ಯುಗಾದಿಗೆ ಪ್ಯಾನ್ ಇಂಡಿಯಾ ಫಿಲ್ಮ್ ಫೆಸ್ಟಿವಲ್..!

ಐದು ಚಿತ್ರರಂಗದಿಂದ ಐದು ಸಿನಿಮಾ.. ಕನ್ನಡಿಗರ ಕಮಾಲ್..!

Untitled design 2025 03 24t203643.757

ಮೊನ್ನೆ ಮೊನ್ನೆಯಷ್ಟೇ ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮುಗಿದಿದ್ದು ಎಲ್ರಿಗೂ ಗೊತ್ತೇಯಿದೆ. ಅದ್ರ ಬೆನ್ನಲ್ಲೀಗ ಮತ್ತೊಂದು ಫಿಲ್ಮ್ ಫೆಸ್ಟ್ ಗೆ ಕೌಂಟ್ ಡೌನ್ ಶುರುವಾಗಿದೆ. ಅದು ಯುಗಾದಿ ಪ್ಯಾನ್ ಇಂಡಿಯಾ ಫಿಲ್ಮ್ ಫೆಸ್ಟಿವಲ್. ಅರೇ ಇದ್ಯಾವ ಫೆಸ್ಟ್..? ಎಲ್ಲಿ ನಡೆಯುತ್ತೆ ಅಂತ ಹುಬ್ಬೇರಿಸಬೇಡಿ. ಯುಗಾದಿ ಹಬ್ಬದ ವಿಶೇಷ, ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಸಿನಿಮಾಗಳು ದೇಶಾದ್ಯಂತ ಒಟ್ಟೊಟ್ಟಿಗೆ ತೆರೆಗಪ್ಪಳಿಸುತ್ತಿವೆ. ವಿಶೇಷ ಅಂದ್ರೆ ಐದು ಚಿತ್ರರಂಗಗಳಿಂದ ಐದು ಸಿನಿಮಾಗಳು ಒಂದೇ ಬಾರಿ ರಿಲೀಸ್ ಆಗ್ತಿರೋದು ಅಚ್ಚರಿ.

ಹೌದು.. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ.. ಹೀಗೆ ಪಂಚಭಾಷಾ ಚಿತ್ರರಂಗಗಳಿಂದ ಐದು ಚಿತ್ರಗಳು ನೋಡುಗರಿಗೆ ಮನರಂಜನೆಯ ಪಂಚ್ ಕೊಡೋಕೆ ಬರ್ತಿವೆ. ಸಾಮಾನ್ಯವಾಗಿ ಹಬ್ಬ, ಹರಿದಿನಗಳು ಅಂದಾಗ ರಜೆಗಳು ಜಾಸ್ತಿ ಸಿಗುತ್ತವೆ. ಅದನ್ನೇ ಬಂಡವಾಳ ಮಾಡಿಕೊಳ್ಳೋ ನಿಟ್ಟಿನಲ್ಲಿ ಫಿಲ್ಮ್ ಮೇಕರ್ಸ್, ತಮ್ಮ ಸಿನಿಮಾಗಳನ್ನ ಆ ಸ್ಪೆಷಲ್ ದಿನದಂದೇ ರಿಲೀಸ್ ಮಾಡೋಕೆ ಯೋಜನೆ ರೂಪಿಸುತ್ತಾರೆ. ಅದ್ರಂತೆ ಈ ಬಾರಿಯ ಯುಗಾದಿಗೆ ದಿನಗಣನೆ ಶುರುವಾಗಿದ್ದು, ಹಿಂದಿಯಿಂದ ಸಿಕಂದರ್, ತೆಲುಗಿನಿಂದ ರಾಬಿನ್ ಹುಡ್, ಮಲಯಾಳಂನಿಂದ ಎಂಪುರಾನ್, ತಮಿಳಿನಿಂದ ವೀರ ಧೀರ ಶೂರನ್ ಹಾಗೂ ಕನ್ನಡದಿಂದ ಮನದ ಕಡಲು ಸಿನಿಮಾಗಳು ಥಿಯೇಟರ್ ಗೆ ಎಂಟ್ರಿ ಕೊಡ್ತಿವೆ.

ADVERTISEMENT
ADVERTISEMENT

ವಿಶೇಷ ಅಂದ್ರೆ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ನಮ್ಮ ಕನ್ನಡಿಗರ ಕೈಚಳಕವಿದೆ. ಹೌದು.. ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರದಲ್ಲಿ ನಾಯಕನಟಿ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ. ಅಲ್ಲದೆ ಹುಲಿ ಕಿಶೋರ್ ಪೊಲೀಸ್ ಕಾಪ್ ರೋಲ್ ಮೂಲಕ ಗಮನ ಸೆಳೆದಿದ್ದಾರೆ. ಈ ಸಿನಿಮಾ ಯುಗಾದಿ ಹಾಗೂ ಈದ್ ಪ್ರಯುಕ್ತ ಮಾರ್ಚ್ 30ಕ್ಕೆ ತೆರೆಗೆ ಬರ್ತಿದೆ.

ಇನ್ನು ಮಲಯಾಳಂನ ಎಂಪುರಾನ್ ಚಿತ್ರ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ತಯಾರಾಗಿದ್ದು, ಲೂಸಿಫರ್ ಸೀಕ್ವೆಲ್ ಅದ್ದರಿಂದ ಮೋಹನ್ ಲಾಲ್ ಮತ್ತೊಮ್ಮೆ ಮಿಂಚು ಹರಿಸಲಿದ್ದಾರೆ. ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಇಲ್ಲಿಯೂ ಸಹ ಹುಲಿ ಕಿಶೋರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಮಾರ್ಚ್ 27ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ.

ಚಿಯಾನ್ ವಿಕ್ರಮ್ ನಟನೆಯ ವೀರ ಧೀರ ಶೂರನ್ ಸಿನಿಮಾ ಕೂಡ ಕಥೆ ಹಾಗೂ ಮೇಕಿಂಗ್ ನಿಂದ ವ್ಹಾವ್ ಫೀಲ್ ತರಿಸಿದೆ. ನಿನ್ನೆಯಷ್ಟೇ ನಟ ವಿಕ್ರಮ್ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೂ ಬಂದು ಭರ್ಜರಿ ಪ್ರಮೋಷನ್ಸ್ ಮಾಡಿ ಹೋಗಿದ್ದಾರೆ. ಈ ಚಿತ್ರದಲ್ಲಿ ನಮ್ಮ ಕನ್ನಡದ ಕಲಾವಿದ ರಮೇಶ್ ಇಂದಿರಾ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ಮಾರ್ಚ್ 27ರಂದೇ ಪ್ರೇಕ್ಷಕರ ಮುಂದೆ ಬರ್ತಿದೆ.

ನಿತಿನ್ ರೆಡ್ಡಿ ನಟನೆಯ ರಾಬಿನ್ ಹುಡ್ ಸಿನಿಮಾ ಮೇಕಿಂಗ್ ನಿಂದ ಭೇಷ್ ಅನಿಸಿಕೊಂಡಿದೆ. ಅಲ್ಲದೆ, ಈ ಚಿತ್ರದ ನಾಯಕಿ ಕನ್ನಡತಿ ಶ್ರೀಲೀಲಾ. ಇವರಿಬ್ಬರ ಕಾಂಬೋಗೆ ಮತ್ತಷ್ಟು ಕ್ರೇಜ್ ತಂದುಕೊಡೋಕೆ ಆಸ್ಟ್ರೇಲಿಯನ್ ಕ್ರಿಕೆಟರ್ ಡೇವಿಡ್ ವಾರ್ನರ್ ಕೂಡ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕೂಡ ಯುಗಾದಿ ಹಬ್ಬದ ವಿಶೇಷ ಮಾರ್ಚ್ 28ಕ್ಕೆ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡ್ತಿದೆ. ಲಾಸ್ಟ್ ಬಟ್ ನಾಟ್ ದಿ ಲೀಸ್ಟ್.

ನಮ್ಮ ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಮಾರ್ಚ್ 28ಕ್ಕೆ ಮಸ್ತ್ ಮನರಂಜನೆ ಕೊಡೋಕೆ ಬರ್ತಿದೆ. ಭಟ್ರು ಈ ಬಾರಿ ಹೊಚ್ಚ ಹೊಸ ಪ್ರತಿಭೆ ಸುಮುಖ್ ರನ್ನ ಹೀರೋ ಆಗಿ ಲಾಂಚ್ ಮಾಡ್ತಿದ್ದು, ಅದಕ್ಕೆ ಮುಂಗಾರುಮಳೆ ಪ್ರೊಡ್ಯೂಸರ್ ಈ ಕೃಷ್ಣಪ್ಪ ಕೂಡ ಸಾಥ್ ನೀಡ್ತಿದ್ದಾರೆ. ರಾಕಿಭಾಯ್ ಯಶ್ ಲಾಂಚ್ ಮಾಡಿದ ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.

ಹೀಗೆ ಒಟ್ಟೊಟ್ಟಿಗೆ ಐದೈದು ಚಿತ್ರಗಳು ಬರ್ತಿರೋದು ಬಾಕ್ಸ್ ಆಫೀಸ್ ದಂಗಲ್ ಗೆ ಕಾರಣವಾಗ್ತಿದೆ. ಅಷ್ಟೇ ಅಲ್ಲ, ಥಿಯೇಟರ್ ಕ್ಲ್ಯಾಶ್ ಗೂ ಕಾರಣವಾಗ್ತಿದೆ. ಒಂದ್ಕಡೆ ಐಪಿಎಲ್ ಮತ್ತೊಂದ್ಕಡೆ ಈ ಹೈ ವೋಲ್ಟೇಜ್ ಮಾಸ್, ಮಸಾಲ ಎಂಟರ್ ಟೈನರ್ ಗಳು. ಯಾವ್ಯಾವು ಎಷ್ಟೆಷ್ಟು ಕೋಟಿ ದೋಚುತ್ತವೆ. ಅಥ್ವಾ ಲಾಸ್ ಮಾಡ್ಕೊಳುತ್ತವೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ಅದ್ರೆ ಕನ್ನಡಿಗರು ಎಲ್ಲಾ ಚಿತ್ರಗಳಲ್ಲಿ ಬಣ್ಣ ಹಚ್ಚಿರೋದ್ರಿಂದ ಎಲ್ಲಾ ಚಿತ್ರಗಳು ಹಿಟ್ ಆಗಲಿ, ಒಳ್ಳೆಯ ಹೆಸರು ಮಾಡಲಿ ಅನ್ನೋದು ನಮ್ಮ ಗ್ಯಾರಂಟಿ ನ್ಯೂಸ್ ಆಶಯ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
Exit mobile version