದ್ದೇನು?

‘ನಾನಿವತ್ತು ಈ ವೇದಿಕೆಯಲ್ಲಿ ನಿಂತಿದ್ದೇನೆಂದರೆ, ಅನೇಕ ಕಷ್ಟ-ತೊಂದರೆಗಳನ್ನು ಎದುರಿಸಿದ್ದೇನೆ. ತಂಟೆ-ತಕರಾರುಗಳನ್ನು ಎದುರಿಸಿದ್ದೇನೆ. ಕೆಲವರು ಕೇಳ್ತಿದ್ದರು, ದೊಡ್ಡವರನ್ನು ಎದುರು ಹಾಕ್ಕೊಂಡು ಏನ್ ಮಾಡ್ತೀಯಾ ಅಂತ. ಆದರೆ ನಾನು ಯಾರನ್ನೂ ಎದುರು ಹಾಕಿಕೊಳ್ಳಲಿಲ್ಲ, ನನ್ನ ಅವರೇ ಎದುರು ಹಾಕಿಕೊಳ್ತಾರೆ’ ಎಂದರು

ನಾವು ಒಳ್ಳೆಯ ಕೆಲಸ ಮಾಡಿದ್ರೆ ಯಾರಿಗೂ ಭಯ ಬೀಳಬೇಕಿಲ್ಲ. ಒಳ್ಳೆಯ ಕೆಲಸ ಮಾಡೋರಿಗೆ ಭಯ ಬೀಳಬೇಕಷ್ಟೇ. ನಾನು ಯಾವುದಕ್ಕೂ ಭಯಪಡಲ್ಲ, ನನ್ನ ಭಯ ಬೀಳಿಸೋ ಶಕ್ತಿ ಯಾರಿಗೂ ಇಲ್ಲ. ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಿದ್ದೇನೆ. ಸಾಯೋವರೆಗೂ ಇನ್ನೊಬ್ಬರಿಗೆ ಮಾದರಿಯಾಗಿಯೇ ಇರ್ತೀನಿ ಎಂದುರು.

ಮುಂದುವರೆದು, ಬದುಕಿನಲ್ಲಿ ಎರಡು ವರ್ಗದ ಜನ ಇರ್ತಾರೆ. ಒಂದು, ಇನ್ನೊಬ್ಬರಿಗೆ ಮಾದರಿಯಾಗಿರೋರು. ಮತ್ತೊಬ್ಬರು ಎಚ್ಚರಿಕೆ ಕೊಡೋವಂತವರು. ಜೈಲಿಗೆ ಹೋಗಿ ಬಂದವರು, ಇನ್ನೊಬ್ಬರಿಗೆ ತೊಂದರೆ ಕೊಟ್ಟು ನಾಶವಾಗೋರು ಎಚ್ಚರಿಕೆ ಕೊಡೋವಂತವರು. ನಿಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಅಂತ ನೀವೇ ನಿರ್ಧರಿಸಿ ಎಂದು ಉಮಾಪತಿ ತಿಳಿಸಿದರು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

 

Exit mobile version